ಭಾರತೀಯ ರೈಲ್ವೇ 
ದೇಶ

ಪಂಜಾಬ್: ಬೋಗಿಗಳು ಇಲ್ಲದೆ 3 ಕಿ.ಮಿ ಚಲಿಸಿದ ಜಮ್ಮು ಮೂಲದ ರೈಲ್ವೆ ಎಂಜಿನ್

ಜಮ್ಮುವಿಗೆ ತೆರಳಬೇಕಿದ್ದ ರೈಲೊಂದರ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ನಡೆದಿದ್ದು, ಬೋಗಿಗಳಿಲ್ಲದೇ ಎಂಜಿನ್ ಬರೊಬ್ಬರಿ 3 ಕಿಮೀ ಮುಂದೆ ಸಾಗಿದೆ.

ಅಮೃತಸರ: ಜಮ್ಮುವಿಗೆ ತೆರಳಬೇಕಿದ್ದ ರೈಲೊಂದರ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ನಡೆದಿದ್ದು, ಬೋಗಿಗಳಿಲ್ಲದೇ ಎಂಜಿನ್ ಬರೊಬ್ಬರಿ 3 ಕಿಮೀ ಮುಂದೆ ಸಾಗಿದೆ.

ಪಂಜಾಬ್ ನ ಸರ್‌ಹಿಂದ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಬೋಗಿಗಳು ಇಲ್ಲದೆ ಎಂಜಿನ್‌ ಸುಮಾರು ಮೂರು ಕಿಲೋ ಮೀಟರ್ ದೂರ ಚಲಿಸಿದೆ. ದೆಹಲಿ–ಕಟ್ರಾ ರೈಲ್ವೆ ಮಾರ್ಗದಲ್ಲಿ ಕೆಲಸನಿರತ ಕೀಮ್ಯಾನ್ ಒಬ್ಬರು ಬೋಗಿಗಳು ಇಲ್ಲದೆ ಎಂಜಿನ್ ಚಲಿಸುತ್ತಿರುವುದನ್ನು ಲೋಕೊ ಪೈಲಟ್‌ ಗಮನಕ್ಕೆ ತಂದರು.

ಬಳಿಕ ಎಂಜಿನ್ ಹಿಂದಿರುಗಿ ಬಂದಿದೆ. ನಂತರ ಬೋಗಿಗಳನ್ನು ಜೋಡಿಸಿಕೊಂಡು ಮತ್ತೆ ರೈಲನ್ನು ಚಲಾಯಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಎಂಜಿನ್‌ನೊಂದಿಗೆ ಬೋಗಿಗಳನ್ನು ಸಡಿಲವಾಗಿ ಜೋಡಿಸಿದ್ದರಿಂದ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಉತ್ತರ ರೈಲ್ವೆ ವಲಯದ ವಿಭಾಗೀಯ ವ್ಯವಸ್ಥಾಪಕ ನವೀನ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT