ಪಂಜಾಬ್ ಸಿಎಂ ಭಗವಂತ್ ಮಾನ್ 
ದೇಶ

ಪಂಜಾಬ್‌ನ ಹೊಸ ಅಬಕಾರಿ ನೀತಿ ಕುರಿತು ತನಿಖೆ ಸಾಧ್ಯತೆ!

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ, ಅಬಕಾರಿ ಪ್ರಕರಣದ ನೆರಳು ಪಂಜಾಬ್‌ನ ಹೊಸ ಅಬಕಾರಿ ನೀತಿಯ ಮೇಲೂ ಬೀಳುವ ಸಾಧ್ಯತೆಯಿದೆ.

ಚಂಡೀಗಢ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ, ಅಬಕಾರಿ ಪ್ರಕರಣದ ನೆರಳು ಪಂಜಾಬ್‌ನ ಹೊಸ ಅಬಕಾರಿ ನೀತಿಯ ಮೇಲೂ ಬೀಳುವ ಸಾಧ್ಯತೆಯಿದೆ.

ರಾಜಕೀಯ ಮತ್ತು ಆಡಳಿತಾತ್ಮಕ ವಲಯಗಳಲ್ಲಿ ಆತಂಕ ಮತ್ತು ಭಯದ ಜೊತೆಗೆ, ಪಂಜಾಬ್ ಬಿಜೆಪಿಯು ಭಾರತದ ಚುನಾವಣಾ ಆಯೋಗವನ್ನು ಸಂಪರ್ಕಿಸಲು ಮತ್ತು ರಾಜ್ಯದ ಅಬಕಾರಿ ನೀತಿಯ ಬಗ್ಗೆ ಇಡಿ ತನಿಖೆಯನ್ನು ಕೋರಲು ನಿರ್ಧರಿಸಿದೆ. ಇದು ದೆಹಲಿಯಲ್ಲಿನ ರೀತಿಯಲ್ಲಿಯೇ ರೂಪಿಸಲಾಗಿದೆ ಎಂದು ಹೇಳಿಕೊಂಡಿದೆ.

ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಪಂಜಾಬ್ ಅಬಕಾರಿ ಮತ್ತು ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ. ಇದು ಉತ್ತಮ ನೀತಿ ಮತ್ತು ಅಬಕಾರಿ ಸುಂಕದಿಂದ ನಮ್ಮ ಆದಾಯ ಕೇವಲ ಎರಡು ವರ್ಷಗಳಲ್ಲಿ 4,000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಲಿಕ್ಕರ್ ಮಾಫಿಯಾವನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.

ಈ ಹಿಂದೆ ಐಎಂಎಫ್‌ಎಲ್‌ ಮತ್ತು ಬಾಟಲ್ ಇನ್ ಒರಿಜಿನ್' ಲಿಕ್ಕರ್ ಗಾಗಿ ದೆಹಲಿ ಮೂಲದ ಎರಡು ಕಂಪನಿಗಳಿಗೆ ಸಗಟು ಮದ್ಯದ ಪರವಾನಗಿಗಳ ಹಂಚಿಕೆಯ ವರದಿಗಳ ನಂತರ ಪಂಜಾಬ್ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಇಡಿ ಮೂವರು ಐಎಎಸ್ ಅಧಿಕಾರಿಗಳು ಮತ್ತಿತರ ಒಂದು ಡಜನ್ ಅಧಿಕಾರಿಗಳು ಪ್ರಶ್ನಿಸಿತ್ತು ಎಂದು ಮೂಲಗಳು ಹೇಳಿವೆ. ದೆಹಲಿಯ ಅಬಕಾರಿ ನೀತಿ ಮತ್ತು IMFLand BIO ಮದ್ಯಕ್ಕಾಗಿ L1 ಪರವಾನಗಿಗೆ ಸಂಬಂಧಿಸಿದಂತೆ ಎರಡು ಕಂಪನಿಗಳಲ್ಲಿ ತನಿಖೆ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!