ಗೋವಾದ ಡ್ಯಾಂಗಳ ಪರಿಸ್ಥಿತಿ 
ದೇಶ

ಗೋವಾದಲ್ಲೂ ಜಲಕ್ಷಾಮ: 7 ಡ್ಯಾಂಗಳ ಪೈಕಿ ಮೂರರಲ್ಲಿ ಶೇ.50 ಕ್ಕಿಂತ ಕಡಿಮೆ ನೀರು!

ಕರ್ನಾಟಕದಲ್ಲಿ ಮಳೆ ಕೊರೆತೆಯಿಂದಾಗಿ ಉಂಟಾಗಿರುವ ಭೀಕರ ಬರಗಾಲದ ಸುದ್ದಿ ಹಸಿರಾಗಿರುವಂತೆಯೇ ಪ್ರವಾಸಿಗರ ಸ್ವರ್ಗ ನೆರೆಯ ಗೋವಾದಲ್ಲಿ ಜಲಕ್ಷಾಮ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಪಣಜಿ: ಕರ್ನಾಟಕದಲ್ಲಿ ಮಳೆ ಕೊರೆತೆಯಿಂದಾಗಿ ಉಂಟಾಗಿರುವ ಭೀಕರ ಬರಗಾಲದ ಸುದ್ದಿ ಹಸಿರಾಗಿರುವಂತೆಯೇ ಪ್ರವಾಸಿಗರ ಸ್ವರ್ಗ ನೆರೆಯ ಗೋವಾದಲ್ಲಿ ಜಲಕ್ಷಾಮ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಗೋವಾ ಸರ್ಕಾರವೇ ಹೇಳಿಕೊಂಡಿರುವಂತೆ ಗೋವಾದ ಒಟ್ಟು ಏಳು ಅಣೆಕಟ್ಟುಗಳ ಪೈಕಿ ಮೂರರಲ್ಲಿ ನೀರಿನ ಸಂಗ್ರಹವು ಶೇಕಡಾ 50 ಕ್ಕಿಂತ ಕಡಿಮೆಯಾಗಿದೆ. ಇದು ಪ್ರಸ್ತುತ ಬೇಸಿಗೆ ಕಾಲದಲ್ಲಿ ಪರಿಸ್ಥಿತಿ ಕಷ್ಟಕರವಾಗಬಹುದು ಎಂದು ಸೂಚಿಸುತ್ತದೆ ಎಂದು ಹೇಳಿದೆ.

ಈ ಬಗ್ಗೆ ರಾಜ್ಯ ಜಲಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಎರಡು ಅಣೆಕಟ್ಟುಗಳ ನೀರಿನ ಮಟ್ಟವು ಶೇಕಡಾ 40 ಕ್ಕಿಂತ ಕಡಿಮೆಯಾಗಿದೆ. ಆದಾಗ್ಯೂ, ಇತರ ನಾಲ್ಕು ಅಣೆಕಟ್ಟುಗಳು ಶೇಕಡಾ 50 ರಷ್ಟು ನೀರಿನ ದಾಸ್ತಾನಿಗಿಂತ ಹೆಚ್ಚಿವೆ ಮತ್ತು ಅವುಗಳಲ್ಲಿ ಒಂದು ಪ್ರಸ್ತುತ ಶೇಕಡಾ 91 ಕ್ಕಿಂತ ಹೆಚ್ಚು ನೀರಿನ ಸಂಗ್ರಹವನ್ನು ಹೊಂದಿದೆ ಎಂದು ಅದು ಹೇಳಿದೆ.

ಉತ್ತರ ಗೋವಾದ ಸತ್ತಾರಿ ಮತ್ತು ಬಿಚೋಲಿಮ್ ತಾಲೂಕಿನ ಕೆಲವು ಭಾಗಗಳ ನೀರಿನ ಅಗತ್ಯವನ್ನು ಪೂರೈಸುವ ಅಂಜುನೆಮ್ ಜಲಾಶಯವು ಶೇ. 62.6 ರಷ್ಟು ನೀರಿನ ಸಂಗ್ರಹ ಹೊಂದಿದ್ದು, ಕೆನಕೋನಾ ತಾಲೂಕಿನ ನೀರಿನ ಅವಶ್ಯಕತೆಯನ್ನು ಪೂರೈಸುವ ಚಾಪೋಲಿ ಜಲಾಶಯವು ಶೇ.59.4 ರಷ್ಟು ನೀರಿನ ಸಂಗ್ರಹ ಹೊಂದಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಂತೆಯೇ ಗೌನೆಮ್ ಜಲಾಶಯದಲ್ಲಿ ಶೇ.56.6ರಷ್ಟು ದಾಸ್ತಾನು ಉಳಿದಿದ್ದು, ತಿಲ್ಲಾರಿ ಡ್ಯಾಂ ನಲ್ಲಿ ಶೇ.91.1ರಷ್ಟು ನೀರು ತುಂಬಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT