ಸಿಲ್ಕ್ಯಾರಾ ಸುರಂಗ ಸ್ಥಳದಲ್ಲಿ ರಕ್ಷಣಾ ಕಾರ್ಮಿಕರು 
ದೇಶ

ಸುರಂಗದೊಳಗೆ ಸಾಕಷ್ಟು ಜಾಗವಿತ್ತು, ವಾಕಿಂಗ್ ಯೋಗ-ಧ್ಯಾನ ಮಾಡುತ್ತಿದ್ದೆವು, ಖುಷಿಗಾಗಿ ಕಬಡ್ಡಿ ಆಡುತ್ತಿದ್ದೆವು: ಕಾರ್ಮಿಕರ ಅನುಭವ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು ಬದುಕಿನಲ್ಲಿ ಹೊಸ ಬೆಳಕು ಕಂಡಿದ್ದಾರೆ. 

ಭುವನೇಶ್ವರ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು ಬದುಕಿನಲ್ಲಿ ಹೊಸ ಬೆಳಕು ಕಂಡಿದ್ದಾರೆ. 

ಹಾಗಾದರೆ ಸುರಂಗದೊಳಗೆ ಸಿಕ್ಕಿಬಿದ್ದ ಈ 17 ದಿನಗಳು ಅವರು ಏನು ಮಾಡುತ್ತಿದ್ದರು, ಹೇಗೆ ಸಮಯ ಕಳೆಯುತ್ತಿದ್ದರು ಎಂದು ನಿನ್ನೆ ಪ್ರಧಾನಿ ಮೋದಿಯವರು ಅವರ ಜೊತೆ ದೂರವಾಣಿ ಕರೆ ಮಾಡಿದ್ದ ವೇಳೆ ವಿಚಾರಿಸಿದ್ದರು. ಅದಕ್ಕೆ ಒಡಿಶಾದ ಧೀರೇನ್ ನಾಯಕ್, ಬಿಸ್ವೆಶ್ವರ್ ನಾಯಕ್, ರಾಜು ನಾಯಕ್, ಭಗಬನ್ ಭೋತ್ರಾ ಮತ್ತು ತಪನ್ ಮಂಡಲ್ ತಮಗೆ ಬದುಕಿನಲ್ಲಿ ಹೊಸ ಬೆಳಕು, ಭರವಸೆ ಸಿಕ್ಕಿದೆ ಎನ್ನುತ್ತಾರೆ. 

ಸುರಂಗದೊಳಗೆ ಅವರು ಕಳೆದ ಸಮಯಗಳನ್ನು ಅವರ ಮಾತುಗಳಲ್ಲೇ ಕೇಳಿ: ಸುರಂಗ ಕುಸಿದುಬಿದ್ದು ನಾವು ಒಳಗೆ ಸಿಕ್ಕಿಹಾಕಿಕೊಂಡಾಗ ಮೊದಲ 24 ಗಂಟೆಗಳು ಅತ್ಯಂತ ಕಷ್ಟಕರವಾಗಿತ್ತು. ನಮಗೆ ಉಸಿರುಗಟ್ಟಿದಂತೆ ಆಗಿತ್ತು. ಸುರಂಗದೊಳಗೆ ಆಮ್ಲಜನಕದ ಹರಿವು ಇರುವುದನ್ನು ಖಚಿತಪಡಿಸಿಕೊಳ್ಳಲು, ಎರಡು 6-ಇಂಚಿನ ನೀರಿನ ಪೈಪ್‌ಗಳನ್ನು (2.5 ಕಿಮೀ) ಎಂಟ್ರಾಪ್‌ಮೆಂಟ್‌ನಿಂದ ತೆಗೆದುಹಾಕಿದ್ದರು. ಸುರಂಗದ ಹೊರಗಿನ ಜನರಿಗೆ ಸಂಕೇತಗಳನ್ನು ಕಳುಹಿಸಲು ಇದನ್ನು ಬಳಸಿದರು.

ಹೊರಗೆ ಇದ್ದ ಕೆಲವು ಇಂಜಿನಿಯರ್‌ಗಳು ಸುರಂಗದೊಳಗೆ ಜನರು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದಕೂಡಲೇ, ಏಳು ಗಂಟೆಗಳ ನಂತರ, ರಕ್ಷಕರು ಅದೇ ಪೈಪ್ ಮೂಲಕ ನಮ್ಮೊಂದಿಗೆ ಸಂಪರ್ಕವನ್ನು ಸಾಧಿಸಿದರು. ನಮಗೆ ಒಣ ಆಹಾರವನ್ನು ಕಳುಹಿಸಿದರು ಎಂದು ಬಾಲಸೋರ್‌ನ ರಾಜು ನೆನಪಿಸಿಕೊಂಡರು. 

