ರಪೇಲ್ ಯುದ್ಧ ವಿಮಾನ 
ದೇಶ

ಇಂಫಾಲ್ ಬಳಿ ಹಾರುವ ವಸ್ತು ಪತ್ತೆ: ಹುಡುಕಾಟಕ್ಕೆ 2 ರಫೇಲ್ ಯುದ್ಧ ವಿಮಾನ ನಿಯೋಜಿಸಿದ ವಾಯುಪಡೆ

ಇಂಫಾಲ್ ವಿಮಾನ ನಿಲ್ದಾಣದ ಬಳಿ ನಿನ್ನೆ ಭಾನುವಾರ ಅಪರಿಚಿತ ಹಾರುವ ವಸ್ತುಗಳು(UFO) ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಭಾರತೀಯ ವಾಯುಪಡೆ (IAF), ಅವುಗಳನ್ನು ಹುಡುಕಲು ತನ್ನ ರಫೇಲ್ ಯುದ್ಧ ವಿಮಾನವನ್ನು ಕಳುಹಿಸಿದೆ.

ನವದೆಹಲಿ: ಇಂಫಾಲ್ ವಿಮಾನ ನಿಲ್ದಾಣದ ಬಳಿ ನಿನ್ನೆ ಭಾನುವಾರ ಅಪರಿಚಿತ ಹಾರುವ ವಸ್ತುಗಳು(UFO) ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಭಾರತೀಯ ವಾಯುಪಡೆ (IAF), ಅವುಗಳನ್ನು ಹುಡುಕಲು ತನ್ನ ರಫೇಲ್ ಯುದ್ಧ ವಿಮಾನವನ್ನು ಕಳುಹಿಸಿದೆ. 

ಇಂಫಾಲ್ ವಿಮಾನ ನಿಲ್ದಾಣದ ಮೇಲೆ ಯುಎಫ್ಒ ನಿನ್ನೆ ಮಧ್ಯಾಹ್ನ 2:30 ರ ಸುಮಾರಿಗೆ ಕಾಣಿಸಿಕೊಂಡಿದ್ದು ಇದರಿಂದ ವಾಣಿಜ್ಯ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿತು. 

ಇಂಫಾಲ್ ವಿಮಾನ ನಿಲ್ದಾಣದ ಬಳಿ ಯುಎಫ್‌ಒ ಬಗ್ಗೆ ಮಾಹಿತಿ ಬಂದ ಕೂಡಲೇ, ಹತ್ತಿರದ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನವು ಯುಎಫ್‌ಒಗೆ ಹುಡುಕಾಟ ನಡೆಸಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಸುಧಾರಿತ ಸಂವೇದಕಗಳನ್ನು ಹೊಂದಿದ ವಿಮಾನವು ಯುಎಫ್ ಒವನ್ನು ಹುಡುಕಲು ಶಂಕಿತ ಪ್ರದೇಶದ ಮೇಲೆ ಕೆಳಮಟ್ಟದ ಹಾರಾಟ ನಡೆಸಿತು ಆದರೆ ಅದು ಅಲ್ಲಿ ಏನೂ ಸಿಗಲಿಲ್ಲ ಎಂದು ಅವರು ಹೇಳಿದರು, ಮೊದಲ ವಿಮಾನ ಹಿಂತಿರುಗಿದ ನಂತರ, ಮತ್ತೊಂದು ರಫೇಲ್ ಯುದ್ಧವಿಮಾನವನ್ನು ಕಳುಹಿಸಲಾಯಿತು. ಹುಡುಕಾಟ ನಡೆಸಿದರೂ ಎರಡನೇ ವಿಮಾನಕ್ಕೂ ಏನೂ ದೊರಕಲಿಲ್ಲ. 

ಇಂಫಾಲ್ ವಿಮಾನ ನಿಲ್ದಾಣದ ಮೇಲೆ ಯುಎಫ್ಒನ ವೀಡಿಯೊಗಳು ಇರುವುದರಿಂದ ಸಂಬಂಧಿಸಿದ ಏಜೆನ್ಸಿಗಳು ಯುಎಫ್ ಒ ವಿವರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಅವರು ಹೇಳಿದರು.

ಇಂಫಾಲ್ ವಿಮಾನ ನಿಲ್ದಾಣವನ್ನು ಹಾರಾಟಕ್ಕೆ ತೆರವುಗೊಳಿಸಿದ ನಂತರ, ಭಾರತೀಯ ವಾಯುಪಡೆಯ ಶಿಲ್ಲಾಂಗ್ ಪ್ರಧಾನ ಕಮಾಂಡ್ ಈಸ್ಟರ್ನ್ ಕಮಾಂಡ್ ತಾನು ತೆಗೆದುಕೊಂಡ ಕ್ರಮಗಳ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡದೆ ತನ್ನ ವಾಯು ರಕ್ಷಣಾ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಸಕ್ರಿಯಗೊಳಿಸಿದೆ ಎಂದು ಹೇಳಿದೆ.

ಭಾರತೀಯ ವಾಯುಪಡೆಯ ರಫೇಲ್ ಯುದ್ಧವಿಮಾನಗಳನ್ನು ಪಶ್ಚಿಮ ಬಂಗಾಳದ ಹಶಿಮಾರಾ ವಾಯುನೆಲೆಯಲ್ಲಿ ನಿಯೋಜಿಸಲಾಗಿದೆ. ಚೀನಾ ಗಡಿಯುದ್ದಕ್ಕೂ ಪೂರ್ವ ವಲಯದ ವಿವಿಧ ವಾಯುನೆಲೆಗಳಿಂದ ಹಾರಾಟ ನಡೆಸುತ್ತಿದೆ.

ರಫೇಲ್ ಯುದ್ಧವಿಮಾನಗಳು ಇತ್ತೀಚೆಗೆ ಚೀನಾ ಗಡಿಯುದ್ದಕ್ಕೂ ಪೂರ್ವಿ ಆಕಾಶ್‌ ವಾಯು ಕಸರತ್ತಿನಲ್ಲಿ ಭಾಗವಹಿಸಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT