ನಾಗಮಣಿ ಹತ್ಯೆ TNIE
ದೇಶ

ನಮ್ಮ ಕುಲಕ್ಕೇ ಕಳಂಕ: ಮರ್ಯಾದೆಗಾಗಿ ಮಹಿಳಾ ಪೊಲೀಸ್ ಪೇದೆಯನ್ನೇ ಮಚ್ಚಿನಿಂದ ಕಡಿದು ಕೊಂದ ತಮ್ಮ!

ಈ ಕೊಲೆ ಪ್ರಕರಣ ಮರ್ಯಾದಾ ಹತ್ಯೆಯಂತೆ ಕಾಣುತ್ತಿದೆ. ಮಹಿಳಾ ಪೇದೆ ಪ್ರೇಮ ವಿವಾಹವಾಗಿದ್ದು, ಈ ಮದುವೆಗೆ ಆಕೆಯ ಸಹೋದರ ತೀವ್ರ ವಿರೋಧ ವ್ಯಕ್ತಪಡಿಸಿದ್ದನು ಎಂದು ಹೇಳಲಾಗುತ್ತಿದೆ.

ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರನ್ನು ಹತ್ಯೆಗೈದ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಮಹಿಳಾ ಪೊಲೀಸ್ ಪೇದೆಯನ್ನು ಆಕೆಯ ಸ್ವಂತ ಸಹೋದರನೇ ಕೊಲೆ ಮಾಡಿದ್ದಾನೆ.

ಪ್ರಾಥಮಿಕ ವರದಿ ಪ್ರಕಾರ, ಈ ಕೊಲೆ ಪ್ರಕರಣ ಮರ್ಯಾದಾ ಹತ್ಯೆಯಂತೆ ಕಾಣುತ್ತಿದೆ. ಮಹಿಳಾ ಪೇದೆ ಪ್ರೇಮ ವಿವಾಹವಾಗಿದ್ದು, ಈ ಮದುವೆಗೆ ಆಕೆಯ ಸಹೋದರ ತೀವ್ರ ವಿರೋಧ ವ್ಯಕ್ತಪಡಿಸಿದ್ದನು ಎಂದು ಹೇಳಲಾಗುತ್ತಿದೆ.

ಮರ್ಯಾದಾ ಹತ್ಯೆ ಪ್ರಕರಣ?

ಬಹಿರಂಗವಾದ ಮಾಹಿತಿಯ ಪ್ರಕಾರ, ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ಮಹಿಳಾ ಪೊಲೀಸ್ ಪೇದೆ ನಾಗಮಣಿಯನ್ನು ಆಕೆಯ ಸಹೋದರ ಸೋಮವಾರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೂಲಗಳ ಪ್ರಕಾರ, ನಾಗಮಣಿ ತನ್ನ ಸ್ಕೂಟಿಯಲ್ಲಿ ರಾಯಪೋಲ್‌ನಿಂದ ಮನ್ನೆಗುಡಕ್ಕೆ ಹೋಗುತ್ತಿದ್ದಾಗ ರಾಯಪೋಲ್ ತಲುಪಿದ ತಕ್ಷಣ ಆಕೆಯ ಸಹೋದರ ಪರಮೇಶ್ ತನ್ನ ಕಾರಿನಿಂದ ಆಕೆಯ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಆಕೆ ನೆಲದ ಮೇಲೆ ಬಿದ್ದ ನಂತರ ಪರಮೇಶ್ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.

ಪರಮೇಶ್ ತನ್ನ ಸಹೋದರಿ ನಾಗಮಣಿ ಮೇಲೆ ಹಲ್ಲೆ ನಡೆಸಿದಾಗ ಆಕೆ ತೀವ್ರವಾಗಿ ಗಾಯಗೊಂಡಿದ್ದಳು. ಗಂಭೀರ ಗಾಯಗೊಂಡಿದ್ದ ಮಹಿಳಾ ಪೇದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನಾಗಮಣಿ ಅವರ ಇತ್ತೀಚಿನ ಪ್ರೇಮ ವಿವಾಹವೇ ಕೊಲೆಗೆ ಕಾರಣ ಎಂದು ಶಂಕಿಸಿದ್ದಾರೆ. ಇತ್ತೀಚೆಗಷ್ಟೇ ನಾಗಮಣಿ ಮನೆಯವರ ಅಪೇಕ್ಷೆಗೆ ವಿರುದ್ಧವಾಗಿ ಒಂದು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಆಕೆಯ ಸಹೋದರ ಆಕೆಯ ನಿರ್ಧಾರದಿಂದ ಅತೃಪ್ತರಾಗಿದ್ದನು ಎಂದು ನಂಬಲಾಗಿದೆ. ಈ ಸಂಪೂರ್ಣ ಘಟನೆಯ ನಂತರ ಮೃತ ಮಹಿಳಾ ಪೇದೆಯ ಸಹೋದರ ಪರಮೇಶ್ ತಲೆಮರೆಸಿಕೊಂಡಿದ್ದಾನೆ. ಪರಮೇಶ್‌ಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT