ಕೇರಳ ಕಾಂಗ್ರೆಸ್ ಡಿಸಿಸಿ ಕಚೇರಿಯಲ್ಲಿ ಜಗಳ 
ದೇಶ

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು: ತ್ರಿಶೂರ್ ಡಿಸಿಸಿ ಕಚೇರಿಯಲ್ಲಿ ಜಗಳ, ಪ್ರಕರಣ ದಾಖಲು

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಸೆಂಟ್ರಲ್ ಕೇರಳ ಕ್ಷೇತ್ರದಿಂದ ಪಕ್ಷದ ನಾಯಕ ಕೆ ಮುರಳೀಧರನ್ ಸೋಲು ಕಂಡಿರುವುದು ಇಲ್ಲಿನ ಕಾಂಗ್ರೆಸ್ ಡಿಸಿಸಿ ಕಚೇರಿಯಲ್ಲಿ ಜಗಳಕ್ಕೆ ಕಾರಣವಾಗಿದೆ.

ತ್ರಿಶೂರ್: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಸೆಂಟ್ರಲ್ ಕ್ಷೇತ್ರದಿಂದ ಪಕ್ಷದ ನಾಯಕ ಕೆ ಮುರಳೀಧರನ್ ಸೋಲು ಕಂಡಿರುವುದು ಇಲ್ಲಿನ ಕಾಂಗ್ರೆಸ್ ಡಿಸಿಸಿ ಕಚೇರಿಯಲ್ಲಿ ಜಗಳಕ್ಕೆ ಕಾರಣವಾಗಿದೆ.

ಡಿಸಿಸಿ ಕಾರ್ಯದರ್ಶಿ ಸಜೀವನ್ ಕುರಿಯಾಚಿರಾ ಅವರು ನೀಡಿರುವ ದೂರಿನ ಮೇರೆಗೆ ತ್ರಿಶೂರ್ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷ ಜೋಸ್ ವಲ್ಲೂರ್ ಮತ್ತು ಪಕ್ಷದ ಇತರ 19 ಸದಸ್ಯರ ವಿರುದ್ಧ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.

20 ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಡಿಸಿಸಿ ಕಚೇರಿಯಲ್ಲಿ ವಲ್ಲೂರ್ ಮತ್ತು ಬೆಂಬಲಿಗರು ತನಗೆ ಥಳಿಸಿದ್ದಾರೆ ಎಂದು ಕುರಿಯಾಚಿರಾ ದೂರಿನಲ್ಲಿ ಆರೋಪಿಸಿದ್ದಾರೆ.

ಕುರಿಯಾಚಿರಾ ಅವರು ತ್ರಿಶೂರ್‌ನಲ್ಲಿ ಪಕ್ಷದ ಸೋಲಿಗೆ ಮಾಜಿ ಸಂಸದ ಟಿಎನ್ ಪ್ರತಾಪನ್ ಮತ್ತು ವಲ್ಲೂರ್ ಅವರೇ ಕಾರಣ ಎಂದು ದೂಷಿಸಿದ ಮುರಳೀಧರನ್‌ಗೆ ನಿಕಟವಾಗಿರುವ ಗುಂಪಿನ ಭಾಗವಾಗಿದ್ದಾರೆ.

ಮುರಳೀಧರನ್ ಅವರ ಸೋಲು ಪಕ್ಷದ ಜಿಲ್ಲಾ ಘಟಕದಲ್ಲಿ ಗದ್ದಲಕ್ಕೆ ಕಾರಣವಾಗಿದ್ದು, ತ್ರಿಶೂರ್ ಡಿಸಿಸಿ ಕಚೇರಿಯ ಹೊರಗೆ ಬುಧವಾರ ಭಿತ್ತಿಪತ್ರಗಳನ್ನು ಹಾಕಲಾಗಿದ್ದು, ಜಿಲ್ಲಾ ನಾಯಕತ್ವವನ್ನು ಅನಿರೀಕ್ಷಿತ ಸೋಲಿಗೆ ಟೀಕಿಸಲಾಗಿದೆ. ಇದೇ ವಿಚಾರವಾಗಿ ಶುಕ್ರವಾರ ಡಿಸಿಸಿ ಕಚೇರಿಯಲ್ಲಿ ಮಾತಿನ ಚಕಮಕಿ ನಡೆಯಿತು.

ಬಿಜೆಪಿಯ ಸುರೇಶ್ ಗೋಪಿ ಅವರು ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ 74,686 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿಯು ಸಂಸತ್ತಿನ ಕೆಳಮನೆಗೆ ಕೇರಳದಿಂದ ತನ್ನ ಮೊದಲ ಸಂಸದನನ್ನು ಕಳುಹಿಸಿದೆ.

ಮುರಳೀಧರನ್ 3,28,124 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಈ ಸೋಲಿನಿಂದ ಆಘಾತ ಮತ್ತು ನಿರಾಶೆಗೊಂಡಿರುವ ಮುರಳೀಧರನ್ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಮತ್ತು ಸ್ವಲ್ಪ ಸಮಯದವರೆಗೆ ಸಾರ್ವಜನಿಕ ಜೀವನದಿಂದ ದೂರ ಉಳಿಯುವುದಾಗಿ ಘೋಷಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

SCROLL FOR NEXT