ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಮಿಷನ್ ಯೋಜನೆ ಗಗನ್ ಯಾನ್ (ಸಾಂಕೇತಿಕ ಚಿತ್ರ) 
ದೇಶ

ವರ್ಷಾಂತ್ಯ ಅಥವಾ 2024 ಕ್ಕೆ ಗಗನ್ ಯಾನ್ ಮಿಷನ್: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಭಾರತದ ಮಾನವ ರಹಿತ ಗಗನಯಾನ ಬಾಹ್ಯಾಕಾಶ ನೌಕೆ ಉಡಾವಣೆಯ ಯೋಜನೆಯನ್ನು ವರ್ಷಾಂತ್ಯ ಅಥವಾ 2024 ಕ್ಕೆ ಜಾರಿ ಮಾಡಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 

ನವದೆಹಲಿ: ಭಾರತದ ಮಾನವ ರಹಿತ ಗಗನಯಾನ ಬಾಹ್ಯಾಕಾಶ ನೌಕೆ ಉಡಾವಣೆಯ ಯೋಜನೆಯನ್ನು ವರ್ಷಾಂತ್ಯ ಅಥವಾ 2024 ಕ್ಕೆ ಜಾರಿ ಮಾಡಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 

ಇದು ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆಗೂ ಮುನ್ನ ನಡೆಯುವ ಪ್ರಕ್ರಿಯೆಯಾಗಿದ್ದು ವ್ಯೋಮ ಮಿತ್ರ ಎಂಬ ಲೇಡಿ ರೋಬೋಟ್ ನ್ನು ಕಳಿಸಲಾಗುತ್ತದೆ.

ಮೊದಲ ಮಿಷನ್ ಸಂಪೂರ್ಣ ಮಾನವ ರಹಿತವಾಗಿರಲಿದ್ದು, ಎರಡನೆಯ ಮಿಷನ್ ನಲ್ಲಿ ವ್ಯೋಮ ಮಿತ್ರ ಎಂಬ ಲೇಡಿ ರೋಬೋವನ್ನು ಕಳಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಗಗನ್ ಯಾನ್ ಯೋಜನೆಯ ಪ್ರಗತಿಯ ಬಗ್ಗೆ ತಿಳಿಸಿರುವ ಸಚಿವರು,  ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಭಾರತೀಯ ಮಿಷನ್‌ಗೆ ಹೋಗಲಿದ್ದಾರೆ ಎಂದು ಹೇಳಿದರು. "ರಾಕೇಶ್ ಶರ್ಮಾ ಮಿಷನ್‌ ಗೆ ಹೋಗಿದ್ದರು ಆದರೆ ಇದು ರಷ್ಯಾದ ಮಿಷನ್ ಆಗಿತ್ತು. ಇದು ಭಾರತದ ಗಗನಯಾನವಾಗಿದ್ದು, ಸ್ಥಳೀಯ ತಾಂತ್ರಿಕ ಜ್ಞಾನ ಮತ್ತು ಸ್ಥಳೀಯ ನಿಧಿಯೊಂದಿಗೆ ಸ್ಥಳೀಯ ಮಿಷನ್ ಆಗಿದೆ. ಈ ಯೋಜನೆಗೆ ಹಣ ಲಭ್ಯವಾಗುವಂತೆ ಮಾಡಿದ್ದಕ್ಕಾಗಿ ನಾವು ಪ್ರಧಾನಿಗೆ ಧನ್ಯವಾದ ಹೇಳಬೇಕು. COVID-19 ಕಾರಣಕ್ಕಾಗಿ ಮಿಷನ್ ವಿಳಂಬವಾಯಿತು ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ; ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನ

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

ಬೀಡಿಗಳಿಗೆ ಬಿಹಾರದ ಹೋಲಿಕೆ: ಕೇರಳ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥನ ತಲೆದಂಡ

ಇಸ್ರೇಲ್ ದಾಳಿಗೆ ಗಾಜಾ ನಗರದ ಬಹುಮಹಡಿ ಕಟ್ಟಡ ನೆಲಸಮ; ದಾಳಿಗೂ ಮುನ್ನ ನಿವಾಸಿಗಳ ಸ್ಥಳಾಂತರ!

Gujarat: ಪಾವಗಡ ಬೆಟ್ಟದ ದೇವಾಲಯದಲ್ಲಿ ರೋಪ್‌ವೇ ದುರಂತ; 6 ಮಂದಿ ಸಾವು: video

SCROLL FOR NEXT