ಮನೋಜ್ ಸೋನಿ TNIE
ದೇಶ

ಆಧ್ಯಾತ್ಮಿಕ ಕರೆ: ಸೇವಾವಧಿ ಮುಕ್ತಾಯಕ್ಕೂ ಮುನ್ನವೇ UPSC ಅಧ್ಯಕ್ಷ ಸ್ಥಾನ ತೊರೆದ ಮನೋಜ್ ಸೋನಿ!

ಕೇಂದ್ರ ಲೋಕಸೇವಾ ಆಯೋಗದ (UPSC) ಅಧ್ಯಕ್ಷ ಮನೋಜ್ ಸೋನಿ ಅವರು ಅಧಿಕಾರಾವಧಿ 2029ಕ್ಕೆ ಕೊನೆಗೊಳ್ಳುತ್ತಿತ್ತು. ಆದರೆ ಅವಧಿ ಮುಗಿಯುವ ಐದು ವರ್ಷಗಳ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗದ (UPSC) ಅಧ್ಯಕ್ಷ ಮನೋಜ್ ಸೋನಿ ಅವರು ಅಧಿಕಾರಾವಧಿ 2029ಕ್ಕೆ ಕೊನೆಗೊಳ್ಳುತ್ತಿತ್ತು. ಆದರೆ ಅವಧಿ ಮುಗಿಯುವ ಐದು ವರ್ಷಗಳ ಮೊದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

2017ರಿಂದ UPSC ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಮನೋಜ್ ಸೋನಿ ಅವರು, 2023ರ ಮೇ 16ರಂದು UPSC ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯು ಆರು ವರ್ಷಗಳಿಗಿತ್ತು. ಆದರೆ ಸೋನಿ ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಅದನ್ನು ಸ್ವೀಕರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.

ಮನೋಜ್ ಸೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ನಿಕಟ ಸಂಬಂಧಕ್ಕಾಗಿ ಹೆಸರುವಾಸಿಯಾಗಿದ್ದಾರೆ, ಅವರು 2005 ರಲ್ಲಿ ವಡೋದರಾದ ಎಂಎಸ್ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಉಪಕುಲಪತಿಯಾಗಿ ನೇಮಕಗೊಂಡರು. UPSC ಗೆ ಸೇರುವ ಮೊದಲು, ಅವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಲ್ಲಿ (BAOU) ಎರಡು ಅವಧಿಗಳನ್ನು ಒಳಗೊಂಡಂತೆ ಗುಜರಾತ್‌ನ ಎರಡು ವಿಶ್ವವಿದ್ಯಾಲಯಗಳಲ್ಲಿ ಮೂರು ಅವಧಿಗೆ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.

UPSC ಕೆಲಸವೇನು?

ನಾಗರಿಕ ಸೇವಾ ಪರೀಕ್ಷೆಗಳು ಸೇರಿದಂತೆ ಕೇಂದ್ರ ಸರ್ಕಾರದ ಪರವಾಗಿ ವಿವಿಧ ಪರೀಕ್ಷೆಗಳನ್ನು ನಡೆಸುವಲ್ಲಿ ಕೇಂದ್ರ ಲೋಕಸೇವಾ ಆಯೋಗವು ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಸ್ಥೆಯು ಸಾಮಾನ್ಯವಾಗಿ IAS, IFS, IPS ಮತ್ತು ಕೇಂದ್ರ ಸೇವೆಗಳಲ್ಲಿ ಪ್ರತಿಷ್ಠಿತ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಿಫಾರಸು ಮಾಡುತ್ತದೆ. UPSC ಪ್ರೊಬೇಷನರ್ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧದ ಆರೋಪವು ಸಾಕಷ್ಟು ಸುದ್ದಿಯಲ್ಲಿದೆ. ಪೂಜಾ ನಾಗರಿಕ ಸೇವೆಗಳಿಗೆ ಪ್ರವೇಶ ಪಡೆಯಲು ತಮ್ಮ ದಾಖಲೆಗಳನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ವಿವಾದ ಬೆನ್ನಲ್ಲೇ UPSC ಅಧ್ಯಕ್ಷರು ರಾಜಿನಾಮೆ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಆಧ್ಯಾತ್ಮಿಕ ಕರೆ:

ಸೋನಿ ತನ್ನ ಆಧ್ಯಾತ್ಮಿಕ ಬೇರುಗಳು ಮತ್ತು ಸಾಮಾಜಿಕ-ಧಾರ್ಮಿಕ ಬದ್ಧತೆಗಳ ಕಡೆಗೆ ಸೆಳೆಯಲ್ಪಟ್ಟಿದ್ದಾರೆ. ಸ್ವಾಮಿನಾರಾಯಣ ಸಂಪ್ರದಾಯದೊಳಗಿನ ಲಾಭರಹಿತ ಸಂಸ್ಥೆಯಾದ ಅನೂಪಮ್ ಮಿಷನ್‌ಗೆ ಸೋನಿ ಅವರ ಸಂಪರ್ಕವು ಅವರ ಯೌವನದ ಹಿಂದಿನದು. 1965ರಲ್ಲಿ ಆನಂದ್ ಜಿಲ್ಲೆಯ ಮೋಗ್ರಿಯಲ್ಲಿ ಸ್ಥಾಪಿಸಲಾದ ಮಿಷನ್. ಸ್ವಾಮಿನಾರಾಯಣ ಎಂದು ಕರೆಯಲ್ಪಡುವ ಶ್ರೀ ಸಹಜಾನಂದ ಸ್ವಾಮಿಗಳ ಬೋಧನೆಗಳನ್ನು ಹರಡುವ ಗುರಿಯನ್ನು ಹೊಂದಿದೆ. 2020ರಲ್ಲಿ ಸೋನಿ ಅವರು 'ನಿಷ್ಕರ್ಮ ಕರ್ಮಯೋಗಿ' (ನಿಸ್ವಾರ್ಥ ಕೆಲಸಗಾರ) ಎಂದು 'ದೀಕ್ಷಾ' ಸ್ವೀಕರಿಸಿದಾಗ ಮಿಷನ್‌ಗೆ ಅವರ ಸಮರ್ಪಣೆಯನ್ನು ಔಪಚಾರಿಕಗೊಳಿಸಲಾಯಿತು. ಮಿಷನ್‌ನ ಆದರ್ಶಗಳಿಗೆ ಅವರ ಬದ್ಧತೆಯನ್ನು ಮತ್ತಷ್ಟು ದೃಢಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT