ದೇಶ

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ: ಮುಂದಿನ ಐದು ವರ್ಷ ಜನರ ಹೃದಯ ಗೆಲ್ಲಬೇಕು: ಕಪಿಲ್ ಸಿಬಲ್

Nagaraja AB

ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ  ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಮುಕ್ತ, ಪ್ರಾಮಾಣಿಕ ಮತ್ತು ತಾರತಮ್ಯರಹಿತವಾಗಿ ಆಡಳಿತ ನಡೆಸುವ ಮೂಲಕ ಜನರ ಹೃದಯ ಗೆಲ್ಲಬೇಕು ಎಂದು ಒತ್ತಾಯಿಸಿದ್ದಾರೆ. 

ಈ ಕುರಿತು ಇಂದು ಟ್ವೀಟ್ ಮಾಡಿರುವ ಸಿಬಲ್, "ಕರ್ನಾಟಕ ಚುನಾವಣೆ ಗೆಲ್ಲುವುದು ಕಠಿಣ. ಜನರ ಹೃದಯ ಗೆಲ್ಲುವುದು ಕಠಿಣ! ಮುಂದಿನ 5 ವರ್ಷಗಳ ಕಾಲ ಮುಕ್ತ, ಪ್ರಾಮಾಣಿಕ, ತಾರತಮ್ಯರಹಿತರಾಗಿ ಜನರ ಹೃದಯ ಗೆಲ್ಲಿರಿ" ಎಂದು ಸಲಹೆ ನೀಡಿದ್ದು, ಇದ್ಯಾವುದೂ ಇಲ್ಲದ ಕಾರಣ ಬಿಜೆಪಿ ಸೋತಿದೆ ಎಂದಿದ್ದಾರೆ. 

ಚುನಾವಣಾ ಫಲಿತಾಂಶ ಬಗ್ಗೆ ನಿನ್ನೆಯೂ ಟ್ವೀಟ್ ಮಾಡಿದ್ದ ಸಿಬಲ್, ಪ್ರಧಾನಿ ಸೋತರು, ಕರ್ನಾಟಕದ ಜನರು ಗೆದ್ದಿದ್ದಾರೆ. ಇಲ್ಲ: 40% ಭ್ರಷ್ಟಾಚಾರ, ಕೇರಳ ಕಥೆ, ವಿಭಜಕ ರಾಜಕೀಯ, ದುರಹಂಕಾರ, ಸುಳ್ಳು, ಕಾಂಗ್ರೆಸ್ ಗೆಲುವಿಗೆ ನೆರವಾಗಿವೆ ಎಂದು ಅವರು ಹೇಳಿದ್ದರು.

ಯುಪಿಎ 1 ಮತ್ತು 2 ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 
 

SCROLL FOR NEXT