ಮಲ್ಲಿಕಾರ್ಜುನ ಖರ್ಗೆ 
ದೇಶ

ಅರಾಜಕತೆ ಸೃಷ್ಟಿಸುವ ಯತ್ನ: ಮತದಾನ ಪ್ರಮಾಣದ ಬಗ್ಗೆ ಖರ್ಗೆ ಹೇಳಿಕೆಗೆ ಚುನಾವಣಾ ಆಯೋಗ ತರಾಟೆ!

ಲೋಕಸಭಾ ಚುನಾವಣೆ2024 ರ ಮತದಾನಕ್ಕೆ ಅಡ್ಡಿ ಪಡಿಸುವಂತಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ: ಲೋಕಸಭಾ ಚುನಾವಣೆ2024 ರ ಮತದಾನಕ್ಕೆ ಅಡ್ಡಿ ಪಡಿಸುವಂತಹ ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿದೆ.

ಮತದಾನ ಪ್ರಮಾಣದ ಅಂಕಿ-ಅಂಶಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ಚುನಾವಣೆ ಪ್ರಕ್ರಿಯೆ ಮಧ್ಯದಲ್ಲಿ ಆಧಾರ ರಹಿತ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಗಳು ಗೊಂದಲ, ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನವನ್ನು ನಡೆಸುವಲ್ಲಿ ತಪ್ಪು ನಿರ್ದೇಶನ ಮತ್ತು ಅಡೆತಡೆಗಳನ್ನು ಉಂಟುಮಾಡಲಿವೆ ಎಂದು ಆಯೋಗ ಹೇಳಿದೆ.

ಇಂತಹ ಹೇಳಿಕೆಗಳು ಮತದಾರರ ಭಾಗವಹಿಸುವಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಮತ್ತು ರಾಜ್ಯಗಳಾದ್ಯಂತ ದೊಡ್ಡ ಚುನಾವಣಾ ವ್ಯವಸ್ಥೆಗಳನ್ನು ನಿರಾಶೆಗೊಳಿಸಬಹುದು ಎಂದು ಆಯೋಗ ಹೇಳಿದೆ.

ಖರ್ಗೆ ಹೇಳಿಕೆಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಆಯೋಗ, ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳು ನೇರ ಚುನಾವಣಾ ಕಾರ್ಯಾಚರಣೆಗಳ ಪ್ರಾಮುಖ್ಯತೆ ಮೇಲೆ ಆಕ್ರಮಣಶೀಲತೆಯಾಗಿದೆ, ಖರ್ಗೆ ಹಾಗೂ ಇತರ INDI ಮೈತ್ರಿಕೂಟದ ನಾಯಕರು ಮತದಾನದ ಪ್ರಮಾಣದ ಬಗ್ಗೆ ನೀಡಿರುವ ಹೇಳಿಕೆಯನ್ನು ಆಯೋಗ ಗಮನಿಸಿದ್ದು, ಇಂತಹ ಹೇಳಿಕೆಗಳು ಅನಪೇಕ್ಷಿತವಾಗಿದೆ ಈ ರೀತಿಯ ಹೇಳಿಕೆಗಳು ಅನುಮಾನಗಳು ಮತ್ತು ಅಸಂಗತತೆಯ ಜೊತೆಗೆ ಅರಾಜಕ ಪರಿಸ್ಥಿತಿಯನ್ನು, ಪಕ್ಷಪಾತದ ನಿರೂಪಣೆಯನ್ನು ಸೃಷ್ಟಿಸಬಹುದು ಎಂದು ಆಯೋಗ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT