ರಾಘವ್ ಚಡ್ಡಾ 
ದೇಶ

ಚಡ್ಡಾ ಕ್ಷಮೆ ಪರಿಗಣಿಸುವಂತೆ ರಾಜ್ಯಸಭಾಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ಸಲಹೆ

ಆಮ್ ಆದ್ಮಿ ಪಕ್ಷದ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಕ್ಷಮೆಯನ್ನು ಪರಿಗಣಿಸುವಂತೆ ರಾಜ್ಯಸಭಾಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ನವದೆಹಲಿ: ಆಮ್ ಆದ್ಮಿ ಪಕ್ಷದ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಕ್ಷಮೆಯನ್ನು ಪರಿಗಣಿಸುವಂತೆ ರಾಜ್ಯಸಭಾಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. 

ರಾಜ್ಯಸಭೆಯಲ್ಲಿ  ದುರ್ನಡತೆ ಹಿನ್ನೆಲೆಯಲ್ಲಿ ಚಡ್ಡಾ ಅವರನ್ನು ರಾಜ್ಯಸಭಾಧ್ಯಕ್ಷರೂ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅಮಾನತುಗೊಳಿಸಿದ್ದರು.

ಈಗ ರಾಘವ್ ಚಡ್ಡಾ ಬೇಷರತ್ ಕ್ಷಮೆ ಕೋರುವುದಕ್ಕೆ ಸಿದ್ಧರಿದ್ದು ಅದನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯಸಭಾಧ್ಯಕ್ಷರಿಗೆ ಸಲಹೆ ನೀಡಿದೆ. 

ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ, 2023 ಗಾಗಿ ಪ್ರಸ್ತಾವಿತ ಆಯ್ಕೆ ಸಮಿತಿಯಲ್ಲಿ ಕೆಲವು ಸದಸ್ಯರ ಹೆಸರನ್ನು ಸೇರಿಸಲು ಚಡ್ಡಾ ಅವರ ಅಮಾನತುವನ್ನು ಧನ್ಕರ್ ತೆರವುಗೊಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಆದೇಶದಲ್ಲಿ, ಚಡ್ಡಾ, ಕಿರಿಯ ಸದಸ್ಯರಾಗಿರುವುದರಿಂದ ಕ್ಷಮೆಯಾಚಿಸುವಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದು, ಮೇಲ್ಮನೆಯು ಅವರನ್ನು ಮತ್ತೆ ಸೇರಿಸಿಕೊಳ್ಳುವುದನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಸೂಚನೆ ನೀಡಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಈ ವಿಷಯದ ಮುಂದಿನ ಬೆಳವಣಿಗೆಯ ಬಗ್ಗೆ ಪೀಠಕ್ಕೆ ತಿಳಿಸಿದಾಗ ದೀಪಾವಳಿ ವಿರಾಮದ ನಂತರ ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ವಿಚಾರಣೆ ನಡೆಸುವುದಾಗಿ ಹೇಳಿದೆ. ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ಕ್ಷಮೆಯಾಚನೆಗೆ ಸಂಬಂಧಿಸಿದ ಹಿಂದಿನ ಅಭಿಪ್ರಾಯಗಳನ್ನು ನೆನಪಿಸಿಕೊಂಡರು.

"ಚಡ್ಡಾ ಅವರು ಕ್ಷಮೆಯಾಚಿಸಲು ಸಿದ್ಧರಿದ್ದರೆ, ಗೌರವಾನ್ವಿತ ಹಿರಿಯರಾಗಿರುವ ಅಧ್ಯಕ್ಷರು ನಾವು ಅವರನ್ನು ಎಷ್ಟು ದಿನ ಅಮಾನತುಗೊಳಿಸಬಹುದು ಎಂಬುದನ್ನು ನೋಡಬಹುದು ಎಂದು ನಾನು ಕಳೆದ ಬಾರಿ ಹೇಳಿದ್ದೆ" ಎಂದು ಸಿಜೆಐ ಹೇಳಿದ್ದಾರೆ.

"ನೀವು ಈಗಾಗಲೇ ಆರು ಬಾರಿ ಕ್ಷಮೆಯಾಚಿಸಿದ್ದೀರಿ. ಆದರೆ ನೀವು ಅಧ್ಯಕ್ಷರೊಂದಿಗೆ ಅಪಾಯಿಂಟ್‌ಮೆಂಟ್ ಪಡೆಯಲು ಮತ್ತು ಅಧ್ಯಕ್ಷರನ್ನು ಭೇಟಿ ಮಾಡಲು ಸಿದ್ಧರಿದ್ದೀರಾ, ಕ್ಷಮೆಯಾಚಿಸಲು ಬಯಸುವಿರಾ?" ಎಂದು ಚಡ್ಡಾ ಅವರನ್ನು ಕೋರ್ಟ್ ಪ್ರಶ್ನಿಸಿದೆ. 

ಇದಕ್ಕೆ ಎಎಪಿ ನಾಯಕನನ್ನು ಪ್ರತಿನಿಧಿಸಿದ ವಕೀಲ ಶಾದನ್ ಫರಾಸತ್ ಪ್ರತಿಕ್ರಿಯೆ ನೀಡಿದ್ದು, ಸದನದ ಅತ್ಯಂತ ಕಿರಿಯ ಸದಸ್ಯರಾಗಿರುವುದರಿಂದ ಕ್ಷಮೆಯಾಚಿಸಲು ಚಡ್ಡಾ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT