ದೇಶ

ಸೋನಿಯಾ ಗಾಂಧಿಗೆ ಟಿಆರ್‌ಎಸ್ ದ್ರೋಹ ಮಾಡಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Nagaraja AB

ಸಂಗಾರೆಡ್ಡಿ:  ತೆಲಂಗಾಣ ರಾಷ್ಟ್ರ ಸಮಿತಿ ಟಿಆರ್ ಎಸ್ ಸೋನಿಯಾಗಾಂಧಿಗೆ ದ್ರೋಹ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಆರೋಪಿಸಿದರು.

 ತೆಲಂಗಾಣದ ಸಂಗಾರೆಡ್ಡಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆಲಂಗಾಣ ರಾಜ್ಯವನ್ನು ರಚನೆ ಮಾಡಿದವರು ಯಾರು ಎಂಬುದು ನೆನಪಿದೆಯೇ? ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು. 

ತೆಲಂಗಾಣವನ್ನು ರಾಜ್ಯವನ್ನು ಸೋನಿಯಾ ಗಾಂಧಿ  ರಚನೆ ಮಾಡಿದರು. ಆ ಮೂಲಕ ತೆಲಂಗಾಣ ಜನತೆಯ ಆಸೆಯನ್ನು ಈಡೇರಿಸಿದ್ದಾರೆ. ಆದರೆ ಇಂದು ಆಡಳಿತ ನಡೆಸುತ್ತಿರುವ ಟಿಆರ್ ಎಸ್  ಸೋನಿಯಾ ಗಾಂಧಿಗೆ ದ್ರೋಹ ಬಗೆದಿದೆ ಎಂದು ವಾಗ್ದಾಳಿ ನಡೆಸಿದರು.

 ಈ ರಾಜ್ಯದ ರಚನೆಯಲ್ಲಿ ಕಾಂಗ್ರೆಸ್ ದೊಡ್ಡ ಪಾತ್ರವನ್ನು ವಹಿಸಿದೆ ಎಂಬುದು ನೆನಪಿಟ್ಟುಕೊಳ್ಳಬೇಕು. ಸೋನಿಯಾ ಗಾಂಧಿ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. 

SCROLL FOR NEXT