ಬಿಜೆಪಿ 
ದೇಶ

ರಾಜಸ್ಥಾನ ವಿಧಾನಸಭೆ ಚುನಾವಣೆ: 15 ಅಭ್ಯರ್ಥಿಗಳಿರುವ ಐದನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!

ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲವು ಹೊಸ ಮುಖಗಳನ್ನು ಒಳಗೊಂಡಿರುವ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ. ಪಕ್ಷವು ಮಾವ್ಲಿ (ಉದಯಪುರ) ಕ್ಷೇತ್ರದ ಹಾಲಿ ಶಾಸಕ ಧರ್ಮನಾರಾಯಣ ಜೋಶಿ ಅವರನ್ನು ಕೈಬಿಟ್ಟು ಬದಲಿಗೆ ಕೆಜಿ ಪಲಿವಾಲ್ ಅವರನ್ನು ಕಣಕ್ಕಿಳಿಸಿದೆ.

ಜೈಪುರ: ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕೆಲವು ಹೊಸ ಮುಖಗಳನ್ನು ಒಳಗೊಂಡಿರುವ 15 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ.

ಪಕ್ಷವು ಮಾವ್ಲಿ (ಉದಯಪುರ) ಕ್ಷೇತ್ರದ ಹಾಲಿ ಶಾಸಕ ಧರ್ಮನಾರಾಯಣ ಜೋಶಿ ಅವರನ್ನು ಕೈಬಿಟ್ಟು ಬದಲಿಗೆ ಕೆಜಿ ಪಲಿವಾಲ್ ಅವರನ್ನು ಕಣಕ್ಕಿಳಿಸಿದೆ.

ಪಕ್ಷದಿಂದ ಕಣಕ್ಕಿಳಿದಿರುವ ಹೊಸ ಮುಖಗಳಲ್ಲಿ ಸಿವಿಲ್ ಲೈನ್ಸ್‌ನಿಂದ ಗೋಪಾಲ್ ಶರ್ಮಾ ಮತ್ತು ಆದರ್ಶ ನಗರದಿಂದ ರವಿ ನಯ್ಯರ್ ಸೇರಿದ್ದಾರೆ.

ನವೆಂಬರ್ 2 ರಂದು ಬಿಡುಗಡೆಯಾದ ಮೂರನೇ ಪಟ್ಟಿಯಲ್ಲಿ ಮಾಜಿ ಸಚಿವ ದೇವಿ ಸಿಂಗ್ ಭಾಟಿ ಅವರ ಸೊಸೆ ಪೂನಂ ಕನ್ವರ್ ಭಾಟಿ ಹೆಸರನ್ನು ಪಕ್ಷ ಘೋಷಿಸಿತ್ತು.

ಆದಾಗ್ಯೂ, ಹೊಸ ಪಟ್ಟಿಯಲ್ಲಿ, ಪೂನಂ ಕನ್ವರ್ ಭಾಟಿ ಬದಲಿಗೆ ಅವರ ಮಗ ಅಂಶುಮಾನ್ ಸಿಂಗ್ ಭಾಟಿ ಅವರನ್ನು ಕೊಲಾಯತ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. 

ಅಮಿತ್ ಚೌಧರಿ ಹನುಮಾನ್‌ಗಢದಿಂದ, ಚಂದ್ರಮೋಹನ್ ಬಟ್ವಾಡ ಅವರು ಕಿಶನ್‌ಪೋಲ್‌ನಿಂದ, ವಿಜಯ್ ಬನ್ಸಾಲ್ ಭರತ್‌ಪುರದಿಂದ, ಮಾಜಿ ಶಾಸಕರಾದ ರಾಜ್‌ಕುಮಾರ್ ರಿನ್ವಾ ಸರ್ದರ್ಶಹರ್‌ನಿಂದ, ಪ್ರಹ್ಲಾದ್ ಗುಂಜಾಲ್ ಕೋಟಾ ಉತ್ತರದಿಂದ ಮತ್ತು ಬಾಬು ಸಿಂಗ್ ರಾಥೋಡ್ ಶೇರ್‌ಗಢದಿಂದ ಕಣಕ್ಕಿಳಿದಿದ್ದಾರೆ. ಶಹಪುರ, ರಾಜಖೇರಾ, ಮಸುದಾ, ಪಿಪಾಲ್ಡಾ ಮತ್ತು ಬರನ್-ಅಟ್ರು ಸ್ಥಾನಗಳಿಗೆ ಕೂಡ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಈ ಐದನೇ ಪಟ್ಟಿಯೊಂದಿಗೆ ಪಕ್ಷವು ಇದುವರೆಗೆ ರಾಜ್ಯದ 200 ಸ್ಥಾನಗಳ ಪೈಕಿ 198 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 6 ಕೊನೆಯ ದಿನವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT