ದೇಶ

ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಅಗ್ನಿ ಅವಘಡ: 9 ಮಕ್ಕಳಿಗೆ ಗಾಯ

Manjula VN

ಸತಾರಾ: ದುರ್ಗಾ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್‌ಗೆ ಬೆಂಕಿ ತಗಲು 9 ಮಕ್ಕಳಿಗೆ ಗಾಯವಾಗಿರುವ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಪ್ರಸಿದ್ಧ ಗಿರಿಧಾಮ ಮಹಾಬಲೇಶ್ವರದ ಕೋಲಿ ಆಲಿ ಪ್ರದೇಶದಲ್ಲಿ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡಿರುವ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆರವಣಿಗೆಯಲ್ಲಿ ಸಾಗುತ್ತಿದ್ದ ವಾಹನಕ್ಕೆ ಜನರೇಟರ್ ಅಳವಡಿಸಲಾಗಿತ್ತು. ಸಮೀಪದಲ್ಲಿಯೇ ಪೆಟ್ರೋಲ್ ಕ್ಯಾನ್ ಇರಿಸಲಾಗಿತ್ತು. ಜನರೇಟರ್ ಬಿಸಿಯಾಗಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ವಾಹನದಲ್ಲಿ ಕುಳಿತಿದ್ದ ಮಕ್ಕಳಿಗೆ ಗಾಯಗಳಾಗಿವೆ. ಗಾಯಗೊಂಡ ಮಕ್ಕಳನ್ನು ಸತಾರಾ ಮತ್ತು ಪುಣೆಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಇದೀಗ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

SCROLL FOR NEXT