ಗುಡ್ಡಗಾಡು ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಮಯ ಹಿಡಿಯುತ್ತದೆ ಎಂದು ಅರಿತು ನಾವೆಲ್ಲರೂ ಶಾಂತವಾಗಿ ಪರಿಸ್ಥಿತಿ ಎದುರಿಸಲು ನಿರ್ಧರಿಸಿದೆವು. ಮುಂದಿನ 10 ದಿನಗಳವರೆಗೆ ಅನ್ನ ಮತ್ತು ಒಣ ಹಣ್ಣುಗಳನ್ನು ಸೇವೆಸಿದೆವು. 

ಪೈಪ್ ಮೂಲಕ ಸುರಂಗದೊಳಗೆ ಗಾಳಿಯನ್ನು ಬೀಸಲಾಯಿತು, ಆರಂಭದಲ್ಲಿ ನೀರು ಇನ್ನೂ ಬಂದಿರಲಿಲ್ಲ. ಬಾಯಾರಿಕೆಯನ್ನು ನೀಗಿಸಲು, ಜಲಸಂಚಯನ ಮಾಡಿಕೊಳ್ಳಲು, ಬಂಡೆಗಳ ಮೂಲಕ ನೀರಿನ ಒಸರನ್ನು ನೆಕ್ಕುತ್ತಿದ್ದೆವು. ಮೊದಲ ತಂಡ ಬೇಯಿಸಿದ ಆಹಾರ - ಅಕ್ಕಿ ಮತ್ತು ದಾಲ್ - ಮತ್ತು ನೀರಿನ ಬಾಟಲಿಗಳನ್ನು 10 ದಿನಗಳ ನಂತರ 60-ಇಂಚಿನ ಅಗಲ ಮತ್ತು 39-ಮೀಟರ್ ಉದ್ದದ ಟ್ಯೂಬ್ ಮೂಲಕ ಕಳುಹಿಸಿದರು. ರಕ್ಷಣಾ ಕಾರ್ಯಾಚರಣೆಗೆ ಒಂದರ ಹಿಂದೆ ಒಂದರಂತೆ ಕಂಟಕ ಬಂದರೂ ನಾವು ಭರವಸೆ, ಧೈರ್ಯ ಕಳೆದುಕೊಂಡಿರಲಿಲ್ಲ ಎನ್ನುತ್ತಾರೆ.

ಕಾರ್ಮಿಕರು ಕಳೆದ ನವೆಂಬರ್ 11 ರಂದು ರಾತ್ರಿ ಪಾಳಿಗಾಗಿ ಚಾರ್ ಧಾಮ್ ಯೋಜನೆಯ ಭಾಗವಾದ ನಿರ್ಮಾಣ ಹಂತದಲ್ಲಿರುವ ಸುರಂಗವನ್ನು ಪ್ರವೇಶಿಸಿದ್ದರು. ಮರುದಿನ ದೀಪಾವಳಿಯ ದಿನ ಬೆಳಗ್ಗೆ 8 ಗಂಟೆಗೆ ಅವರ ಪಾಳಿ ಕೊನೆಗೊಳ್ಳಬೇಕಿತ್ತು ಆದರೆ ಮುಂಜಾನೆ 5.30 ರ ಸುಮಾರಿಗೆ ಭೂಕುಸಿತ ಉಂಟಾಗಿತ್ತು. 

ಎರಡು ಗಂಟೆಗಳ ನಂತರ, ಅದೇ ಪ್ರದೇಶದಲ್ಲಿ ಮತ್ತೆ ಭೂಕುಸಿತ ಉಂಟಾಯಿತು. ಆಗಾಗ ಮೂರು ಬಾರಿ ಭೂಕುಸಿತಗಳು ಆಗುತ್ತಿದ್ದರಿಂದ ಹೊರ ಹೋಗುವ ದಾರಿಯನ್ನು ತೆರವುಗೊಳಿಸಲು ಯಾವುದೇ ಕಲ್ಲು ತೆಗೆಯದಿರಲು ನಿರ್ಧರಿಸಿದೆವು. ಏನು ಮಾಡಬೇಕೋ ಅದನ್ನು ಹೊರಗಿನಿಂದ ಮಾಡಬೇಕಾಗಿತ್ತು ಎಂದು ಮಯೂರ್‌ಭಂಜ್ ಜಿಲ್ಲೆಯ ಜೋಗಿಬಂದ್‌ನ ಬಿಸ್ವೇಶ್ವರ್ ಹೇಳುತ್ತಾರೆ.

ಕೂಲಿಕಾರರಾದ ನಾವು ಕಷ್ಟದ ಪರಿಸ್ಥಿತಿಗಳಲ್ಲಿ ಬದುಕಲು ಅಭ್ಯಾಸ ಮಾಡಿಕೊಂಡಿದ್ದೇವೆ ಆದರೆ ಹಿಂದೆಂದೂ ಇಂತಹ ಪರಿಸ್ಥಿತಿಗೆ ಸಿಲುಕಿರಲಿಲ್ಲ. ಹೇಗಾದರೂ, ರಕ್ಷಕರು ನಮ್ಮನ್ನು ತಲುಪುತ್ತಾರೆ ಎಂದು ನಮಗೆ ಹೇಳುತ್ತಿದ್ದರು. ಒಮ್ಮೆ ಆಹಾರ ಪೂರೈಕೆಯನ್ನು ಸುವ್ಯವಸ್ಥಿತಗೊಳಿಸಿದಾಗ ನಮ್ಮ ಕುಟುಂಬಗಳೊಂದಿಗೆ ಸಂಪರ್ಕ ಪಡೆದೆವು, ನಾವೆಲ್ಲರೂ ಶಾಂತಿಯಿಂದ ಇದ್ದೇವೆ ಎಂದು ಕುಟುಂಬಸ್ಥರಿಗೆ ತಿಳಿಸಿದೆವು ಎನ್ನುತ್ತಾರೆ ನಬರಂಗಪುರ ಮೂಲದ ಭಾಗಬನ್.

ಕಾರ್ಮಿಕರು ತಮ್ಮ ಹೆಲ್ಮೆಟ್ ಮತ್ತು ಗಮ್ ಬೂಟುಗಳೊಂದಿಗೆ ಸುರಂಗದ ಒಳಗೆ ಹೋಗಿದ್ದರು. ಆರು ಇಂಚಿನ ಟ್ಯೂಬ್ ಮೂಲಕ, ಅವರಿಗೆ ತಮ್ಮ ಮೊಬೈಲ್ ಫೋನ್‌ಗಳು, ಆಟಗಳನ್ನು ಆಡಲು ಕಾರ್ಡ್‌ಗಳನ್ನು ಸಹ ಒದಗಿಸಲಾಯಿತು. ವಾಕಿ-ಟಾಕಿ ಸೆಟ್‌ಗಳು ಮತ್ತು ಲ್ಯಾಂಡ್‌ಲೈನ್‌ಗಳನ್ನು ಸಹ ಅವರಿಗೆ ಕಳುಹಿಸಲಾಯಿತು, ಅದರ ಮೂಲಕ ಅವರು ತಮ್ಮ ಕುಟುಂಬಗಳೊಂದಿಗೆ ದಿನಕ್ಕೆ ಎರಡು ಬಾರಿ ಮಾತನಾಡುತ್ತಿದ್ದರು. 

ದೇವರ ಮೊರೆ, ಯೋಗ-ಧ್ಯಾನ: ಸುರಕ್ಷಿತವಾಗಿ ನಾವು ಹೊರಗೆ ಬರಬೇಕೆಂದು ದೇವರ ಮೊರೆ ಹೋದೆವು, ಯೋಗ-ಧ್ಯಾನ ಮಾಡುತ್ತಿದ್ದೆವು. ಮನಸ್ಸನ್ನು ಹಗುರವಾಗಿರಿಸಲು 2.5 ಕಿಮೀ ಜಾಗದಲ್ಲಿ ವಾಕಿಂಗ್ ಮಾಡುತ್ತಿದ್ದೆವು. ಒಳಗೆ ಸಾಕಷ್ಟು ಜಾಗವಿತ್ತು, ನಮ್ಮಲ್ಲಿ ಕೆಲವರು ಕಬಡ್ಡಿ ಆಡುತ್ತಿದ್ದೆವು. ನಾವೆಲ್ಲರೂ ಎಂದಿಗೂ ನೀರಸ ಕ್ಷಣವಾಗದಂತೆ ನೋಡಿಕೊಂಡಿದ್ದೇವೆ ಎಂದು ಭಗಬನ್ ನಗುತ್ತಾ ಹೇಳುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

SCROLL FOR NEXT