ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ಸಂವಿಧಾನ್ ಸದನ್‌ನಲ್ಲಿ ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. Photo | PTI
ದೇಶ

ಸಚಿವ ಸ್ಥಾನ, ಖಾತೆಗಳ ಕುರಿತ ವರದಿಗಳಿಗೆ ಬಲಿಯಾಗಬೇಡಿ: ಎನ್‌ಡಿಎ ಸಂಸದರಿಗೆ ಪ್ರಧಾನಿ ಮೋದಿ ಸಲಹೆ

ಸಚಿವ ಸ್ಥಾನ ಮತ್ತು ಖಾತೆಗಳ ಕುರಿತ ಮಾಧ್ಯಮ ವರದಿಗಳಿಗೆ ಬಲಿಯಾಗಬೇಡಿ. "ಇಂಡಿಯಾ ಬಣ" ಕೂಡ ಅಂತಹ ವಿಷಯಗಳ ಬಗ್ಗೆ "ನಕಲಿ ಸುದ್ದಿ" ಹರಡಬಹುದು.

ನವದೆಹಲಿ: ಸಚಿವ ಸ್ಥಾನ ಮತ್ತು ಖಾತೆಗಳ ಕುರಿತ ಮಾಧ್ಯಮ ವರದಿಗಳಿಗೆ ಬಲಿಯಾಗಬೇಡಿ. "ಇಂಡಿಯಾ ಬಣ" ಕೂಡ ಅಂತಹ ವಿಷಯಗಳ ಬಗ್ಗೆ "ನಕಲಿ ಸುದ್ದಿ" ಹರಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಎನ್‌ಡಿಎ ಸಂಸದರಿಗೆ ಸಲಹೆ ನೀಡಿದ್ದಾರೆ.

ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದೆರಡು ದಿನಗಳಿಂದ ಟಿವಿಯಲ್ಲಿ ಪ್ರಸಾರವಾಗುತ್ತಿರುವ ವಿಷಯಗಳಲ್ಲಿ ಯಾವುದೇ ಸತ್ಯ ಕಂಡುಬಂದಿಲ್ಲ.

ಅಂತಹ ಮಾಹಿತಿಯನ್ನು ಎಲ್ಲಿಂದ ಪಡೆಯುತ್ತಾರೆ ಎಂದು ಅವರನ್ನು ಕೇಳಬೇಕು. ಕಳೆದ 10 ವರ್ಷಗಳಲ್ಲಿ ಇಂತಹ ಸಂದರ್ಭ ಬಂದಿರಲಿಲ್ಲ ಎಂದು ಹೇಳಿದರು.

ಕೆಲವರು ನಿಮ್ಮನ್ನು ಸಂಪರ್ಕ ಮಾಡಿ, ನನಗೆ ದೊಡ್ಡ ಮಟ್ಟದ ಕಾಂಟೆಕ್ಟ್ಸ್ ಇವೆ. ನಿಮ್ಮನ್ನು ಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ನೀವು ಅದನ್ನು ನಂಬಬೇಡಿ.

ಈಗ ತಂತ್ರಜ್ಞಾನವು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ಜನ ನನ್ನ ಸಹಿಯೊಂದಿಗೆ ಸಚಿವರ ಪಟ್ಟಿಯನ್ನೇ ಹೊರತರಬಹುದು. ಇನ್ನು ಕೆಲವು ಬುದ್ಧಿವಂತರು ಖಾತೆಗಳನ್ನು ಸಹ ಹಂಚಿ ಮಾಡಬಹುದು ಎಂದು ಮೋದಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಸರ್ಕಾರ ರಚನೆಯಲ್ಲಿ ನಿರತರಾಗಿದ್ದಾರೆ. ಸಚಿವ ಸ್ಥಾನ ಮತ್ತು ಖಾತೆಗಳನ್ನು ಹಂಚುವುದರಲ್ಲಿ ನಿರತರಾಗಿದ್ದಾರೆ. ಮೋದಿಯನ್ನು ಬಲ್ಲವರು, ಅಂತಹ ಪ್ರಯತ್ನಗಳೆಲ್ಲವೂ ನಿಷ್ಪ್ರಯೋಜಕವೆಂದು ತಿಳಿಯಿರಿ. ನಿಮಗೆ ಫೋನ್ ಕರೆ ಮಾಡಿದರೆ, ಅವರು ಸಂಬಂಧಪಟ್ಟ ಪ್ರಾಧಿಕಾರದಿಂದ ಬಂದವರು ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ ಎಂದು ಮೋದಿ ಸಲಹೆ ನೀಡಿದರು.

"ಕೆಲವರು ಇಂತಹ ವದಂತಿಗಳನ್ನು ಹರಡುವುದರಲ್ಲಿ ತೊಡಗಿದ್ದಾರೆ. ಕೆಲವರು ಇದನ್ನು ಅಭ್ಯಾಸವಾಗಿ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಮನರಂಜನೆಗಾಗಿ ಮಾಡುತ್ತಾರೆ. ಆದರೆ ಕೆಲವರು ದುರುದ್ದೇಶದಿಂದ ಮಾಡುತ್ತಾರೆ. ಇಂತಹ ಪಿತೂರಿಗಳಿಗೆ ಬಲಿಯಾಗದಂತೆ ನಾನು ಎಲ್ಲಾ ಸಂಸದರನ್ನು ಕೋರುತ್ತೇನೆ" ಎಂದು ಹೇಳಿದರು.

ಲೋಕಸಭೆ ಚುನಾವಣೆಯ ಸಮಯದಲ್ಲಿ, "ಇಂಡಿಯಾ ಬಣ" "ನಕಲಿ ಸುದ್ದಿ" ಹರಡುವಲ್ಲಿ ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದರು ಮತ್ತು ಅದರಲ್ಲಿ ಅವರು "ಡಬಲ್ ಪಿಎಚ್‌ಡಿ" ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೇಡಿತನದ ಕೃತ್ಯ'; ಜೈಪುರದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ Abhijeet Dipkeಗೆ ಕಪಾಳ ಮೋಕ್ಷ, ಹಲ್ಲೆ ! Video Viral

RSS ನೋಂದಣಿ ಬಗ್ಗೆ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ: ಕಾನೂನು ಪಾಲನೆ ಕುರಿತು ಸ್ಪಷ್ಟನೆ ಕೇಳಿದ ಗೃಹ ಸಚಿವ!

ಕುಟುಂಬ ಸದಸ್ಯರಿಗೆ ಮಟ್ಟಣ್ಣನವರ್ ಬೆದರಿಕೆ: ಚಿನ್ನಯ್ಯ ಆರೋಪ; ಫೋನ್ ಕರೆ ದಾಖಲೆ ಬಿಡುಗಡೆ ಮಾಡಿದ ಮಾಜಿ ಪೊಲೀಸ್ ಅಧಿಕಾರಿ!

ಸೂಪರ್ ಓವರ್​ನಲ್ಲಿ ಭಾರತ ಸೋಲುತ್ತಿದ್ದಂತೆ ಶ್ರೀಲಂಕಾ ಆಟಗಾರರು ಹಾಗೂ Vaibhav Sooryavanshi ನಡುವೆ ಗಲಾಟೆ, Video!

ತ್ರಿಕೋನ ಸರಣಿ: ರೋಚಕ ಪಂದ್ಯ ಟೈನಲ್ಲಿ ಅಂತ್ಯ; ಸೂಪರ್ ಓವರ್​ನಲ್ಲಿ ಲಂಕಾ ವಿರುದ್ಧ ಎಡವಿದ ಭಾರತಕ್ಕೆ ಸೋಲು!

SCROLL FOR NEXT