ಭಾರತಕ್ಕೆ ಪಲಾಯನ ಮಾಡಿದ್ದ ಮ್ಯಾನ್ಮಾರ್ ಯೋಧರು 
ದೇಶ

ಬಂಡುಕೋರರ ತೀವ್ರ ಗುಂಡಿನ ದಾಳಿ; ಭಾರತಕ್ಕೆ ಪಲಾಯನ ಮಾಡಿದ್ದ 29 ಮ್ಯಾನ್ಮಾರ್ ಯೋಧರ ಹಸ್ತಾಂತರ!

ಮ್ಯಾನ್ಮಾರ್ ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷದಿಂದಾಗಿ ಬಂಡುಕೋರರು ಮತ್ತು ಮ್ಯಾನ್ಮಾರ್ ಸೇನೆ ನಡುವಿನ ಕಾಳಗ ಮುಂದುವರೆದಿರುವಂತೆಯೇ ಭಾರತಕ್ಕೆ ಪಲಾಯನ ಮಾಡಿದ್ದ 29 ಮ್ಯಾನ್ಮಾರ್ ಯೋಧರನ್ನು ಭಾರತೀಯ ಸೇನೆ ಹಸ್ತಾಂತರಿಸಿದೆ.

ನವದೆಹಲಿ: ಮ್ಯಾನ್ಮಾರ್ ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷದಿಂದಾಗಿ ಬಂಡುಕೋರರು ಮತ್ತು ಮ್ಯಾನ್ಮಾರ್ ಸೇನೆ ನಡುವಿನ ಕಾಳಗ ಮುಂದುವರೆದಿರುವಂತೆಯೇ ಭಾರತಕ್ಕೆ ಪಲಾಯನ ಮಾಡಿದ್ದ 29 ಮ್ಯಾನ್ಮಾರ್ ಯೋಧರನ್ನು ಭಾರತೀಯ ಸೇನೆ ಹಸ್ತಾಂತರಿಸಿದೆ.

ಹೌದು.. ಮಿಲಿಷಿಯಾ ಗುಂಪಿನ ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ನೊಂದಿಗೆ ತೀವ್ರವಾದ ಗುಂಡಿನ ಚಕಮಕಿಯ ನಂತರ ಮಿಜೋರಾಂಗೆ ಪಲಾಯನ ಮಾಡಿದ್ದ 29 ಮ್ಯಾನ್ಮಾರ್ ಸೈನಿಕರನ್ನು ಭಾನುವಾರ ತಮ್ಮ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ 29 ಸೈನಿಕರು ನವೆಂಬರ್ 16 ರಂದು ಮ್ಯಾನ್ಮಾರ್‌ನ ಚಿನ್ ರಾಜ್ಯದ ತುಬುಯಲ್‌ನಲ್ಲಿ PDF ನೊಂದಿಗೆ ಸಂಯೋಜಿತವಾಗಿರುವ ಸ್ಥಳೀಯ ಮಿಲಿಟಿಯಾ ಗುಂಪು ತಮ್ಮ ಶಿಬಿರವನ್ನು ಅಂತಾರಾಷ್ಟ್ರೀಯ ಗಡಿಯಿಂದ ಕೆಲವು ಕಿಮೀ ದೂರದಲ್ಲಿ ಚಿನ್ ನ್ಯಾಷನಲ್ ಡಿಫೆನ್ಸ್ ಫೋರ್ಸ್ (CNDF) ನಿಂದ ಆಕ್ರಮಿಸಿಕೊಂಡ ನಂತರ ಅಲ್ಲಿಂದ ಪಲಾಯನ ಮಾಡಿ ಭಾರತದ ಮಿಜೋರಾಂ ಅನ್ನು ಪ್ರವೇಶಿಸಿದ್ದರು.

"ಈ ಸೈನಿಕರನ್ನು ರಕ್ಷಣಾ ಅಧಿಕಾರಿಗಳು ಮಣಿಪುರದ ಮೊರೆಹ್‌ಗೆ ವಿಮಾನದಲ್ಲಿ ಕರೆದೊಯ್ದರು. ಅವರು ಮೊರೆಹ್‌ನಿಂದ ಹತ್ತಿರದ ಮ್ಯಾನ್ಮಾರೀಸ್ ಪಟ್ಟಣವಾದ ತಮುಗೆ ತೆರಳಿ ಅಲ್ಲಿನ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ನಿರಂತರ ಮಳೆಯು ಪ್ರಕ್ರಿಯೆಯನ್ನು ಅಡ್ಡಿಪಡಿಸಿತು, ಇದು ಭಾರತದಲ್ಲಿ ಅವರ ವಾಸ್ತವ್ಯವನ್ನು ದೀರ್ಘಗೊಳಿಸಿತು ಎಂದು ಅಧಿಕಾರಿ ತಿಳಿಸಿದರು.

ಇತ್ತೀಚಿನ ಗುಂಡಿನ ಚಕಮಕಿಯಲ್ಲಿ ಮಿಲಿಷಿಯಾ ಬಂಡುಕೋರರ ಗುಂಪುಗಳು ಮ್ಯಾನ್ಮಾರ್ ಸೇನಾ ಶಿಬಿರಗಳನ್ನು ಅತಿಕ್ರಮಿಸಿದ ನಂತರ ಭಾರತಕ್ಕೆ ಪಲಾಯನ ಮಾಡಿದ್ದ ಒಟ್ಟು 74 ಮ್ಯಾನ್ಮಾರ್ ಸೇನಾ ಸಿಬ್ಬಂದಿಯನ್ನು ತಮ್ಮ ದೇಶಕ್ಕೆ ವಾಪಸ್ ಕಳುಹಿಸಿದ್ದಾರೆ.  ಭಾರತ ಮತ್ತು ಮ್ಯಾನ್ಮಾರ್ ನಡುವಿನ ನೈಸರ್ಗಿಕ ಗಡಿಯಾದ ಟಿಯು ನದಿಯ ಸಮೀಪವಿರುವ ಮಿಜೋರಾಂನ ಚಂಫೈ ಜಿಲ್ಲೆಯ ಸೈಖುಂಫೈಗೆ ಮ್ಯಾನ್ಮಾರ್ ಸೈನಿಕರು ಕಾಲ್ನಡಿಗೆಯಲ್ಲಿ ಬಂದರು ಮತ್ತು ಅವರನ್ನು ಅಸ್ಸಾಂ ರೈಫಲ್ಸ್ ಮತ್ತು ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT