ದೇಶ

ಸುಪ್ರೀಂ ಕೋರ್ಟ್ ತಾರೀಖಿನಿಂದ ತಾರೀಖಿಗೆ ಮುಂದೂಡುವ ಕೋರ್ಟ್ ಆಗುವುದನ್ನು ಬಯಸುವುದಿಲ್ಲ: ಸಿಜೆಐ ಚಂದ್ರಚೂಡ್

Srinivas Rao BV

ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ಪದೇ ಪದೇ ಪ್ರಕರಣಗಳ ವಿಚಾರಣೆ ಮುಂದೂಡಿಕೆ ಕೇಳದಂತೆ ವಕೀಲರಿಗೆ ಸಲಹೆ ನೀಡಿರುವ ಸಿಜೆಐ ಡಿ ವೈ ಚಂದ್ರಚೂಡ್, ಸುಪ್ರೀಂ ಕೋರ್ಟ್ ತಾರೀಖಿನಿಂದ ತಾರೀಖಿನ ಕೋರ್ಟ್ ಆಗುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
 
ಈ ರೀತಿಯಲ್ಲಿ ಪ್ರಕರಣಗಳ ವಿಚಾರಣೆಯನ್ನು ಮುಂದೂಡುವುದರಿಂದ ಕೋರ್ಟ್ ಗಳ ಬಗ್ಗೆ ಜನರಿಗೆ ಇರುವ ನಂಬಿಕೆಗೆ ಪೆಟ್ಟು ಬೀಳುತ್ತದೆ ಎಂದು ಸಿಜೆಐ ಹೇಳಿದ್ದಾರೆ.

ಕಳೆದ ತಿಂಗಳಲ್ಲಿ 3,688 ಪ್ರಕರಣಗಳಲ್ಲಿ ಅಡ್ವೊಕೇಟ್ ಗಳು ಮುಂದೂಡಿಕೆಯನ್ನು ಕೇಳಿದ್ದಾರೆ ಎಂಬ ಮಾಹಿತಿಯನ್ನು ಸಿಜೆಐ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ತರುವ ಜವಾಬ್ದಾರಿ ಸಂಸತ್ತಿನದ್ದು, ನ್ಯಾಯಾಲಯ ಕೇವಲ ವ್ಯಾಖ್ಯಾನಿಸಬಹುದು: ಸಿಜೆಐ ಚಂದ್ರಚೂಡ್
 
"ತುಂಬಾ ಅವಶ್ಯಕವಲ್ಲದಿದ್ದರೆ, ದಯವಿಟ್ಟು ಮುಂದೂಡುವ ಅರ್ಜಿಗಳನ್ನು ಸಲ್ಲಿಸಬೇಡಿ. ಈ ನ್ಯಾಯಾಲಯವು 'ತಾರೀಖಿನಿಂದ ತಾರೀಖಿನ ನ್ಯಾಯಾಲಯವಾಗುವುದು ನನಗೆ ಇಷ್ಟವಿಲ್ಲ" ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಅವರೊಂದಿಗೆ ಪೀಠವನ್ನು ಹಂಚಿಕೊಂಡ ಸಿಜೆಐ ಮತ್ತು ಮನೋಜ್ ಮಿಶ್ರಾ ಹೇಳಿದ್ದಾರೆ.

"ಒಂದೆಡೆ, ಪ್ರಕರಣಗಳ ಪಟ್ಟಿಯನ್ನು ತ್ವರಿತಗೊಳಿಸಲಾಗುತ್ತದೆ ಮತ್ತು ಮತ್ತೊಂದೆಡೆ, ಅವುಗಳನ್ನು ಮೊದಲು ಪಟ್ಟಿಗೆ ಸೇರಿಸಲು ಕೋರಿ ಉಲ್ಲೇಖಿಸಲಾಗುತ್ತದೆ ಮತ್ತು ನಂತರ ಅವುಗಳನ್ನು ಮುಂದೂಡಲಾಗುತ್ತದೆ. ಪ್ರಕರಣಗಳನ್ನು ಅನಗತ್ಯವಾಗಿ ಮುಂದೂಡಲು ನಾನು ಬಾರ್‌ನ ಸದಸ್ಯರನ್ನು ನಿಜವಾಗಿಯೂ ಕೋರುವುದಿಲ್ಲ. ಈ ರೀತಿಯಾದರೆ ನಮ್ಮ ನ್ಯಾಯಾಲಯದ ಮೇಲಿನ ನಾಗರಿಕರ ನಂಬಿಕೆಯನ್ನು ಸೋಲಿಸುತ್ತದೆ" ಎಂದು ಸಿಜೆಐ ಹೇಳಿದ್ದಾರೆ.

SCROLL FOR NEXT