ರಾಮ ಮಂದಿರ ನಿರ್ಮಾಣ ಕಾರ್ಯ 
ದೇಶ

ರಾಮಮಂದಿರ ನಿರ್ಮಾಣಕ್ಕೆ ನಡೆದ ಆಂದೋಲನ ದೇಶದ ಸ್ವಾತಂತ್ರ್ಯ ಚಳವಳಿಗಿಂತ ದೊಡ್ಡದು: ವಿಹೆಚ್ ಪಿ ನಾಯಕ

1947ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನಕ್ಕಿಂತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಆಂದೋಲನ ದೊಡ್ಡದು ಎಂದು ವಿಶ್ವ ಹಿಂದೂ ಪರಿಷತ್ (VHP) ನಾಯಕ ಶರದ್ ಶರ್ಮಾ ವ್ಯಾಖ್ಯಾನಿಸಿದ್ದಾರೆ.

ಲಕ್ನೋ: 1947ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಆಂದೋಲನಕ್ಕಿಂತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಆಂದೋಲನ ದೊಡ್ಡದು ಎಂದು ವಿಶ್ವ ಹಿಂದೂ ಪರಿಷತ್ (VHP) ನಾಯಕ ಶರದ್ ಶರ್ಮಾ ವ್ಯಾಖ್ಯಾನಿಸಿದ್ದಾರೆ.

ಆಂದೋಲನಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಭಗವಾನ್ ರಾಮಲಲ್ಲಾ ಮಂದಿರದ ನಿರ್ಮಾಣಕ್ಕೆ ಅಂತಿಮ ರೂಪ ನೀಡಲು ಸುಮಾರು 500 ವರ್ಷಗಳು ಬೇಕಾಯಿತು ಎಂದು ಹೇಳಿದರು. 

"ರಾಮ ಮಂದಿರ ಆಂದೋಲನವು ಸ್ವಾತಂತ್ರ್ಯ ಚಳವಳಿಗಿಂತ ದೊಡ್ಡ ಚಳವಳಿಯಾಗಿದೆ. ಇದು ಧಾರ್ಮಿಕ ಚಳವಳಿಯಾಗಿದ್ದು, ಧರ್ಮ, ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಸಂಬಂಧಿಸಿದ ಜನರು ಭಾಗವಹಿಸಿ ಅದನ್ನು ಪರಾಕಾಷ್ಠೆಗೆ ತಂದರು. ಲಕ್ಷಾಂತರ ಜನರು ಪ್ರಾಣತ್ಯಾಗ ಮಾಡಿದರು. ಇದು 500 ವರ್ಷಗಳನ್ನು ತೆಗೆದುಕೊಂಡಿತು. ಇದು 1947ಕ್ಕಿಂತ ದೊಡ್ಡ ಚಳವಳಿ ಎಂದು ಭಾವಿಸಬಹುದು ಎಂದು ಶರ್ಮಾ ಹೇಳಿದರು.

ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಭಗವಾನ್ ರಾಮ್ ಲಲ್ಲಾ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಒಟ್ಟು 7,000 ಆಮಂತ್ರಣ ಪತ್ರಗಳನ್ನು ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.

"ದೇಶದ ಸುಮಾರು ನಾಲ್ಕು ಸಾವಿರ ಸಂತರು ಮತ್ತು ಮೂರು ಸಾವಿರ ಇತರ ಜನರನ್ನು ಆಹ್ವಾನಿಸಲಾಗುತ್ತಿದೆ". ಮಹಾಮಸ್ತಕಾಭಿಷೇಕ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ, ಅದರ ಮೊದಲ ಪುಟದಲ್ಲಿ ಭಗವಾನ್ ರಾಮ ಲಲ್ಲಾ ಅವರ ಚಿತ್ರವಿದೆ. ಅಲ್ಲದೆ, ಕಾರ್ಯಕ್ರಮದ ವಿವಿಧ ದಿನಾಂಕಗಳು ಮತ್ತು ವಿವರಗಳನ್ನು ನಮೂದಿಸಲಾಗಿದೆ ಎಂದು ಅವರು ಹೇಳಿದರು.

ಇದರ ಹೊರತಾಗಿ, ನಾವು 1949 ರಿಂದ ರಾಮಮಂದಿರ ಚಳವಳಿಯಲ್ಲಿ ಪಾತ್ರವಹಿಸಿದ ಜನರ ಬಗ್ಗೆ ಒಂದು ಕಿರುಪುಸ್ತಕವನ್ನು ಒದಗಿಸುತ್ತಿದ್ದೇವೆ. ಈಗಿನ ಪೀಳಿಗೆಗೆ, ಅವರು ಚಳವಳಿಯ ಭಾಗವಾಗಿದ್ದ ದಂತಕಥೆಗಳ ಬಗ್ಗೆ ತಿಳಿಯುತ್ತಾರೆ ಎಂದರು. 

ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT