ರೆಂಜಿತ್ ಶ್ರೀನಿವಾಸನ್ 
ದೇಶ

ಬಿಜೆಪಿ ಮುಖಂಡ ರೆಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣ: ಎಲ್ಲಾ 15 ಪಿಎಫ್‌ಐ/ಎಸ್‌ಡಿಪಿಐ ಆರೋಪಿಗಳಿಗೆ ಗಲ್ಲು ಶಿಕ್ಷೆ

2021ರ ಡಿಸೆಂಬರ್‌ನಲ್ಲಿ ನಡೆದ ಬಿಜೆಪಿ ಮುಖಂಡ ರೆಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದ 15 ಆರೋಪಿಗಳಿಗೆ ಕೇರಳದ ಕೆಳ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಅಲಪ್ಪುಳ: 2021ರ ಡಿಸೆಂಬರ್‌ನಲ್ಲಿ ನಡೆದ ಬಿಜೆಪಿ ಮುಖಂಡ ರೆಂಜಿತ್ ಶ್ರೀನಿವಾಸ್ ಹತ್ಯೆ ಪ್ರಕರಣದ 15 ಆರೋಪಿಗಳಿಗೆ ಕೇರಳದ ಕೆಳ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿ ಜಿ ಶ್ರೀದೇವಿ ಅವರು ಈ ಶಿಕ್ಷೆಯನ್ನು ಪ್ರಕಟಿಸಿದರು. ಬಿಜೆಪಿಯ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರೆಂಜಿತ್ ಅವರನ್ನು ಡಿಸೆಂಬರ್ 19, 2021 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಗೆ ಸಂಬಂಧಿಸಿದ ವ್ಯಕ್ತಿಗಳು ಅಲಪ್ಪುಳ ಪುರಸಭೆಯ ವೆಲ್ಲಕಿನಾರ್‌ನಲ್ಲಿರುವ ಅವರ ಮನೆಯಲ್ಲಿ ಹತ್ಯೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. 

ಪ್ರಾಸಿಕ್ಯೂಷನ್ ಪ್ರಕಾರ, ರೆಂಜಿತ್ ಹತ್ಯೆಯು ಹಿಂದಿನ ರಾತ್ರಿ ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಕೆ ಎಸ್ ಶಾನ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಎಸ್‌ಡಿಪಿಐ ಕಾರ್ಯಕರ್ತರು ನಡೆಸಿದ ಪ್ರತೀಕಾರದ ದಾಳಿಯಾಗಿದೆ.

ಪ್ರಕರಣದಲ್ಲಿ ಆರೋಪಿಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಅವರ ಹೆಸರುಗಳು ಅಂಬನಕುಳಂಗರ ಮಾಚಂಟು ಕಾಲೋನಿಯ ನೈಸಂ; ಅಜ್ಮಲ್, ವಡಕ್ಕೆಚಿರಾಪುರಂ, ಅಂಬಲಕ್ಕಡವು, ಮನ್ನಂಚೇರಿ; ಆಲಪ್ಪುಳದ ಮುಂಡುವಾಡಕ್ಕಲ್‌ನ ಅನೂಪ್; ಈರಕ್ಕಟ್ಟೆಯ ಮುಹಮ್ಮದ್ ಅಸ್ಲಂ, ಅವಲೂಕುನ್ನು ಆರ್ಯಡ್; ಂಜಾರವೇಲಿಲ್ ಮನ್ನಂಚೇರಿಯ ಅಬ್ದುಲ್ ಕಲಾಂ ಅಲಿಯಾಸ್ ಸಲಾಂ; ದಾರುಸಾಬೀನ್ ಅಡಿವಾರಂ ಮನ್ನಂಚೇರಿಯ ಅಬ್ದುಲ್ ಕಲಾಂ; ತೈವೇಲಿಕ್ಕಕಂ ಅಲಪ್ಪುಳದ ಸರಫುದ್ದೀನ್; ಉಡಿಂಬಿತರ ಮನ್ನಂಚೇರಿಯ ಮನ್ಶಾದ್; ಆಲಪ್ಪುಳದ ಚಿರಾಯಿಲ್ ಕಡವತುಸ್ಸೆರಿಯ ಜಸೀಬ್ ರಾಜ್; ವಟ್ಟಕ್ಕಟ್ಟುಸ್ಸೆರಿ ಮುಲ್ಲಕ್ಕಲ್ ನ ನವಾಸ್; ತಯ್ಯಿಲ್ ಕೋಮಲಾಪುರದ ಸಮೀರ್; ಕನ್ನಾರುಕಾಡ್ ಉತ್ತರ ಆರ್ಯದ ನಜೀರ್; ಚಾವಡಾಯಿಲ್ ಮನ್ನಂಚೇರಿಯ ಜಾಕೀರ್ ಹುಸೇನ್; ತೆಕ್ಕೆವೇಲಿಯಿಲ್ ಮನ್ನಂಚೇರಿಯ ಶಾಜಿ; ಮತ್ತು ನೂರುದ್ದೀನ್‌ಪುರಾಯಿಲ್, ಮುಲ್ಲಕಲ್‌ನ ಶೆರ್ನಾಜ್ ಅಶ್ರಫ್ ಆಗಿವೆ.

ಅಲಪ್ಪುಳ ಡಿವೈಎಸ್ಪಿ ಎನ್ ಆರ್ ಜಯರಾಜ್ ನೇತೃತ್ವದ ವಿಶೇಷ ತಂಡ ಪ್ರಕರಣದ ತನಿಖೆ ನಡೆಸಿತ್ತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಾಪ್ ಜಿ ಪಡಿಕ್ಕಲ್ ಮತ್ತು ವಕೀಲರಾದ ಶ್ರೀದೇವಿ ಪ್ರತಾಪ್, ಶಿಲ್ಪಾ ಶಿವನ್ ಮತ್ತು ಹರೀಶ್ ಕಟ್ಟೂರ್ ಅವರು ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದರು. ನ್ಯಾಯಾಲಯವು 156 ಸಾಕ್ಷಿಗಳು, ಸುಮಾರು ಸಾವಿರ ದಾಖಲೆಗಳು ಮತ್ತು ನೂರು ಸಾಕ್ಷ್ಯಗಳನ್ನು ಪರಿಶೀಲಿಸಿತು.

ಈ ಹಿಂದೆ, ಹೈಕೋರ್ಟ್ ಆದೇಶದ ಆಧಾರದ ಮೇಲೆ ಪ್ರಕರಣದ ವಿಚಾರಣೆಯನ್ನು ಅಲಪ್ಪುಳದಿಂದ ಮಾವೆಲಿಕ್ಕರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ವಿಚಾರಣೆಯನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಹೈಕೋರ್ಟ್ ಮೊಕದ್ದಮೆ ಹೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT