ಮುಖ್ತಾರ್ ಅನ್ಸಾರಿ ಮೃತದೇಹ
ಮುಖ್ತಾರ್ ಅನ್ಸಾರಿ ಮೃತದೇಹ 
ದೇಶ

ಯುಪಿ: ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರಿ ಸಾವು 'ಯೋಜಿತ ಕೊಲೆ' ಕುಟುಂಬಸ್ಥರ ಆರೋಪ

Nagaraja AB

ಲಖನೌ: ಉತ್ತರ ಪ್ರದೇಶದ ಬಂದಾ ಜಿಲ್ಲಾ ಕಾರಾಗೃಹದಲ್ಲಿ ಸಾವನ್ನಪ್ಪಿದ್ದ ಗ್ಯಾಂಗ್ ಸ್ಟರ್- ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಮೃತಪಟ್ಟಿಲ್ಲ, ಅದೊಂದು ಯೋಜಿತ ಕೊಲೆ ಎಂದು ಅವರ ಪುತ್ರ ಉಮರ್ ಅನ್ಸಾರಿ ಶುಕ್ರವಾರ ಆರೋಪಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ತನ್ನ ತಂದೆಯದು ಸಹಜ ಸಾವಲ್ಲ, ಯೋಜಿತ ಕೊಲೆಯಾಗಿದೆ. ದೆಹಲಿಯ AIIMS ವೈದ್ಯರ ಸಮಿತಿಯಿಂದ ಶವಪರೀಕ್ಷೆ ನಡೆಸಬೇಕು ಎಂದು ಅವರು ವಿನಂತಿಸಿದ್ದಾರೆ. ಸ್ಥಳೀಯ ಸರ್ಕಾರ, ಆಡಳಿತ ಅಥವಾ ವೈದ್ಯಕೀಯ ತಂಡದಿಂದ ನ್ಯಾಯ ಪಡೆಯುವಲ್ಲಿ ತನಗೆ ಸ್ವಲ್ಪ ನಂಬಿಕೆಯಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಮಾರ್ಚ್ 21 ರಂದು ಮುಖ್ತಾರ್ ಅನ್ಸಾರಿ ಅವರ ಆಹಾರದಲ್ಲಿ ಸ್ಲೋ ಪಾಯ್ಸನ್ ನೀಡಲಾಗಿದೆ ಎಂದು ಬಾರಾಬಂಕಿ ಮತ್ತು ಬಂದಾ ನ್ಯಾಯಾಲಯಗಳಿಗೆ ವಕೀಲರ ಮೂಲಕ ತಿಳಿಸಲಾಯಿತು. 40 ದಿನಗಳ ಹಿಂದೆ ಇದೇ ರೀತಿಯ ವಿಷಪೂರಿತ ಘಟನೆ ನಡೆದಿರುವುದರಿಂದ ತನ್ನ ತಂದೆಯ ಆರೋಗ್ಯ ಗಮನಾರ್ಹವಾಗಿ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.

ಮಾರ್ಚ್ 26 ರಂದು ಮುಖ್ತಾರ್ ಅನ್ಸಾರಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಬಂದಾದಲ್ಲಿನ ವೈದ್ಯಕೀಯ ಕಾಲೇಜಿಗೆ, ನಂತರ ಬೆಳಿಗ್ಗೆ 4 ಗಂಟೆಗೆ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸಲಾಯಿತು. ತನ್ನ ತಂದೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದರೂ, ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಲು ಅನುಮತಿ ನಿರಾಕರಿಸಲಾಯಿತು. ಇದಲ್ಲದೆ, ತನ್ನ ತಂದೆಗೆ ವೈದ್ಯರು ಸರಿಯಾದ ಚಿಕಿತ್ಸೆ ನೀಡಲಿಲ್ಲ ಮತ್ತು ಅಧಿಕಾರಿಗಳ ಒತ್ತಡದ ಮೇರೆಗೆ ಬಂದಾ ಜೈಲಿಗೆ ಬಲವಂತವಾಗಿ ಮರಳಿದರು ಎಂದು ಉಮರ್ ಹೇಳಿದ್ದಾರೆ.

SCROLL FOR NEXT