ಸಚಿವೆ ಆತಿಶಿ ಉಪವಾಸ ಸತ್ಯಾಗ್ರಹ 
ದೇಶ

ನವದೆಹಲಿಯಲ್ಲಿ ನೀರಿನ ಸಮಸ್ಯೆ: ಅತಿಶಿ ಅನಿರ್ದಿಷ್ಟಾವಧಿ ಉಪವಾಸ 2ನೇ ದಿನಕ್ಕೆ!

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಸಮಸ್ಯೆ ಕುರಿತು ದೆಹಲಿ ಜಲ ಸಚಿವೆ ಅತಿಶಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಶನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ದಕ್ಷಿಣ ದೆಹಲಿಯ ಭೋಗಲ್‌ ನ 'ಜಲ ಸತ್ಯಾಗ್ರಹ' ಸ್ಥಳದಿಂದ ವೀಡಿಯೊ ಸಂದೇಶ ನೀಡಿರುವ ಅತಿಶಿ, ನಗರದ ಜನರಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವವರೆಗೆ ತಾನು ಏನನ್ನೂ ತಿನ್ನುವುದಿಲ್ಲ. ನಗರದಲ್ಲಿ 28 ಲಕ್ಷ ಜನರಿಗೆ ನೀರಿನ ಕೊರತೆಯಿದೆ ಎಂದು ಅವರು ಹೇಳಿದ್ದಾರೆ.

ಯಮುನಾ ನದಿಯಲ್ಲಿ ದೆಹಲಿಯ ಪಾಲಿನ ಸರಿಯಾದ ನೀರನ್ನು ಹರಿಯಾಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಸಚಿವರು ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. ಹರಿಯಾಣದಿಂದ ದಿನಕ್ಕೆ 110 ಮಿಲಿಯನ್ ಗ್ಯಾಲನ್ ಗಿಂತಲೂ (ಎಂಜಿಡಿ) ಕಡಿಮೆ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದರು.

ಒಂದು ಎಂಜಿಡಿ ನೀರು 28,000 ಜನರಿಗೆ ಒದಗಿಸುತ್ತದೆ. 100 ಎಂಜಿಡಿ ನೀರಿನ ಕೊರತೆ ಎಂದರೆ ದೆಹಲಿಯಲ್ಲಿ 28 ಲಕ್ಷ ಜನರಿಗೆ ನೀರು ಸಿಗುತ್ತಿಲ್ಲ. ನೀರಿಗಾಗಿ ದೆಹಲಿಯು ನೆರೆಯ ರಾಜ್ಯಗಳ ಮೇಲೆ ಅವಲಂಬಿತವಾಗಿದೆ. ನೆರೆಯ ರಾಜ್ಯಗಳಿಂದ ನದಿ, ಕಾಲುವೆ ಮೂಲಕ 1,005 ಎಂಜಿಡಿ ನೀರನ್ನು ಪಡೆಯುತ್ತದೆ. ಇದರಲ್ಲಿ ಹರಿಯಾಣ 613 ಎಂಜಿಡಿ ನೀರನ್ನು ಪೂರೈಸುತ್ತದೆ. ದೆಹಲಿ ತೀವ್ರ ಬೇಸಿಗೆಯ ಶಾಖ ಎದುರಿಸುತ್ತಿದ್ದು, ಹರಿಯಾಣ ತನ್ನ ಪಾಲನ್ನು 513 ಎಂಜಿಡಿಗೆ ಕಡಿಮೆ ಮಾಡಿರುವುದರಿಂದ ನಗರದ 28 ಲಕ್ಷ ಜನರು ತೊಂದರೆ ಎದುರಿಸುವಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT