ಸಾಂದರ್ಭಿಕ ಚಿತ್ರ 
ದೇಶ

ಧನ್‌ಬಾದ್‌ ಬಿಜೆಪಿ ಅಭ್ಯರ್ಥಿ ವಿರುದ್ಧ 49 ಕ್ರಿಮಿನಲ್ ಕೇಸ್; ಉಮೇದುವಾರಿಕೆ ಬದಲಿಸುವಂತೆ ವ್ಯಾಪಾರಿಗಳ ಆಗ್ರಹ

ಧನ್‌ಬಾದ್‌ನ ಬಿಜೆಪಿ ಅಭ್ಯರ್ಥಿ ಧುಲೋ ಮಹತೋ ಅವರ ವಿರುದ್ಧ ಬರೋಬ್ಬರಿ 49 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ರಾಂಚಿ: ಧನ್‌ಬಾದ್‌ನ ಬಿಜೆಪಿ ಅಭ್ಯರ್ಥಿ ಧುಲೋ ಮಹತೋ ಅವರ ವಿರುದ್ಧ ಬರೋಬ್ಬರಿ 49 ಪ್ರಕರಣಗಳು ದಾಖಲಾಗಿದ್ದು, ಅವರ ಉಮೇದುವಾರಿಕೆಯನ್ನು ಮರುಪರಿಶೀಲಿಸುವಂತೆ ಕೋರಿ ಧನಬಾದ್‌ನ ವ್ಯಾಪಾರಿಗಳು ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರಿಗೆ ಪತ್ರ ಬರೆದಿದ್ದಾರೆ.

ಮಹತೋ ಅವರ ವಿರುದ್ಧ 49 ಕ್ರಿಮಿನಲ್ ಪ್ರಕರಣಗಳಿವೆ ಮತ್ತು ಧನ್ಬಾದ್ ಪ್ರದೇಶದಲ್ಲಿ ಕಲ್ಲಿದ್ದಲು ಕಳ್ಳಸಾಗಣೆ, ಸುಲಿಗೆ ಮತ್ತು ಇತರ ಅಪರಾಧಗಳಿಂದ ಕುಖ್ಯಾತಿ ಪಡೆದಿದ್ದಾರೆ. ಅಲ್ಲದೆ ನಾಲ್ಕು ಪ್ರಕರಣಗಳಲ್ಲಿ ಅವರಿಗೆ ಶಿಕ್ಷೆಯೂ ಆಗಿದೆ.

ವ್ಯಾಪಾರಿಗಳು ಪತ್ರದ ಪ್ರತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಕಾರ್ಯಾಲಯ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೂ ಕಳುಹಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಧುಲೋ ಮಹ್ತೋ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸ್ಥಳೀಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಧನ್‌ಬಾದ್‌ನ ವ್ಯಾಪಾರಿಗಳ ಪರವಾಗಿ, ಧನ್‌ಬಾದ್ ಜಿಲ್ಲಾ ಮಾರ್ವಾಡಿ ಸಮ್ಮೇಳನದ ಅಧ್ಯಕ್ಷ ಕೃಷ್ಣ ಅಗರವಾಲ್ ಅವರು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಅವರಿಗೆ ಪತ್ರ ಬರೆದಿದ್ದಾರೆ. ಧನ್‌ಬಾದ್‌ನಿಂದ ಸ್ಪರ್ಧಿಸಲು ಧುಲೋ ಮಹತೋ ಅವರ ಹೆಸರನ್ನು ಘೋಷಿಸಿದ ನಂತರ ಈ ನಿರ್ಧಾರ ವ್ಯಾಪಾರಿ ಸಮುದಾಯವನ್ನು ಭಯಭೀತಗೊಳಿಸಿದೆ ಎಂದು ಆರೋಪಿಸಿದ್ದಾರೆ.

"ಪಕ್ಷದ ಹಿರಿಯ ನಾಯಕರಿಗೆ ನಾನು ಪತ್ರ ಬರೆದಿದ್ದೇನೆ, ಪಕ್ಷವು ತೆಗೆದುಕೊಂಡ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದೇನೆ, ಇದು ಉದ್ಯಮಿ ಸಮುದಾಯವನ್ನು ಭಯಭೀತಗೊಳಿಸಿದೆ" ಎಂದು ಕೃಷ್ಣ ಅಗರವಾಲ್ ಹೇಳಿದ್ದಾರೆ.

ಕಲ್ಲಿದ್ದಲು ಮಾಫಿಯಾ

ಅಭ್ಯರ್ಥಿ ಧುಲೋ ಮಹ್ತೋ ಅವರ ವಿರುದ್ಧ 49 ಕ್ರಿಮಿನಲ್ ಪ್ರಕರಣಗಳಿವೆ ಮತ್ತು ಧನ್ಬಾದ್ನಲ್ಲಿ ಕಲ್ಲಿದ್ದಲು ಕಳ್ಳಸಾಗಣೆ, ಸುಲಿಗೆ ಮತ್ತು ಇತರ ಅಪರಾಧಗಳಿಗೆ ಕುಖ್ಯಾತರಾಗಿದ್ದಾರೆ. ಮಹತೋ ವಿರುದ್ಧ ಇನ್ನೂ ಮೂರು ಡಜನ್‌ಗೂ ಹೆಚ್ಚು ಭೂಕಬಳಿಕೆ, ಸುಲಿಗೆ, ಕಳ್ಳಸಾಗಾಣಿಕೆ ಪ್ರಕರಣಗಳು ಬಾಕಿ ಇವೆ ಎಂದು ವ್ಯಾಪಾರಿ ಸಮುದಾಯ ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT