ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ 
ದೇಶ

ಅಜಿತ್ ಪವಾರ್ NCP ಬಣ ತೊರೆದ ನಾಲ್ವರು ಪ್ರಮುಖ ನಾಯಕರು ಶರದ್ ಪವಾರ್ ಬಣಕ್ಕೆ ಸೇರ್ಪಡೆ

ಎನ್ ಸಿಪಿಯ ಪಿಂಪ್ರಿ ಚಿಂಚ್ವಾಡ ಘಟಕದ ಮುಖ್ಯಸ್ಥ ಅಜಿತ್ ಗವ್ಹಾನೆ ಹಾಗೂ ಇನ್ನಿತರ ನಾಯಕರು ಪುಣೆಯಲ್ಲಿರುವ ಪವಾರ್ ನಿವಾಸದಲ್ಲಿ ಎನ್ ಸಿಪಿ ಶರತ್ ಪವಾರ್ ಬಣಕ್ಕೆ ಸೇರ್ಪಡೆಯಾದರು.

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿದ್ದು, ಎನ್ ಸಿಪಿಯ ಹಲವು ನಾಯಕರು ಅಜಿತ್ ಪವಾರ್ ಬಣ ತೊರೆದು ಶರದ್ ಪವಾರ್ ಬಣ ಸೇರುತ್ತಿದ್ದಾರೆ.

ಎನ್ ಸಿಪಿಯ ಪಿಂಪ್ರಿ ಚಿಂಚ್ವಾಡ ಘಟಕದ ಮುಖ್ಯಸ್ಥ ಅಜಿತ್ ಗವ್ಹಾನೆ ಹಾಗೂ ಇನ್ನಿತರ ನಾಯಕರು ಪುಣೆಯಲ್ಲಿರುವ ಪವಾರ್ ನಿವಾಸದಲ್ಲಿ ಎನ್ ಸಿಪಿ ಶರತ್ ಪವಾರ್ ಬಣಕ್ಕೆ ಸೇರ್ಪಡೆಯಾದರು.

ಎನ್‌ಸಿಪಿಯ ಪಿಂಪ್ರಿ-ಚಿಂಚ್‌ವಾಡ್ ಘಟಕದ ಇತರ ಮೂವರು ಹಿರಿಯ ನಾಯಕರಾದ ರಾಹುಲ್ ಭೋಸ್ಲೆ, ಪಂಕಜ್ ಭಾಲೇಕರ್ ಮತ್ತು ಯಶ್ ಸಾನೆ ಅವರು ಮಂಗಳವಾರ ಪಕ್ಷವನ್ನು ತೊರೆದರು ಸಂಸ್ಥಾಪಕರ ಶಿಬಿರವನ್ನು ಸೇರಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ, ಶರದ್ ಪವಾರ್ ಅವರು ಕಳೆದ 60 ವರ್ಷಗಳಿಂದ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಮತ್ತು ಪ್ರತಿಪಕ್ಷದ ಜನರು ಸಹ ಅವರನ್ನು ಬಹಳ ಭರವಸೆಯಿಂದ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಕ್ಷದ ಅನೇಕ ಜನರಿಗೆ ವಿಭಿನ್ನ ಅನುಭವಗಳಿವೆ ಎಂದು ನಾನು ಭಾವಿಸುತ್ತೇನೆ. ನಮ್ಮ ಅಭಿವೃದ್ಧಿಯ ಸಿದ್ಧಾಂತವು ಗಟ್ಟಿಯಾಗಿ ಉಳಿಯುವುದನ್ನು ನಾವು ಯಾವಾಗಲೂ ಖಚಿತಪಡಿಸಿಕೊಂಡಿದ್ದೇವೆ. ಶರತ್ ಪವಾರ್ ಕಳೆದ 60 ವರ್ಷಗಳಿಂದ ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ನಿರಂತರವಾಗಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಪವಾರ್ ಅವರ ಮೇಲೆ ನಮಗೆ ನಂಬಿಕೆ ಇದೆ. ಸಿದ್ಧಾಂತದ ಬೆಂಬಲಿಗರು ಮತ್ತು ವಿಪಕ್ಷದಲ್ಲಿರುವ ಅನೇಕ ಜನರು ಸಹ ಅವರ ಕಡೆಗೆ ಹೆಚ್ಚಿನ ಭರವಸೆಯಿಂದ ನೋಡುತ್ತಾರೆ, ಅದಕ್ಕಾಗಿಯೇ ಜನರು ಅವರನ್ನು ಸೇರುತ್ತಿದ್ದಾರೆ,” ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ.

"ನೀವು ಪಿಂಪ್ರಿ-ಚಿಂಚ್‌ವಾಡ್ ಅನ್ನು ನೋಡಿದರೆ, ಅಜಿತ್ ದಾದಾ ಮತ್ತು ಪವಾರ್ ಸಾಹಬ್ ಇಬ್ಬರೂ ಅದರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಆದರೆ 2017 ರಿಂದ, ಬಿಜೆಪಿಯು ಪಿಪಿಎಂಸಿಯನ್ನು ಆಳುತ್ತಿದೆ. ಇಲ್ಲಿ ಅಭಿವೃದ್ಧಿ ಕೆಲಸಗಳು ತಪ್ಪಾದ ರೀತಿಯಲ್ಲಿ ನಡೆದಿವೆ, ವಿಶೇಷವಾಗಿ ನೀವು ಇತರ ಕ್ಷೇತ್ರಗಳನ್ನು ನೋಡಿದರೆ. ಇಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಹಾಲಿ ಶಾಸಕರೇ ಇದಕ್ಕೆ ಕಾರಣ ಎಂದು ಗವ್ಹಾನೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT