ಚೆನ್ನೈನಲ್ಲಿ ನಡೆದ ಥಿಂಕ್ ಎಡು 2024 ಸಮಾವೇಶದಲ್ಲಿ ಗೋಪಾಲಕೃಷ್ಣ ಗಾಂಧಿ ಮಾತನಾಡಿದರು 
ದೇಶ

ThinkEdu Conclave 2024: ಗಾಂಧಿ ಪರಂಪರೆ ಜೀವಂತ; ನಿರ್ಭೀತ ರಾಷ್ಟ್ರದ ಪ್ರತಿಪಾದನೆ ಮಾಡಿದ ಗೋಪಾಲಕೃಷ್ಣ ಗಾಂಧಿ

ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ಶಾಸ್ತ್ರ ವಿಶ್ವವಿದ್ಯಾಲಯವು ಪ್ರಸ್ತುತಪಡಿಸಿದ ಎರಡು ದಿನಗಳ 13 ನೇ ಥಿಂಕ್‌ಎಡು ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ್ದಾರೆ. “ಮಹಾತ್ಮರ ಹೆಜ್ಜೆಯಲ್ಲಿ: ದೇಶ ಪರಂಪರೆ” ಎಂಬ ಶೀರ್ಷಿಕೆಯಡಿ ಭಾಷಣ ಮಾಡಿದರು.

ಚೆನ್ನೈ: ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಗೋಪಾಲಕೃಷ್ಣ ಗಾಂಧಿ ಅವರು ಶಾಸ್ತ್ರ ವಿಶ್ವವಿದ್ಯಾಲಯವು ಪ್ರಸ್ತುತಪಡಿಸಿದ ಎರಡು ದಿನಗಳ 13 ನೇ ಥಿಂಕ್‌ಎಡು ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ್ದಾರೆ. “ಮಹಾತ್ಮರ ಹೆಜ್ಜೆಯಲ್ಲಿ: ದೇಶ ಪರಂಪರೆ” ಎಂಬ ಶೀರ್ಷಿಕೆಯಡಿ ಭಾಷಣ ಮಾಡಿದರು.

ಹಿರಿಯ ಪತ್ರಕರ್ತೆ ಕಾವೇರಿ ಬಾಮ್‌ಝೈ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನವು ಮಹಾತ್ಮ ಗಾಂಧಿಯವರ ಜೀವನ ಮತ್ತು ಅವರು ಬಿಟ್ಟುಹೋದ ನಿರಂತರ ಪರಂಪರೆಯ ಆಳವಾದ ಒಳನೋಟಗಳೊಂದಿಗೆ ತೆರೆದುಕೊಂಡಿತು.

ಜನರ ಜೀವನದಲ್ಲಿ ಭಯದ ಸರ್ವವ್ಯಾಪಿತ್ವವನ್ನು ಒಪ್ಪಿಕೊಳ್ಳುವ ಮೂಲಕ ಗೋಪಾಲಕೃಷ್ಣ ಗಾಂಧಿ ಪ್ರಾರಂಭಿಸಿದರು. "ಹರಿ ತುಮ್ ಹರೋ, ಹರಿ ತುಮ್ ಹರೋ" ಎಂಬ ಭಜನೆಯಿಂದ ಸ್ಫೂರ್ತಿ ಪಡೆದ ಅವರು ಜನರ ಸಂಕಷ್ಟಗಳನ್ನು ನಿವಾರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಗೋಪಾಲಕೃಷ್ಣ ಗಾಂಧಿಯವರು ಮಹಾತ್ಮ ಗಾಂಧಿಯವರ ಜೀವನದಿಂದ ಆಳವಾಗಿ ಪ್ರಭಾವ ಹೊಂದಿರುವ ಬಗ್ಗೆಯೂ ಹೇಳಿಕೊಂಡರು, ರಂಬಾ ಎಂಬ ಅವರ ಮನೆಗೆಲಸದ ಪರಿಚಾರಕಿಯನ್ನು ವಿವರಿಸಿದರು. 'ರಾಮ ನಾಮ' ಪುನರಾವರ್ತನೆ ಮಾಡಿದರೆ ಭಯ ನಿವಾರಣೆಯಾಗುತ್ತದೆ ಎಂಬುದನ್ನು ಮಹಾತ್ಮಾ ಗಾಂಧಿಯವರು ಹೇಳಿಕೊಟ್ಟದ್ದನ್ನು ಹಂಚಿಕೊಂಡರು. ಇದು ಶಕ್ತಿಯ ಮೂಲವಾಗಿದೆ ಎಂದರು.

“ಮಹಾತ್ಮಾ ಗಾಂಧಿ ಮತ್ತು ಹಂತಕರ ನಡುವೆ ರಾಮನ ಹೆಸರನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ರಾಮ, ರಾಮ, ರಾಮ ಎಂದು ಹೇಳಿ ಕೊನೆಯ ಉಸಿರು ಬಿಟ್ಟರು ಎಂದು ಗೋಪಾಲಕೃಷ್ಣ ಗಾಂಧಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT