ಸಾವು (ಸಾಂಕೇತಿಕ ಚಿತ್ರ) 
ದೇಶ

ಮ್ಯಾನ್ಮಾರ್ ನ 6 ಬೇಟೆಗಾರರು ಅಂಡಮಾನ್ ಅರಣ್ಯದಲ್ಲಿ ಆಹಾರ ಸಿಗದೇ ಸಾವು

ಮ್ಯಾನ್ಮಾರ್ ನ 6 ಬೇಟೆಗಾರರು ಅಂಡಮಾನ್ ಅರಣ್ಯದಲ್ಲಿ ಆಹಾರ ಸಿಗದೇ ಸಾವನ್ನಪ್ಪಿದ್ದಾರೆ.

ಅಂಡಮಾನ್&ನಿಕೋಬಾರ್: ಮ್ಯಾನ್ಮಾರ್ ನ 6 ಬೇಟೆಗಾರರು ಅಂಡಮಾನ್ ಅರಣ್ಯದಲ್ಲಿ ಆಹಾರ ಸಿಗದೇ ಸಾವನ್ನಪ್ಪಿದ್ದಾರೆ. ಬೇಟೆಗಾರರು ತಾವು ತಂದಿದ್ದ ಆಹಾರ ಪದಾರ್ಥಗಳು ಖಾಲಿಯಾದ ಪರಿಣಾಮ ಆಹಾರ ಸಿಗದೇ ಸಾವನ್ನಪ್ಪಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೇಟೆಗಾರರು ಸಣ್ಣ ಜ್ವಾಲಾಮುಖಿ ದ್ವೀಪದಲ್ಲಿ ಸಿಲುಕಿದ್ದರು ಅವರು ಕೊಂಡೊಯ್ದಿದ್ದ ಸಣ್ಣ ಬೋಟ್ ನಲ್ಲಿ ಸಹ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ವಾಪಸ್ ಆಗಲು ಅವರಿಗೆ ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಮೃತದೇಹಗಳು ಉತ್ತರ ನಾರ್ಕೊಡಾಮ್ ಹಾಗೂ ಮಧ್ಯ ಅಂಡಮಾನ್ ಜಿಲ್ಲೆಗಳಲ್ಲಿ ಪತ್ತೆಯಾಗಿದ್ದು, ಈ ಪ್ರದೇಶ ಮ್ಯಾನ್ಮಾರ್ ನ ಕೊಕೊ ದ್ವೀಪಕ್ಕೆ 126 ಕಿಮೀ ದೂರದಲ್ಲಿದೆ. ಅಂದಾಜು 7.6 ಸ್ಕ್ವೇರ್ ಕಿ.ಮೀ ವ್ಯಾಪ್ತಿಯ ಪ್ರದೇಶ ಮ್ಯಾನ್ಮಾರ್ ನ ಬೇಟೆಗಾರರು ಬೇಟೆಯಾಡುವ ಪ್ರದೇಶವಾಗಿ ಮಾರ್ಪಾಡಾಗಿದೆ.

ಫೆ.14 ರಂದು ಅಂಡಮಾನ್ ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್ ನಿಂದ ಇಬ್ಬರು ಬೇಟೆಗಾರರನ್ನು ಎದುರುಗೊಂಡಿದ್ದರು. ಅವರನ್ನು ಪ್ರಕ್ರಿಯೆಗಳ ಬಳಿಕ ಸಿಐಡಿ ವಶಕ್ಕೆ ಒಪ್ಪಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT