ಮಗನ ಹತ್ಯೆ ಪ್ರಕರಣದ ಆರೋಪಿ ಸುಚನ ಸೇಠ್ 
ದೇಶ

Suchana Seth: ಸಿಇಒ ಮಗನ ಕೊಲೆ ಪ್ರಕರಣ: ಆರೋಪಿ ಸುಚನ ಸೇಠ್ ಕಸ್ಟಡಿ ಅವಧಿ ವಿಸ್ತರಣೆ

ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಆರೋಪಿ ತಾಯಿ ಸುಚನ ಸೇಠ್ ಅವರ ಬಂಧನ ಅವಧಿಯನ್ನು ಗೋವಾ ಕೋರ್ಟ್ ವಿಸ್ತರಿಸಿದೆ.

ಪಣಜಿ: ತನ್ನ ನಾಲ್ಕು ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಆರೋಪಿ ತಾಯಿ ಸುಚನ ಸೇಠ್ ಅವರ ಬಂಧನ ಅವಧಿಯನ್ನು ಗೋವಾ ಕೋರ್ಟ್ ವಿಸ್ತರಿಸಿದೆ.

ಮಗನನ್ನು ಕೊಂದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ಟಾರ್ಟಪ್ ಸಿಇಒ ಸುಚನಾ ಸೇಠ್ ಅವರ ಪೊಲೀಸ್ ಕಸ್ಟಡಿಯನ್ನು ಗೋವಾ ನ್ಯಾಯಾಲಯವು ಸೋಮವಾರ ಮತ್ತೆ ಐದು ದಿನಗಳವರೆಗೆ ವಿಸ್ತರಿಸಿದೆ. ಆರು ದಿನಗಳ ಆರಂಭಿಕ ಬಂಧನ ಅವಧಿ ಮುಗಿದ ನಂತರ ಸೇಠ್ ಅವರನ್ನು ಇಂದು ಗೋವಾ ಮಕ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕಲಾಂಗುಟೆ ಪೊಲೀಸರು ಆಕೆಯ ಕಸ್ಟಡಿಯನ್ನು ವಿಸ್ತರಿಸುವಂತೆ ಕೋರಿದ್ದು, ತನಿಖೆ ಇನ್ನೂ ಮುಕ್ತಾಯವಾಗಬೇಕಿದೆ. ಸುಚನಾ ಸೇಠ್ (39 ವರ್ಷ) ಜನವರಿ 8 ರಂದು ತನ್ನ ಮಗನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಗೋವಾಕ್ಕೆ ತರುವಾಗ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಕರ್ನಾಟಕದ ಚಿತ್ರದುರ್ಗದಲ್ಲಿ ಬಂಧಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ಇಂದು ಗೋವಾದ ಮಾಪುಸಾ ಪಟ್ಟಣದ ನ್ಯಾಯಾಲಯ ನಡೆದಿದ್ದು, ಆರೋಪಿ ತಾಯಿ ಸುಚನ ಸೇಠ್ ರನ್ನು ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಗೋವಾದ ಕ್ಯಾಂಡೋಲಿಮ್ ಮೂಲದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ಕೊಂದ ಆರೋಪ ಆಕೆಯ ಮೇಲಿದ್ದು, ಆರೋಪಿ ತಾಯಿಯು ತನಿಖಾಧಿಕಾರಿಗಳಿಗೆ ಸಹಕರಿಸುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. "ನಾವು ಅಕೆಯನ್ನು ವಿಚಾರಣೆ ಮಾಡಲು ಹೆಚ್ಚಿನ ಸಮಯವನ್ನು ಬಯಸಿದ್ದರಿಂದ ನಾವು ಅಕೆಯ ಕಸ್ಟಡಿಯನ್ನು ವಿಸ್ತರಿಸಲು ಕೇಳಿದ್ದೆವು. ನಾವು ಆಕೆಯ ಡಿಎನ್ಎ ಮಾದರಿಯನ್ನು ತೆಗೆದುಕೊಳ್ಳುವಂತಹ ಇತರ ಔಪಚಾರಿಕತೆಗಳನ್ನು ಸಹ ನಡೆಸಬೇಕಾಗಿದೆ" ಎಂದು ಹೇಳಿದರು. 

ಸೇಠ್ ಅವರ ಪತಿ ವೆಂಕಟ್ ರಾಮನ್ ಹೇಳಿಕೆಯನ್ನು ಈಗಾಗಲೇ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಗೋವಾ ಪೊಲೀಸರ ಎದುರೇ ಕಿತ್ತಾಡಿಕೊಂಡಿದ್ದ ಗಂಡ-ಹೆಂಡತಿ
ಈ ಹಿಂದೆ ವಿಚಾರಣೆಗೆ ಕರೆದಿದ್ದ ಪೊಲೀಸರ ಎದುರೇ ಗಂಡ-ಹೆಂಡತಿ ಪರಸ್ಪರ ಕಿತ್ತಾಡಿಕೊಂಡಿದ್ದರು. ಗೋವಾ ಪೊಲೀಸ್ ಠಾಣೆಗೆ ಆಗಮಿಸಿದ ಪತಿ ವೆಂಕಟ ರಮಣ್ ಮತ್ತು ಸುಚನಾ ಸೇಠ್ 15 ನಿಮಿಷಗಳ ಕಾಲ ಮುಖಾಮುಖಿಯಾದರು. ಆದರೆ ಇಡಿ ಸನ್ನಿವೇಶವು ಪರಸ್ಪರ ದೋಷಾರೋಪಣೆ ಹಾಗೂ ವಾಗ್ವಾದದ ಹೊರತಾಗಿ ಬೇರೇನೂ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗನ ಹತ್ಯೆ ನಡೆದಾಗ ಸುಚನಾ ಅವರ ಪತಿ ವೆಂಕಟ್ ರಮಣ್ ವಿದೇಶದಲ್ಲಿದ್ದರು. ಅಪ್ಪನನ್ನು ನೋಡಬೇಕು ಎಂದು ಮಗ ಬಯಕೆ ವ್ಯಕ್ತಪಡಿಸಿರಬಹುದು. ಇದನ್ನು ಸಹಿಸದ ಸುಚನಾ ಕೋಪದಿಂದ ಅವನನ್ನು ಕೊಂದಿರಬಹುದು ಎಂದು ವೆಂಕಟ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT