ನಿತೀಶ್ ಕುಮಾರ್ 
ದೇಶ

ಪಾಟ್ನಾ ವಿಶ್ವವಿದ್ಯಾಲಯದ ವೇದಿಕೆ ಮೇಲೆ ಕಾಲು ಜಾರಿ ಬಿದ್ದ ಸಿಎಂ ನಿತೀಶ್ ಕುಮಾರ್, ವಿಡಿಯೋ!

ಪಾಟ್ನಾ ವಿಶ್ವವಿದ್ಯಾನಿಲಯದ ವೇದಿಕೆ ಮೇಲೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಹಠಾತ್ ಜಾರಿ ಬಿದ್ದಿದ್ದು, ಈ ವೇಳೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವೇದಿಕೆಯಲ್ಲಿದ್ದರು.

ಪಾಟ್ನಾ: ಪಾಟ್ನಾ ವಿಶ್ವವಿದ್ಯಾನಿಲಯದ ವೇದಿಕೆ ಮೇಲೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಹಠಾತ್ ಜಾರಿ ಬಿದ್ದಿದ್ದು, ಈ ವೇಳೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವೇದಿಕೆಯಲ್ಲಿದ್ದರು. 

ನೂತನ ಸೆನೆಟ್ ಸಭಾಂಗಣ ಉದ್ಘಾಟನೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲು ಶಿಕ್ಷಕರ ದಿನಾಚರಣೆ ನಿಮಿತ್ತ ರಾಜ್ಯಪಾಲರೊಂದಿಗೆ ಸಿಎಂ ನಿತೀಶ್ ಪಿಯುಗೆ ಬಂದಿದ್ದರು. ಕೆಳಗೆ ಬಿದ್ದ ತಕ್ಷಣ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮುಖ್ಯಮಂತ್ರಿಯನ್ನು ಹತೋಟಿಗೆ ತಂದರು. ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ, ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಬೆಳಗ್ಗೆ ಪಾಟ್ನಾ ವಿಶ್ವವಿದ್ಯಾಲಯಕ್ಕೆ ಆಗಮಿಸಿದರು. ಶಿಕ್ಷಕರ ದಿನಾಚರಣೆ ನಿಮಿತ್ತ ಇಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಉಪಸ್ಥಿತರಿದ್ದರು. ಸಿಎಂ ನಿತೀಶ್ ಮತ್ತು ರಾಜ್ಯಪಾಲರು ಪಿಯುನಲ್ಲಿ ನೂತನವಾಗಿ ಅಲಂಕರಿಸಿದ ಸೆನೆಟ್ ಹಾಲ್ ಅನ್ನು ಸಹ ಉದ್ಘಾಟಿಸಿದರು. ಉದ್ಘಾಟನೆಗೆ ರಾಜ್ಯಪಾಲರೊಂದಿಗೆ ಸಿಎಂ ನಿತೀಶ್ ವೇದಿಕೆ ತಲುಪುತ್ತಿದ್ದಂತೆಯೇ ಅವರ ಕಾಲು ಜಾರಿತು.

ಮರು ಕ್ಷಣವೇ ಮುಖ್ಯಮಂತ್ರಿ ತತ್ತರಿಸಿ ವೇದಿಕೆ ಮೇಲೆ ಬಿದ್ದರು. ಇದನ್ನು ನೋಡಿ ಅಲ್ಲಿದ್ದವರೆಲ್ಲ ಸ್ತಬ್ಧರಾದರು. ಆದರೆ, ಭದ್ರತಾ ಸಿಬ್ಬಂದಿ ತಕ್ಷಣವೇ ಸಿಎಂ ನಿತೀಶ್ ಅವರನ್ನು ನಿಭಾಯಿಸಿ ನಿಲ್ಲುವಂತೆ ಮಾಡಿದರು. ಸಿಎಂಗೆ ಯಾವುದೇ ರೀತಿಯ ಗಾಯವಾಗದಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮುಖ್ಯಮಂತ್ರಿ ಸಾವಧಾನವಾಗಿ ಎದ್ದು ರಾಜ್ಯಪಾಲ ಅರ್ಲೇಕರ್ ಬಳಿ ಬಂದರು. ಇದಾದ ನಂತರ ಇಬ್ಬರೂ ಸೆನೆಟ್ ಸಭಾಂಗಣವನ್ನು ಉದ್ಘಾಟಿಸಿ ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT