ದೆಹಲಿಯ ಸಂಸತ್ ಭವನದ ಬಳಿ ವಾಯು ಮಾಲಿನ್ಯವನ್ನು ತಡೆಗಟ್ಟಲು ನೀರಿನ ಹನಿಗಳನ್ನು ಸಿಂಪಡಿಸಲು ಆಂಟಿಸ್ಮಾಗ್ ಗನ್ ನ್ನು ಬಳಸಲಾಗುತ್ತಿದೆ. 
ದೇಶ

ವಾಯುಗುಣಮಟ್ಟ ಸುಧಾರಣೆ: ದೆಹಲಿ-NCR ಪ್ರದೇಶದಲ್ಲಿ GRAP-4 ನಿರ್ಬಂಧ ಸಡಿಲಿಕೆ

ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟವು 400 ದಾಟಿದಾಗ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ-4 ನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (NCR) ಗಾಗಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ(Graded Response Action Plan-4)ಕ್ರಮಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಮಾಲಿನ್ಯ ಮಟ್ಟವನ್ನು ನಿರ್ವಹಿಸಲು GRAP-2 ಕ್ರಮಗಳನ್ನು ಜಾರಿಗೆ ತರಲು ವಾಯು ಗುಣಮಟ್ಟ ನಿರ್ವಹಣೆ ಆಯೋಗಕ್ಕೆ (CAQM) ಅನುಮತಿ ನೀಡಿದೆ.

ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟವು 400 ದಾಟಿದಾಗ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ-4 ನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರ ರಾಜಧಾನಿಯಲ್ಲಿ GRAP ನಿರ್ಬಂಧಗಳ ಹಂತ 2 ರ ಕೆಳಗೆ ಹೋಗದಂತೆ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಪ್ರದೇಶದಲ್ಲಿ ಎಕ್ಯುಐ ಮತ್ತಷ್ಟು ಸುಧಾರಿಸುವವರೆಗೆ GRAP-3 ನಿಂದ ಕೆಲವು ಹೆಚ್ಚುವರಿ ಕ್ರಮಗಳನ್ನು ನಿರ್ಬಂಧಗಳಲ್ಲಿ ಸೇರಿಸಲು ಆಯೋಗಕ್ಕೆ ಸಲಹೆ ನೀಡಿದೆ.

ಕಳೆದ ಒಂದು ತಿಂಗಳಿನಿಂದ ನಿರಂತರ ವಾಯು ಮಾಲಿನ್ಯದ ವಿರುದ್ಧ ಹೋರಾಡಿದ ನಂತರ, ದೆಹಲಿಯ ಗಾಳಿಯ ಗುಣಮಟ್ಟವು ಸಾಕಷ್ಟು ಸುಧಾರಣೆಯನ್ನು ಕಂಡಿತು, ವಾಯು ಗುಣಮಟ್ಟ ಸೂಚ್ಯಂಕ (AQI) 161ರಲ್ಲಿ ದಾಖಲಾಗಿದೆ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರ್ಗೀಕರಣದ ಪ್ರಕಾರ, 0-50 ನಡುವಿನ ಎಕ್ಯುಐನ್ನು 'ಉತ್ತಮ', 51-100 'ತೃಪ್ತಿದಾಯಕ', 101-200 ಮಧ್ಯಮ, 201-300 ಕಳಪೆ, 301 ಎಂದು ವರ್ಗೀಕರಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಅಕ್ಟೋಬರ್ 30 ರಂದು ಅತ್ಯಂತ ಕಳಪೆ ವರ್ಗಕ್ಕೆ ಹೋದಾಗ ಕ್ಷೀಣಿಸಲು ಪ್ರಾರಂಭಿಸಿತು. ಮುಂದಿನ 15 ದಿನಗಳಲ್ಲಿ, ಎಕ್ಯುಐ ಸ್ಥಿರವಾಗಿ ಅತ್ಯಂತ ಕಳಪೆಶ್ರೇಣಿಯಲ್ಲಿ ಉಳಿಯಿತು, ಎಕ್ಯುಐ ಮಟ್ಟವು 400 ಮೀರುವುದರೊಂದಿಗೆ ಗಾಳಿಯು ವಿಷಕಾರಿಯಾಗಿ ಮಾರ್ಪಟ್ಟಿದ್ದರಿಂದ ಪರಿಸ್ಥಿತಿಯು ನವೆಂಬರ್‌ನ ದ್ವಿತೀಯಾರ್ಧದಲ್ಲಿ ಇನ್ನಷ್ಟು ಹದಗೆಟ್ಟಿತು.

ಆದಾಗ್ಯೂ, ಬಲವಾದ ಗಾಳಿಯಿಂದಾಗಿ ಡಿಸೆಂಬರ್ ಆರಂಭದೊಂದಿಗೆ ಗಾಳಿಯ ಗುಣಮಟ್ಟವು ಸುಧಾರಣೆಯ ಲಕ್ಷಣಗಳನ್ನು ತೋರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT