(ಸಾಂಕೇತಿಕ ಚಿತ್ರ) 
ದೇಶ

ಹದಿಹರೆಯದ ಶೇ.25ರಷ್ಟು ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ 2ನೇ ತರಗತಿ ಪಠ್ಯ ಓದಲೂ ಅಶಕ್ತ!

ಭಾರತದಲ್ಲಿ 14-18 ರ ನಡುವಿನ ವಯಸ್ಸಿನ ಶೇ.25 ರಷ್ಟು ಮಕ್ಕಳಿಗೆ ತಮ್ಮ ಮಾತೃ ಭಾಷೆಯಲ್ಲಿ 2 ನೇ ತರಗತಿ ಶ್ರೇಣಿಯ ಪಠ್ಯಗಳನ್ನು ನಿರರ್ಗಳವಾಗಿ ಓದಲು ಮಾತ್ರ ಸಾಧ್ಯ ಎಂಬ ಮಾಹಿತಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ನವದೆಹಲಿ: ಭಾರತದಲ್ಲಿ 14-18 ರ ನಡುವಿನ ವಯಸ್ಸಿನ ಶೇ.25 ರಷ್ಟು ಮಕ್ಕಳಿಗೆ ತಮ್ಮ ಮಾತೃ ಭಾಷೆಯಲ್ಲಿ 2 ನೇ ತರಗತಿ ಶ್ರೇಣಿಯ ಪಠ್ಯಗಳನ್ನು ನಿರರ್ಗಳವಾಗಿ ಓದಲು ಮಾತ್ರ ಸಾಧ್ಯ ಎಂಬ ಮಾಹಿತಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
 
ವಾರ್ಷಿಕ ಶಿಕ್ಷಣ ಸ್ಥಿತಿ ವರದಿ (ಎಎಸ್ಇಆರ್) ಬಿಡುಗಡೆ ಮಾಡಿರುವ ವರದಿ ಇದಾಗಿದೆ. ಇಂಗ್ಲಿಷ್ ಓದುವ ವಿಷಯಕ್ಕೆ ಬಂದರೆ, ಸುಮಾರು 42% ಜನರಿಗೆ ಸರಳ ವಾಕ್ಯಗಳನ್ನು ಓದಲು ಸಾಧ್ಯವಾಗುತ್ತಿಲ್ಲ. "ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಮಂದಿ (57.3%) ಇಂಗ್ಲಿಷ್‌ನಲ್ಲಿ ವಾಕ್ಯಗಳನ್ನು ಓದಬಲ್ಲರು. ಇಂಗ್ಲಿಷ್‌ನಲ್ಲಿ ವಾಕ್ಯಗಳನ್ನು ಓದಬಲ್ಲವರಲ್ಲಿ, ಸುಮಾರು ಮುಕ್ಕಾಲು ಭಾಗದಷ್ಟು ಜನರು ಅದರ ಅರ್ಥಗಳನ್ನು (73.5%) ಹೇಳಬಲ್ಲರು” ಎಂದು ವರದಿ ಹೇಳಿದೆ.

ಗಣಿತ ಹೆಚ್ಚಿನವರಿಗೆ ಆಸಕ್ತಿ ಇಲ್ಲದ ವಿಷಯವಾಗಿದೆ. ಸಮೀಕ್ಷೆಗೆ ಒಳಪಟ್ಟ 34,745 ಮಂದಿ ಹರೆಯದವರ ಪೈಕಿ ಶೇ.43.3 ರಷ್ಟು ಮಂದಿಗೆ 3ನೇ ಹಾಗೂ 4 ನೇ ತರಗತಿಗಳ ವಿದ್ಯಾರ್ಥಿಗಳಲ್ಲಿ ಇರಬೇಕಿರುವ ಕೌಶಲ್ಯವಿದ್ದು ಮೂರು-ಅಂಕಿಯ ಸಂಖ್ಯೆಯನ್ನು ಏಕ-ಅಂಕಿಯ ಸಂಖ್ಯೆಯಿಂದ ಭಾಗಿಸುವ ಸಮಸ್ಯೆಗಳನ್ನು ಬಗೆಹರಿಸುವುದು ಸಾಧ್ಯವಾಗಿದೆ. ಆದಾಗ್ಯೂ, 2017 ರ ಸಮೀಕ್ಷೆಯ ಅಂಕಿ- ಅಂಶಗಳಿಗಿಂತಲೂ ಇದು  ಸುಧಾರಿತ ಸ್ಥಿತಿಯಾಗಿದೆ. 2017 ರಲ್ಲಿ ಕೇವಲ 39.5% ಮಂದಿ ಮಾತ್ರ ಇದೇ ರೀತಿಯ ಸಮಸ್ಯೆಯನ್ನು ಪರಿಹರಿಸಲು ಸಮರ್ಥರಾಗಿದ್ದರು.

ಒಟ್ಟಾರೆಯಾಗಿ, ಪ್ರತಿಕ್ರಿಯಿಸಿದವರಲ್ಲಿ 86.8% ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ. ವಯಸ್ಸಾದ ಯುವಕರು ದಾಖಲಾಗದಿರುವ ಸಾಧ್ಯತೆ ಹೆಚ್ಚಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ 18 ವರ್ಷ ವಯಸ್ಸಿನ 32.6% ರಷ್ಟು ಪ್ರಸ್ತುತ ದಾಖಲಾಗಿಲ್ಲದೇ ಇದ್ದರೆ, 14 ವರ್ಷ ವಯಸ್ಸಿನ 3.9% ಮಂದಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಾಗಿಲ್ಲ.

89% ಮನೆಯಲ್ಲಿ ಸ್ಮಾರ್ಟ್‌ಫೋನ್‌ ಗಳು ಮಕ್ಕಳಿಗೆ ಲಭ್ಯವಿದೆ.  ಮತ್ತು 94.7% ಪುರುಷರು ಮತ್ತು 89.8% ಮಹಿಳೆಯರು ಅದನ್ನು ಹೇಗೆ ಬಳಸಬೇಕೆಂದು ತಿಳಿದಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಆದಾಗ್ಯೂ, ಕೇವಲ 19.8% ಮಹಿಳೆಯರು ಮತ್ತು 43.7% ಪುರುಷರು ಮಾತ್ರ ಸ್ಮಾರ್ಟ್‌ಫೋನ್ ಹೊಂದಿದ್ದಾರೆ.

ಈ ಸಮೀಕ್ಷೆಯು 10 ನೇ ತರಗತಿಯ ನಂತರ ವಿದ್ಯಾರ್ಥಿಗಳಿಗೆ ಮಾನವಶಾಸ್ತ್ರ ಕ್ಷೇತ್ರ (Humanities) ಹೆಚ್ಚಿನ ಆದ್ಯತೆಯಾಗಿದೆ ಎಂಬುದನ್ನು ಕಂಡುಕೊಂಡಿದೆ. ಸಮೀಕ್ಷೆಯಲ್ಲಿ ಭಾಗಿಯಾದ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಲ್ಲಿ 55% ಮಾನವಶಾಸ್ತ್ರ, 31% ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (STEM) ಮತ್ತು 9% ವಾಣಿಜ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ಸರ್ಕಾರದ ಒತ್ತಡದ ಮಧ್ಯೆ ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಯುವಕರ ಪ್ರಮಾಣವು ಕುಸಿಯುತ್ತಿದೆ ಎಂದು ವರದಿಯು ಗಮನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT