ಪಿಣರಾಯಿ ವಿಜಯನ್ 
ದೇಶ

'ಭಾರತ್ ಮಾತಾ ಕೀ ಜೈ' ಮತ್ತು 'ಜೈ ಹಿಂದ್' ಘೋಷಣೆ ಮುಸ್ಲಿಮರ ಕೊಡುಗೆ: ಕೇರಳ ಸಿಎಂಗೆ ಬಿಜೆಪಿ ತಿರುಗೇಟು

'ಭಾರತ್ ಮಾತಾ ಕೀ ಜೈ' ಮತ್ತು 'ಜೈ ಹಿಂದ್' ಘೋಷಣೆ ಮುಸ್ಲಿಮರ ಕೊಡುಗೆ ಎಂದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯನ್ನು ವಿಭಜಕ ಮನಸ್ಥಿತಿಯ ಸಂಕೇತವೆಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಿಡಿಕಾರಿದ್ದು ಈ ಘೋಷಣೆಗಳನ್ನು ಯಾವುದೇ ಹಿಂದೂ ಅಥವಾ ಮುಸಲ್ಮಾನರು ಎತ್ತಲಿಲ್ಲ ಎಂದು ಹೇಳಿದೆ.

ನವದೆಹಲಿ: 'ಭಾರತ್ ಮಾತಾ ಕೀ ಜೈ' ಮತ್ತು 'ಜೈ ಹಿಂದ್' ಘೋಷಣೆ ಮುಸ್ಲಿಮರ ಕೊಡುಗೆ ಎಂದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯನ್ನು ವಿಭಜಕ ಮನಸ್ಥಿತಿಯ ಸಂಕೇತವೆಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಿಡಿಕಾರಿದ್ದು ಈ ಘೋಷಣೆಗಳನ್ನು ಯಾವುದೇ ಹಿಂದೂ ಅಥವಾ ಮುಸಲ್ಮಾನರು ಎತ್ತಲಿಲ್ಲ ಎಂದು ಹೇಳಿದೆ.

ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಮಂಗಳವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಮಾತನಾಡುವಾಗ ವಿಚಿತ್ರ ಹೇಳಿಕೆ ನೀಡಿದ್ದಾರೆ. 'ಭಾರತ್ ಮಾತಾ ಕಿ ಜೈ' ಮತ್ತು 'ಜೈ ಹಿಂದ್' ಘೋಷಣೆಗಳನ್ನು ಮೊದಲು ಇಬ್ಬರು ಮುಸ್ಲಿಮರು ಎತ್ತಿದ್ದರು. ಆದ್ದರಿಂದ ಅವರು ಈ ಘೋಷಣೆಗಳನ್ನು ತ್ಯಜಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಭಾರತ್ ಮಾತಾ ಕಿ ಜೈ ಮತ್ತು ಜೈ ಹಿಂದ್ ಎಂಬ ಈ ಘೋಷಣೆಗಳನ್ನು ಭಾರತೀಯರೊಬ್ಬರು ಎತ್ತಿದ್ದು, ಆದರೆ ಪಿಣರಾಯಿ ಹಿಂದೂಗಳು ಮತ್ತು ಮುಸ್ಲಿಮರು ಎಂದು ನೋಡುತ್ತಾರೆ. ಇದು ಮೊದಲ ವಿಭಜಕ ಮನಸ್ಥಿತಿಯಾಗಿದೆ ಎಂದು ತ್ರಿವೇದಿ ಹೇಳಿದರು. ಈ ಘೋಷವಾಕ್ಯಗಳನ್ನು ಯಾವುದೇ ಹಿಂದೂ ಅಥವಾ ಮುಸಲ್ಮಾನರು ಎತ್ತಿಲ್ಲ, ಆದರೆ ಒಬ್ಬ ಭಾರತೀಯ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಈ ಜನ ಭಾರತದ ಏಕತೆಯನ್ನು ಸಂಕೇತಿಸುವ ಘೋಷಣೆಗಳನ್ನು ಕೋಮುವಾದದ ಸಂಕೇತವನ್ನಾಗಿಸಲು ಪ್ರಯತ್ನಿಸಿದರು. ದಯಮಾಡಿ ಭಾರತದ ಏಕತೆ ಮತ್ತು ಭಾರತದ ಹೆಮ್ಮೆಯ ಘೋಷಣೆಗಳ ಬಗ್ಗೆ ಒಡೆದು ಆಳುವ ರಾಜಕಾರಣ ಮಾಡಬೇಡಿ. ಲೋಕಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವಂತೆ ವಿಪಕ್ಷಗಳಿಗೆ ತಮ್ಮ ಸೋಲಿನ ಖಚಿತತೆ ಎದುರಿಸುತ್ತಿದ್ದಾರೆ.

ಈ ಹಿಂದೆಯೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಲವು ಆಕ್ಷೇಪಾರ್ಹ, ಅಸಭ್ಯ ಮತ್ತು ಖಂಡನೀಯ ಹೇಳಿಕೆಗಳನ್ನು ನೀಡಲಾಗಿತ್ತು. ಇದೀಗ ಭಾರತದೊಳಗೆ ಒಡಕು ಮೂಡಿಸುವ ಹೇಳಿಕೆ ನೀಡಿ ರಾಷ್ಟ್ರದ ಏಕತೆಯ ಮೇಲೆ ದಾಳಿ ಮಾಡುವ ಹಂತಕ್ಕೆ ಬಂದಿದೆ. ಮೇಲಿಂದ ಮೇಲೆ ರಾಜಕೀಯ ನಿರ್ದೇಶನ ನೀಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಡಿತನದ ಹೇಳಿಕೆ ನೀಡುವುದು ಮಾತ್ರವಲ್ಲದೆ ದೇಶದ ಜನರಲ್ಲಿ ಒಡೆದು ಆಳುವ ಮನೋಭಾವನೆ ಮೂಡಿಸುವ ಮಟ್ಟಕ್ಕೆ ಹೋಗುವ ಸಾಧ್ಯತೆ ಇದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT