ಪ್ರಧಾನಿ ಮೋದಿ 
ದೇಶ

ಇಂಡಿಯಾ ಬ್ಲಾಕ್ ಕ್ಯಾನ್ಸರ್ ಗಿಂತ ಕೆಟ್ಟ ಕಾಯಿಲೆ: ಪ್ರಧಾನಿ ಮೋದಿ

ಎಸ್‌ಪಿ ಮತ್ತು ಕಾಂಗ್ರೆಸ್, ನಮ್ಮ ಸರ್ಕಾರ ನಿರ್ಮಿಸಿದ ಮನೆಗಳನ್ನು ಕಸಿದುಕೊಳ್ಳಲಿದೆ, ಜನರ ಜನ್‌ಧನ್ ಖಾತೆಗಳನ್ನು ಮುಚ್ಚಲಿದೆ, ಅವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಿದೆ.

ಲಖನೌ: ಎಸ್‌ಪಿ ಮತ್ತು ಕಾಂಗ್ರೆಸ್, ನಮ್ಮ ಸರ್ಕಾರ ನಿರ್ಮಿಸಿದ ಮನೆಗಳನ್ನು ಕಸಿದುಕೊಳ್ಳಲಿದೆ, ಜನರ ಜನ್‌ಧನ್ ಖಾತೆಗಳನ್ನು ಮುಚ್ಚಲಿದೆ, ಅವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಿದೆ ಮತ್ತು ನೀರಿನ ನಲ್ಲಿಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆರೋಪಿಸಿದ್ದಾರೆ.

"ಇಂಡಿಯಾ ಮೈತ್ರಿಕೂಟ" ಕ್ಯಾನ್ಸರ್‌ಗಿಂತಲೂ ಕೆಟ್ಟ ಕಾಯಿಲೆ ಎಂದು ಟೀಕಿಸಿದ ಮೋದಿ, "ಇಂಡಿಯಾ ಮೈತ್ರಿಕೂಟ" ಪಕ್ಷಗಳು ಕೋಮುವಾದಿ, ಜಾತಿವಾದಿ ಮತ್ತು ಕುಟುಂಬ ಕೇಂದ್ರಿತವಾಗಿವೆ. ಇವು ಕ್ಯಾನ್ಸರ್‌ಗಿಂತ ಕೆಟ್ಟದಾಗಿವೆ” ಎಂದು ವಾಗ್ದಾಳಿ ನಡೆಸಿದರು.

ಇಂದು ಉತ್ತರ ಪ್ರದೇಶದ ಶ್ರಾವಸ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕೇತ್ ಮಿಶ್ರಾ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, "ಕಳೆದ 60 ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ಜನರು ಕೇಳಿದಾಗ, ಅವರು ಸಮಾಜವನ್ನು ವಿಭಜಿಸಲು ಮತ್ತು ವೋಟ್ ಜಿಹಾದ್ ಮಾಡುತ್ತಾರೆ" ಎಂದರು.

ಇಂಡಿಯಾ ಬ್ಲಾಕ್ ಪಕ್ಷಗಳು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿವೆ ಎಂದು ಆರೋಪಿಸಿದ ಮೋದಿ, "ಕಾಂಗ್ರೆಸ್, ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳುತ್ತಿದೆ. ಆದರೆ ದೇಶದ ಬಡವರಿಗೆ ಆಸ್ತಿಯಲ್ಲಿ ಮೊದಲ ಹಕ್ಕು ಇದೆ ಎಂದು ಮೋದಿ ಹೇಳುತ್ತಾರೆ" ಎಂದರು.

ನಿಮ್ಮ ಗಳಿಕೆಯನ್ನು ಕಿತ್ತುಕೊಂಡು ವೋಟ್ ಜಿಹಾದ್‌ನಲ್ಲಿ ತೊಡಗಿರುವ ಕಾಂಗ್ರೆಸ್, ತನ್ನ ವೋಟ್ ಬ್ಯಾಂಕ್‌ಗೆ ನೀಡಲು ಬಯಸುತ್ತಿದೆ. "ಕಳೆದ 10 ವರ್ಷಗಳಲ್ಲಿ ಮೋದಿ ನಾಲ್ಕು ಕೋಟಿ ಬಡವರಿಗೆ ಶಾಶ್ವತ ಮನೆಗಳನ್ನು ನೀಡಿದರು, ಈಗ ಎಸ್‌ಪಿ ಮತ್ತು ಕಾಂಗ್ರೆಸ್ ಎಲ್ಲವನ್ನೂ ಕಸಿದುಕೊಳ್ಳಲು ನಿರ್ಧರಿಸಿವೆ. ಅಂದರೆ ಅವರು ನಿಮ್ಮಿಂದ ನಾಲ್ಕು ಕೋಟಿ ಮನೆಗಳ ಕೀಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ತಮ್ಮ ವೋಟ್ ಬ್ಯಾಂಕ್(ಮುಸ್ಲಿಮರಿಗೆ)ಗೆ ಕೊಡುತ್ತಾರೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT