ದೇಶ

ಮುಂಬೈ ಗಗನಸಖಿ ಹತ್ಯೆ ಪ್ರಕರಣ: ಪೊಲೀಸ್ ಲಾಕಪ್‌ನಲ್ಲಿ ಆರೋಪಿ ಆತ್ಮಹತ್ಯೆ

Shilpa D

ಮುಂಬಯಿ: ಮುಂಬೈನ ಮರೋಲ್‌ನಲ್ಲಿರುವ ತನ್ನ ನಿವಾಸದಲ್ಲಿ ಗಗನಸಖಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದ 40 ವರ್ಷದ ವ್ಯಕ್ತಿ ಪೊಲೀಸ್ ಲಾಕಪ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.

23ರ ವರ್ಷದ ಗಗನಸಖಿಯನ್ನು ಆಕೆಯ ಫ್ಲಾಟ್‌ನಲ್ಲಿ ಕತ್ತು ಸೀಳಿ ಕೊಂದಿದ್ದ, ಆರೋಪಿ ವಿಕ್ರಮ್ ಅತ್ವಾಲ್ ಎಂಬ ಮನೆಗೆಲಸದ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.

ಛತ್ತೀಸ್‌ಗಢ ಮೂಲದ ಗಗನಸಖಿ ರೂಪಲ್ ಓಗ್ರೆ ಈ ವರ್ಷದ ಏಪ್ರಿಲ್‌ನಲ್ಲಿ ಏರ್ ಇಂಡಿಯಾದಲ್ಲಿ  ಉದ್ಯೋಗ ಪಡೆಯಲು ಮುಂಬೈಗೆ ಆಗಮಿಸಿದ್ದರು. ಅವಳು ತನ್ನ ಸಹೋದರಿಯೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು. ಘಟನೆ ಸಂಭವಿಸಿದಾಗ, ಅವಳು ಫ್ಲಾಟ್‌ನಲ್ಲಿ ಒಬ್ಬಳೇ ಇದ್ದಳು. ವಿಕ್ರಮ್ ಅತ್ವಾಲ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿವೆ.

SCROLL FOR NEXT