ದೇಶ

ಗೋವಾದಲ್ಲಿನ ಶೇ 90 ರಷ್ಟು ಅಪರಾಧಗಳಿಗೆ ವಲಸೆ ಕಾರ್ಮಿಕರೇ ಕಾರಣ: ಮುಖ್ಯಮಂತ್ರಿ ಪ್ರಮೋದ್ ಸಾವಂತ್

Ramyashree GN

ಪಣಜಿ: ಕರಾವಳಿ ರಾಜ್ಯದಲ್ಲಿ ನಡೆಯುವ ಶೇ 90 ರಷ್ಟು ಅಪರಾಧಗಳನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಇತರ ಪ್ರದೇಶಗಳಿಂದ ವಲಸೆ ಬಂದ ಕಾರ್ಮಿಕರು ಮಾಡುತ್ತಾರೆ. ಹೀಗಾಗಿ, ಗುತ್ತಿಗೆದಾರರು ಇವರನ್ನು ನೇಮಿಸಿಕೊಳ್ಳುವ ಮೊದಲು 'ಲೇಬರ್ ಕಾರ್ಡ್'ಗಳನ್ನು ಪಡೆದುಕೊಳ್ಳಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಒತ್ತಾಯಿಸಿದರು.

ಮೇ 1ರಂದು ಪಣಜಿಯಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವಲಸೆ ಕಾರ್ಮಿಕರು ರಾಜ್ಯ ಸರ್ಕಾರ ನೀಡುವ ಕಾರ್ಮಿಕ ಕಾರ್ಡ್ ಅನ್ನು ಹೊಂದಿರಬೇಕು ಎಂದು ಹೇಳಿದರು.

ಖಾಸಗಿ, ಅಸಂಘಟಿತ ಮತ್ತು ಕೈಗಾರಿಕಾ ವಲಯಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗದ ದಾಖಲೆಯನ್ನು ಇರಿಸಿಕೊಳ್ಳಲು ಮತ್ತು ಈ ವರ್ಗಕ್ಕೆ ಕಲ್ಯಾಣ ಕ್ರಮಗಳನ್ನು ವಿಸ್ತರಿಸಲು ಗೋವಾ ಸರ್ಕಾರವು ಕಾರ್ಮಿಕ ಕಾರ್ಡ್‌ಗಳನ್ನು ನೀಡುತ್ತದೆ.

'ಗೋವಾದಲ್ಲಿ ಅಪರಾಧ ಎಸಗಿದ ನಂತರ, ವಲಸೆ ಕಾರ್ಮಿಕರು ಆಗಾಗ್ಗೆ ತಮ್ಮ ರಾಜ್ಯಕ್ಕೆ ಮರಳುತ್ತಾರೆ ಮತ್ತು ಅವರನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಹೀಗಾಗಿ, ಕಾರ್ಮಿಕರ ವಿವರಗಳನ್ನು ಟ್ರ್ಯಾಕ್ ಮಾಡುವುದು ಅವಶ್ಯಕ. ಗೋವಾದಲ್ಲಿ ಸುಮಾರು ಶೇ 90 ರಷ್ಟು ಅಪರಾಧಗಳನ್ನು ಬಿಹಾರ, ಉತ್ತರ ಪ್ರದೇಶ ಮತ್ತು ಇತರ ಪ್ರದೇಶಗಳಿಂದ ವಲಸೆ ಬಂದ ಕಾರ್ಮಿಕರು ಮಾಡುತ್ತಾರೆ' ಎಂದು ಸಾವಂತ್ ಹೇಳಿದರು.

ಎಲ್ಲಾ ಕಾರ್ಮಿಕರಿಗೆ ಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ಎರಡು ಎನ್‌ಜಿಒಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಾರ್ಡ್‌ಗಾಗಿ ಕಾರ್ಮಿಕರನ್ನು ನೋಂದಾಯಿಸುವ ಸೌಲಭ್ಯವನ್ನು ಶೀಘ್ರದಲ್ಲೇ ಆನ್‌ಲೈನ್ ಮಾಡಲಾಗುವುದು ಎಂದು ಘೋಷಿಸಿದರು. 

ಎಲ್ಲಾ ಕಾರ್ಮಿಕರಿಗೆ ಕಾರ್ಡ್‌ಗಳನ್ನು ನೀಡಿದ ನಂತರ, ಡೇಟಾಬೇಸ್ ಅನ್ನು ಪ್ರವೇಶಿಸಲು ಸುಲಭವಾಗುತ್ತದೆ. ಇದು ಪ್ರಕರಣಗಳನ್ನು ತನಿಖೆ ಮಾಡಲು ಮತ್ತು ಅವುಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದರು.

SCROLL FOR NEXT