ನೂತನ ಸಂಸತ್ತು ಭವನದ ಪಕ್ಷಿನೋಟ 
ದೇಶ

ನೂತನ ಸಂಸತ್ತು ಭವನ ಉದ್ಘಾಟನೆ, ತಮಿಳು ನಾಡಿನ 20 ಮಂದಿ ಅರ್ಚಕರಿಂದ ಧಾರ್ಮಿಕ ವಿಧಿವಿಧಾನ

ಇದೇ ಮೇ 28 ರಂದು ಹೊಸ ಸಂಸತ್ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ 20 ಮಂದಿ ಅರ್ಚಕರನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ರಿಟಿಷರಿಂದ 1947ರಲ್ಲಿ ಅಧಿಕಾರ ಹಸ್ತಾಂತರದ ಪ್ರತೀಕವಾಗಿದ್ದ ಸೆಂಗೋಲ್ ನ್ನು ಅಂದು ಸ್ಥಾಪಿಸಲಾಗುವುದು ಎಂದು ಹೇಳಿದರು. 

ನವದೆಹಲಿ: ಇದೇ ಮೇ 28 ರಂದು ಹೊಸ ಸಂಸತ್ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ 20 ಮಂದಿ ಅರ್ಚಕರನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ರಿಟಿಷರಿಂದ 1947ರಲ್ಲಿ ಅಧಿಕಾರ ಹಸ್ತಾಂತರದ ಪ್ರತೀಕವಾಗಿದ್ದ ಸೆಂಗೋಲ್ ನ್ನು ಅಂದು ಸ್ಥಾಪಿಸಲಾಗುವುದು ಎಂದು ಹೇಳಿದರು. 

ತಮಿಳುನಾಡು, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಪಾಲರೊಂದಿಗೆ ಚೆನ್ನೈನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ಹಸ್ತಾಂತರವನ್ನು ಸಂಕೇತಿಸುವ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸೆಂಗೋಲ್ ರಾಜದಂಡ ಹಸ್ತಾಂತರಿಸುವ ಸಂಚಿಕೆಯಲ್ಲಿ ತಮಿಳುನಾಡಿಗೆ ದೊಡ್ಡ ಹೆಮ್ಮೆಯ ಭಾಗ ಇದೆ ಎಂದು ಹೇಳಿದರು.

1947 ರಲ್ಲಿ ಬ್ರಿಟಿಷರಿಂದ ಭಾರತದ ಜನತೆಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ದಿವಂಗತ ಸಿಆರ್ ರಾಜಗೋಪಾಲಾಚಾರಿ ಅವರು ನೆಹರು ಅವರ ಸಮಾಲೋಚನೆಯ ನಂತರ ಶೈವ ಮಠಾಧೀಶರೊಂದಿಗೆ ಚರ್ಚಿಸಿ ತಿರುವವಡುತುರೈ ಅಧೀನಂ ಅವರ ಸಲಹೆಯ ಮೇರೆಗೆ ಮಾಡಲಾಗಿತ್ತು ಎಂದರು. 

ಮೇ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಸಂದರ್ಭದಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಸೆಂಗೋಲ್ ನ್ನು ಸ್ಥಾಪಿಸಲಾಗುವುದು, ಈ ಕಾರ್ಯಕ್ರಮಕ್ಕೆ ತಿರುವವಾಡುತುರೈ, ಪೇರೂರ್ ಮತ್ತು ಮಧುರೈ ಸೇರಿದಂತೆ ತಮಿಳುನಾಡಿನ 20 ಅರ್ಚಕರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು. 

ತಮಿಳಿನಲ್ಲಿ, 'ಆದೀನಂ' ಎಂಬ ಪದವು ಶೈವ ಮಠ ಮತ್ತು ಮಠದ ಮುಖ್ಯಸ್ಥ ಎರಡನ್ನೂ ಸೂಚಿಸುತ್ತದೆ. ಮಠಾಧೀಶರು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ, ತೇವರಂನ್ನು ಪಠಿಸುವ ಓದುವರ್‌ಗಳು (ಶೈವ ಧರ್ಮಗ್ರಂಥಗಳು ಮತ್ತು ಸ್ತೋತ್ರಗಳಲ್ಲಿ ವಿದ್ವಾಂಸರು) ಇರುತ್ತಾರೆ. 1947 ರಲ್ಲಿ ಓತುವರ್ಗಳು ಕೋಲಾರು ಪಥಿಗಂನ್ನು ಪಠಿಸಿದಾಗ ಸೆಂಗೋಲನ್ನು ನೆಹರೂಗೆ ಹಸ್ತಾಂತರಿಸಲಾಯಿತು ಎಂದರು. 

ಅದೇ ಸೆಂಗೋಲನ್ನು ಲೋಕಸಭೆಯ ಸ್ಪೀಕರ್ ಕುರ್ಚಿಯ ಬಳಿ ಅತ್ಯಂತ ಗೌರವದಿಂದ ಸ್ಥಾಪಿಸಲಾಗುವುದು. ಇದು "ನ್ಯಾಯದೊಂದಿಗೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಆಡಳಿತವನ್ನು" ಸಂಕೇತಿಸುತ್ತದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT