ದೇಶ

ಮುಂಬೈ ಕಾಂಗ್ರೆಸ್ ಶಾಸಕನಿಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ನಿಂದ ಕೊಲೆ ಬೆದರಿಕೆ

Lingaraj Badiger

ಮುಂಬೈ: ಮಾಜಿ ಸಚಿವ ಮತ್ತು ಮುಂಬೈ ಕಾಂಗ್ರೆಸ್ ಶಾಸಕ ಅಸ್ಲಂ ಶೇಖ್ ಅವರನ್ನು ಕೊಲ್ಲುವುದಾಗಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಎಂದು ಹೇಳಿಕೊಳ್ಳುವ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಕರೆ ಮಾಡಿದವರ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆನಡಾ ಮೂಲದ ಗೋಲ್ಡಿ ಬ್ರಾರ್ ವಿವಿಧ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಮತ್ತು ದೇಶದ ವಿವಿಧ ರಾಜ್ಯಗಳಿಗೆ ಬೇಕಾಗಿರುವ ಅಪರಾಧಿ.

ಗೋಲ್ಡಿ ಬ್ರಾರ್ ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ.

ಕಳೆದ ಗುರುವಾರ ಮಾಜಿ ಸಚಿವ ಅಸ್ಲಂ ಶೇಕ್ ಅವರು ಮುಂಬೈ ಮಹಾನಗರ ಪಾಲಿಕೆಯ ಕಚೇರಿಯಲ್ಲಿದ್ದಾಗ ಅವರ ಪಿಎ ಮತ್ತು ವಕೀಲ ವಿಕ್ರಮ್ ಕಪೂರ್ ಅವರಿಗೆ ಬೆದರಿಕೆ ಕರೆ ಬಂದಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕರೆ ಮಾಡಿದ ವ್ಯಕ್ತಿ ತನ್ನನ್ನು ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಎಂದು ಹೇಳಿಕೊಂಡಿದ್ದಾನೆ ಮತ್ತು ಎರಡು ದಿನಗಳಲ್ಲಿ ಶಾಸಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುವುದು ಎಂದು ಶೇಖ್‌ನ ಪಿಎಗೆ ಹಿಂದಿಯಲ್ಲಿ ಹೇಳಿ, ಫೋನ್ ಕಟ್ ಮಾಡಿದ್ದಾರೆ.

SCROLL FOR NEXT