ಸೈನಿಕ್ ಶಾಲೆ online desk
ದೇಶ

ಶೇ.62 ರಷ್ಟು ಸೈನಿಕ್ ಶಾಲೆಗಳ ನಿರ್ವಹಣೆ ಸಂಘಪರಿವಾರ, ಬಿಜೆಪಿ ನಾಯಕರಿಗೆ: ವರದಿ

ಕೇಂದ್ರ ಸರ್ಕಾರ ಸೈನಿಕ್ ಶಾಲೆಗಳ ಪೈಕಿ ಶೇ.62 ರಷ್ಟು ಶಾಲೆಗಳ ನಿರ್ವಹಣೆಯನ್ನು ಸಂಘಪರಿವಾರ, ಬಿಜೆಪಿ ರಾಜಕಾರಣಿಗಳು ಹಾಗೂ ಮಿತ್ರಕೂಟಕ್ಕೆ ವಹಿಸಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ಹೇಳಿದೆ.

ನವದೆಹಲಿ: ಕೇಂದ್ರ ಸರ್ಕಾರ ಸೈನಿಕ್ ಶಾಲೆಗಳ ಪೈಕಿ ಶೇ.62 ರಷ್ಟು ಶಾಲೆಗಳ ನಿರ್ವಹಣೆಯನ್ನು ಸಂಘಪರಿವಾರ, ಬಿಜೆಪಿ ರಾಜಕಾರಣಿಗಳು ಹಾಗೂ ಮಿತ್ರಕೂಟಕ್ಕೆ ವಹಿಸಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ಹೇಳಿದೆ. ಕೇಂದ್ರ ಸರ್ಕಾರದ ಮಾಧ್ಯಮ ಪ್ರಕಟಣೆಗಳು ಹಾಗೂ ಆರ್ ಟಿಐ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಈ ಮಾಹಿತಿ ತೆಗೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, 40 ಸೈನಿಕ್ ಶಾಲೆಗಳ ಒಪ್ಪಂದದ ಪೈಕಿ ಈ ವರೆಗೂ ಕನಿಷ್ಟ ಶೇ.62 ರಷ್ಟು ಶಾಲೆಗಳನ್ನು ಆರ್ ಎಸ್ಎಸ್ ಗೆ ಸಂಬಂಧಿತ ಅಥವಾ ಅದರ ಅಂಗ ಸಂಸ್ಥೆಗಳಿಗೆ, ಬಿಜೆಪಿ ರಾಜಕಾರಣಿಗಳಿಗೆ, ಬಿಜೆಪಿ ರಾಜಕೀಯ ಮಿತ್ರ ಕೂಟಕ್ಕೆ, ಹಿಂದುತ್ವ ಸಂಘಟನೆಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ದಿ ರಿಪೋರ್ಟರ್ಸ್ ಕಲೆಕ್ಟೀವ್ ಹೇಳಿದೆ.

ಆರ್ಥಿಕವಾಗಿ ಭಾಗಶಃ ಬೆಂಬಲ ಪಡೆಯುವುದಕ್ಕೆ ಹಾಗೂ ಅದರ ಶಾಖೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸೈನಿಕ್ ಶಾಲೆ ಶಿಕ್ಷಣ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳಿಗೆ ಎಸ್ಎಸ್ಎಸ್ ಜೊತೆ ಸಂಯೋಜನೆಗೊಳ್ಳುವುದಕ್ಕೆ ಅವಕಾಶ ನೀಡಿದೆ ಎಂದು ಕಲೆಕ್ಟೀವ್ ಹೇಳಿದೆ.

2021 ರಲ್ಲಿ, ಕೇಂದ್ರ ಸರ್ಕಾರ ಭಾರತದಲ್ಲಿ ಸೈನಿಕ ಶಾಲೆಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳಿಗೆ ಬಾಗಿಲು ತೆರೆಯಿತು. ಆ ವರ್ಷ ತಮ್ಮ ವಾರ್ಷಿಕ ಬಜೆಟ್‌ನಲ್ಲಿ, ಭಾರತದಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸುವ ಯೋಜನೆಯನ್ನು ಸರ್ಕಾರ ಘೋಷಿಸಿತ್ತು. ಅಕ್ಟೋಬರ್ 12, 2021 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಯಾಬಿನೆಟ್ ಸಭೆಯ ನೇತೃತ್ವ ವಹಿಸಿದ್ದರು, ಇದು ಶಾಲೆಗಳನ್ನು "ವಿಶಿಷ್ಟ ಸಂಸ್ಥೆಗಳನ್ನಾಗಿ ನಡೆಸುವ ಪ್ರಸ್ತಾವನೆಯನ್ನು ಅನುಮೋದಿಸಿತು, ಇದು ಅಸ್ತಿತ್ವದಲ್ಲಿರುವ ರಕ್ಷಣಾ ಸಚಿವಾಲಯದ ಸೈನಿಕ್ ಶಾಲೆಗಳಿಗಿಂತಲೂ ವಿಭಿನ್ನವಾಗಿರುತ್ತದೆ."

ನೀತಿ ದಾಖಲೆಯ ಪ್ರಕಾರ, ಸರ್ಕಾರ SSS ಮೂಲಕ, “50% ಶುಲ್ಕದ ವಾರ್ಷಿಕ ಶುಲ್ಕ ಬೆಂಬಲವನ್ನು ಒದಗಿಸುತ್ತದೆ ವಾರ್ಷಿಕ ರೂ. 40000/- 50 ವಿದ್ಯಾರ್ಥಿಗಳ ಗರಿಷ್ಠ ಮಿತಿಗೆ ಒಳಪಟ್ಟಿರುತ್ತದೆ ) 6 ನೇ ತರಗತಿಯಿಂದ 12 ನೇ ತರಗತಿಯವರೆಗೆ, Merit-cum-Means basis ಆಧಾರದ ಮೇಲೆ, ಅಂದರೆ, 12 ನೇ ತರಗತಿಯವರೆಗೆ ತರಗತಿಗಳನ್ನು ಹೊಂದಿರುವ ಶಾಲೆಗೆ, SSS ವರ್ಷಕ್ಕೆ ಗರಿಷ್ಠ ರೂ 1.2 ಕೋಟಿ ಬೆಂಬಲವನ್ನು ನೀಡುತ್ತದೆ. ಇದು ವಿದ್ಯಾರ್ಥಿಗಳಿಗೆ ಭಾಗಶಃ ಆರ್ಥಿಕ ಬೆಂಬಲವಾಗಿ ನೀಡಲಾಗುತ್ತದೆ.ಶಾಲೆಗಳಿಗೆ ನೀಡಲಾಗುವ ಇತರ ಪ್ರೋತ್ಸಾಹಗಳು "12 ನೇ ತರಗತಿಯಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವಾರ್ಷಿಕವಾಗಿ ನೀಡಲಾಗುವ ತರಬೇತಿ ಅನುದಾನವಾಗಿ ರೂ.10 ಲಕ್ಷಗಳ ಮೊತ್ತವನ್ನು ಒಳಗೊಂಡಿರುತ್ತದೆ."

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT