ನವದೆಹಲಿ: ಕೇಂದ್ರ ಭೂ ವಿಜ್ಞಾನ ಸಚಿವರಾಗಿ ಕಿರಣ್ ರಿಜಿಜು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅವರನ್ನು ನಿನ್ನೆ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಮುಕ್ತಗೊಳಿಸಿ, ಭೂ ವಿಜ್ಞಾನ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ.
ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ರಿಜಿಜು, ‘‘ಪ್ರತಿಪಕ್ಷಗಳು ನನ್ನನ್ನು ಖಂಡಿತಾ ಟೀಕಿಸುತ್ತವೆ. ವಿಪಕ್ಷಗಳಿಗೆ ನನ್ನ ವಿರುದ್ಧ ಮಾತನಾಡುವುದು ಹೊಸದೇನಲ್ಲ... ಪ್ರತಿಪಕ್ಷಗಳು ನಹಿಂ ಕರೇಂಗೆ ತೋ ಕ್ಯಾ ತರೀಫ್ ಕರೇಂಗೆ ಎಂದು ಟೀಕಿಸುತ್ತಾರೆ ಎಂದರು.
ಇದನ್ನೂ ಓದಿ: ರಾಜಸ್ಥಾನದಲ್ಲಿ ದಲಿತ ಮತಗಳ ಮೇಲೆ ಬಿಜೆಪಿ ಕಣ್ಣು: ಅರ್ಜುನ್ ರಾಮ್ ಮೇಘವಾಲ್ ಗೆ ನೂತನ ಕಾನೂನು ಸಚಿವ ಪಟ್ಟ!
ಈ ಸ್ಥಳಾಂತರ ಶಿಕ್ಷೆಯಲ್ಲ, ಇದು ಸರ್ಕಾರದ ಯೋಜನೆ, ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿ" ಎಂದು ಕಿರಣ್ ರಿಜಿಜು ಹೇಳಿದರು.