ಮುಖ್ತಾರ್ ಅನ್ಸಾರಿ ಅಂತ್ಯಕ್ರಿಯೆ ವೇಳೆ ಜನಸ್ತೋಮ
ಮುಖ್ತಾರ್ ಅನ್ಸಾರಿ ಅಂತ್ಯಕ್ರಿಯೆ ವೇಳೆ ಜನಸ್ತೋಮ 
ದೇಶ

ಉತ್ತರ ಪ್ರದೇಶ: ಅಪಾರ ಜನಸ್ತೋಮ, ಬಿಗಿ ಭದ್ರತೆ ನಡುವೆ ನಡುವೆ ಗ್ಯಾಂಗ್ ಸ್ಟರ್ ಮುಖ್ತಾರ್ ಅನ್ಸಾರ್ ಅಂತ್ಯಕ್ರಿಯೆ!

Nagaraja AB

ಗಾಜಿಪುರ: ದರೋಡೆಕೋರ-ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪಾರ್ಥಿವ ಶರೀರವನ್ನು ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಕಾಲಿಬಾಗ್‌ನಲ್ಲಿರುವ ಅವರ ಕುಟುಂಬದ ಸ್ಮಶಾನದಲ್ಲಿ ಶನಿವಾರ ಬಿಗಿ ಭದ್ರತೆ ನಡುವೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ 5,000 ಕ್ಕೂ ಹೆಚ್ಚು ಜನರು ಸೇರಿದ್ದರು. ಮುಖ್ತಾರ್ ಅವರ ಅಂತ್ಯಕ್ರಿಯೆಯನ್ನು ಅವರ ಹೆತ್ತವರ ಸಮಾಧಿಯ ಬಳಿ ಮಾಡಲಾಯಿತು.

ಮುಖ್ತಾರ್ ಅನ್ಸಾರಿ ಅವರ ಪುತ್ರ ಉಮರ್ ಅನ್ಸಾರಿ ಅವರು ಕುಟುಂಬ ಸದಸ್ಯರಿಗೆ ಮಾತ್ರ ಸ್ಮಶಾನಕ್ಕೆ ಪ್ರವೇಶಿಸಲು ಅವಕಾಶವಿತ್ತು. ಆದಾಗ್ಯೂ,ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು. ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ಅಂತ್ಯಸಂಸ್ಕಾರ ನಂತರ ಉಮರ್ ಅನ್ಸಾರಿ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನಾ ಬಂದಾ ಜಿಲ್ಲೆಯ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ, ಅನ್ಸಾರಿ ಅವರ ಮೃತದೇಹವನ್ನು 400 ಕಿಲೋಮೀಟರ್ ಮಾರ್ಗದಲ್ಲಿ ಅವರ ಹುಟ್ಟೂರಾದ ಗಾಜಿಪುರಕ್ಕೆ ತರಲಾಯಿತು.

ಪಾರ್ಥಿವ ಶರೀರ ಹೊತ್ತ ಆಂಬ್ಯುಲೆನ್ಸ್ ಜೊತೆಗೆ 24 ಪೊಲೀಸ್ ವಾಹನಗಳು ಸೇರಿದಂತೆ 26 ಬೆಂಗಾವಲು ವಾಹನಗಳಿದ್ದವು. ಜೈಲಿನಲ್ಲಿದ್ದ ದರೋಡೆಕೋರ-ರಾಜಕಾರಣಿ ಅನ್ಸಾರಿ ಗುರುವಾರ ಸಂಜೆ ಬಂದಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಭದ್ರತಾ ವ್ಯವಸ್ಥೆಗಳ ಹೊರತಾಗಿಯೂ ಅನ್ಸಾರಿ ಸಾವಿನ ಬಗ್ಗೆ ವಿವಾದಗಳು ಆವರಿಸಿವೆ. ಸೆರೆವಾಸದಲ್ಲಿ ಅವರನ್ನು "ಸ್ಲೋ ಪಾಯ್ಸನಿಂಗ್"ಗೆ ಒಳಪಡಿಸಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಆದಾಗ್ಯೂ, ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನಲ್ಲಿ ಐವರು ವೈದ್ಯರ ಸಮಿತಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ 68 ವರ್ಷದ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿತು.

SCROLL FOR NEXT