ಸಲ್ಮಾನ್ ಖಾನ್ 
ದೇಶ

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ: ಆರೋಪಿ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ

ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇಮೇಲ್ ಕಳುಹಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಮುಂಬೈ ಪೊಲೀಸರು ಲುಕ್‌ಔಟ್ ನೋಟಿಸ್ (ಎಲ್‌ಒಸಿ)  ಹೊರಡಿಸಿದ್ದಾರೆ.

ಮುಂಬೈ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇಮೇಲ್ ಕಳುಹಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಮುಂಬೈ ಪೊಲೀಸರು ಲುಕ್‌ಔಟ್ ನೋಟಿಸ್ (ಎಲ್‌ಒಸಿ)  ಹೊರಡಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಆ ವ್ಯಕ್ತಿ ಮಾರ್ಚ್‌ನಲ್ಲಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೆಸರಿನಲ್ಲಿ 'ದಬಾಂಗ್' ಸ್ಟಾರ್‌ಗೆ ಬೆದರಿಕೆ ಸಂದೇಶಗಳನ್ನು ಇಮೇಲ್ ಮಾಡಿದ್ದಾನೆ.

ಬಹಳ ದಿನಗಳಿಂದ ಇಂತದ್ದೇ ಜೀವ ಬೆದರಿಕೆಯನ್ನ ಎದುರಿಸುತ್ತಿರುವ ಸಲ್ಮಾನ್, ಅದನ್ನು ಹೇಗೆ ಎದುರಿಸುತ್ತಿದ್ದೇನೆ ಎಂಬುದನ್ನ ಇತ್ತೀಚೆಗಷ್ಟೇ ತೆರೆದಿಟ್ಟಿದ್ದಾರೆ. ಇಂಡಿಯಾ ಟಿವಿ ಶೋ 'ಆಪ್ ಕಿ ಅದಾಲತ್' ನಲ್ಲಿ ಕಾಣಿಸಿಕೊಂಡಾಗ, ಸಲ್ಮಾನ್ ಅವರು ಜೀವ ಬೆದರಿಕೆಯ ನಡುವೆ ಮುಂಬೈ ಪೊಲೀಸರಿಂದ ಪಡೆದ Y+ ವರ್ಗದ ಭದ್ರತೆಯ ಬಗ್ಗೆ ಮಾತನಾಡಿದರು.

'ಅಭದ್ರತೆಗಿಂತ ಭದ್ರತೆಯೇ ಮೇಲು. ಹೌದು ಭದ್ರತೆ ಇದೆ. ಈಗ ರಸ್ತೆಯಲ್ಲಿ ಸೈಕಲ್ ತುಳಿಯಲು ಮತ್ತು ಒಬ್ಬಂಟಿಯಾಗಿ ಎಲ್ಲಿಗೂ ಹೋಗುವಂತಿಲ್ಲ. ಅದಕ್ಕಿಂತ ಹೆಚ್ಚಾಗಿ ನನಗೆ ಈ ಸಮಸ್ಯೆ ಇರುವುದೆಂದರೆ, ನಾನು ಟ್ರಾಫಿಕ್‌ನಲ್ಲಿದ್ದಾಗ, ಹೆಚ್ಚಿನ ಭದ್ರತೆ, ವಾಹನಗಳು ಇತರ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತವೆ. ಅವರು ನನಗೆ ಒಂದು ಲುಕ್ ಅನ್ನು ನೀಡುತ್ತಾರೆ. ನನ್ನ ಬಡ ಅಭಿಮಾನಿಗಳಿಗೂ ಸಮಸ್ಯೆಯಾಗುತ್ತದೆ. ಗಂಭೀರ ಬೆದರಿಕೆ ಇದ್ದು, ಅದಕ್ಕಾಗಿಯೇ ಭದ್ರತೆ ಇದೆ. ನನ್ನ ಸುತ್ತಲೂ 'ಹಲವು ಬಂದೂಕುಗಳನ್ನು' ನೋಡಿದಾಗ ನನಗೆ ಆಗಾಗ್ಗೆ ಹೆದರಿಕೆಯಾಗುತ್ತದೆ' ಎಂದು ಅವರು ಹೇಳಿದರು.

'ನಾನು ಸಂಪೂರ್ಣ ಭದ್ರತೆಯೊಂದಿಗೆ ಎಲ್ಲೆಡೆ ಹೋಗುತ್ತಿದ್ದೇನೆ. ನೀವು ಏನು ಮಾಡಿದರೂ ಏನಾಗುವುದೋ ಅದು ಸಂಭವಿಸುತ್ತದೆ ಎಂದು ನನಗೆ ತಿಳಿದಿದೆ. ದೇವರಿದ್ದಾನೆ ಎಂಬುದನ್ನು ನಾನು ನಂಬುತ್ತೇನೆ. ಹೀಗಂದ ಮಾತ್ರಕ್ಕೆ, ನಾನು ಮುಕ್ತವಾಗಿ ತಿರುಗಾಡಲು ಪ್ರಾರಂಭಿಸುತ್ತೇನೆ ಎಂದರ್ಥವಲ್ಲ. ಈಗ ನನ್ನ ಸುತ್ತಲೂ ಅನೇಕ ಶೆರಾಗಳು ಇದ್ದಾರೆ, ನನ್ನೊಂದಿಗೆ ಅನೇಕ ಬಂದೂಕುಗಳು ಸುತ್ತಾಡುತ್ತಿವೆ. ಈ ದಿನಗಳಲ್ಲಿ ನಾನು ಹೆದರುತ್ತೇನೆ' ಎಂದು ಸಲ್ಮಾನ್ ಹಂಚಿಕೊಂಡಿದ್ದಾರೆ.

ಈಮಧ್ಯೆ, ಸಲ್ಮಾನ್ ಅವರು 'ಟೈಗರ್ 3' ನಲ್ಲಿ ಕತ್ರಿನಾ ಕೈಫ್ ಅವರೊಂದಿಗೆ ನಟಿಸುತ್ತಿದ್ದಾರೆ. ಇದು ಈ ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT