ಅವಶೇಷಗಳಡಿಯಿಂದ ಮೃತದೇಹ ಹೊರಗೆ ತೆಗೆಯುತ್ತಿರುವುದು  
ದೇಶ

ರುದ್ರಪ್ರಯಾಗ, ಉತ್ತರಾಖಂಡ: ಫಾಂಟಾ ಹೆಲಿಪ್ಯಾಡ್ ಬಳಿ ಅವಶೇಷಗಳಡಿ ಸಿಲುಕಿ ನಾಲ್ವರು ನೇಪಾಳಿ ಪ್ರಜೆಗಳು ಸಾವು

ಮಧ್ಯರಾತ್ರಿ 1:20 ರ ಸುಮಾರಿಗೆ ಘಟನೆಯ ಬಗ್ಗೆ ಜಿಲ್ಲಾ ವಿಪತ್ತು ರಕ್ಷಣಾ ಪಡೆಗೆ ತಿಳಿಸಲಾಯಿತು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು.

ರುದ್ರಪ್ರಯಾಗ್(ಉತ್ತರಾಖಂಡ): ಶುಕ್ರವಾರ ನಸುಕಿನ ಜಾವ ರುದ್ರಪ್ರಯಾಗದ ಫಾಂಟಾ ಹೆಲಿಪ್ಯಾಡ್‌ಗೆ ಸಮೀಪವಿರುವ ಖಾಟ್ ಗಡೇರಾ ಬಳಿ ಅವಶೇಷಗಳಡಿಯಿಂದ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮಧ್ಯರಾತ್ರಿ 1:20 ರ ಸುಮಾರಿಗೆ ಘಟನೆಯ ಬಗ್ಗೆ ಜಿಲ್ಲಾ ವಿಪತ್ತು ರಕ್ಷಣಾ ಪಡೆಗೆ ತಿಳಿಸಲಾಯಿತು. ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿತು.

ರುದ್ರಪ್ರಯಾಗದ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ನಾಲ್ವರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ವರದಿಗಳ ಪ್ರಕಾರ, ಅವರೆಲ್ಲರೂ ನೇಪಾಳಿ ಪ್ರಜೆಗಳಾಗಿದ್ದು, ತೆರವು ಕಾರ್ಯ ನಡೆಯುತ್ತಿದೆ. ಅವರ ಮೃತದೇಹಗಳನ್ನು ಡಿಡಿಆರ್‌ಎಫ್ ತಂಡವು ರುದ್ರಪ್ರಯಾಗಕ್ಕೆ ತರುತ್ತಿದೆ ಎಂದು ರುದ್ರಪ್ರಯಾಗ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಚಮೋಲಿ ಪೊಲೀಸರು ನಿರ್ಬಂಧಿಸಲಾದ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಭಾರೀ ಮಳೆಯ ನಂತರ, ನಂದಪ್ರಯಾಗ, ಚಿಂಕಾ, ಗುಲಾಬ್‌ಕೋಟಿ, ಪಗಲ್‌ನಾಲಾ ಮತ್ತು ಕಾಂಚನಾಲಾ (ಬದ್ರಿನಾಥ್) ಬಳಿ ಅವಶೇಷಗಳಿಂದಾಗಿ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT