ಬಾಸ್ಮತಿ ಅಕ್ಕಿ online desk
ದೇಶ

ICAR ನ ಹೊಸ ಬಾಸ್ಮತಿ ಅಕ್ಕಿಗೆ ಪರಿಸರವಾದಿಗಳಿಂದ ಟೀಕೆ!

ಭಾರತದ ಪ್ರಮುಖ ಸಂಶೋಧನಾ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್) ಕಳೆನಾಶಕ-ಸಹಿಷ್ಣು (Ht) ಆರೊಮ್ಯಾಟಿಕ್ ಅಕ್ಕಿ (ಬಾಸ್ಮತಿ) ಅಕ್ಕಿಯನ್ನು ವಾಣಿಜ್ಯಿಕವಾಗಿ ಬಿಡುಗಡೆ ಮಾಡಿದೆ.

ನವದೆಹಲಿ: ಭಾರತದ ಪ್ರಮುಖ ಸಂಶೋಧನಾ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್) ಕಳೆನಾಶಕ-ಸಹಿಷ್ಣು (Ht) ಆರೊಮ್ಯಾಟಿಕ್ ಅಕ್ಕಿ (ಬಾಸ್ಮತಿ) ಅಕ್ಕಿಯನ್ನು ವಾಣಿಜ್ಯಿಕವಾಗಿ ಬಿಡುಗಡೆ ಮಾಡಿದೆ.

ಐಸಿಎಆರ್ ಬಿಡುಗಡೆ ಮಾಡಿರುವ ಎರಡು ಪ್ರತ್ಯೇಕ ತಳಿಗಳ ಭತ್ತವನ್ನು ಕಡಮೆ ಪ್ರಮಾಣದ ನೀರಿನಲ್ಲಿ ಬೆಳೆಯಬಹುದಾಗಿದ್ದು, ಗ್ರೀನ್ ಹೌಸ್ ಅನಿಲಗಳಾದ ಮೀಥೇನ್ ನ್ನು ಕಡಿಮೆ ಮಾಡಿ ಅಕ್ಕಿಯ ಇಳುವರಿ ಹೆಚ್ಚಾಗಲಿದೆ.

ಆದರೆ ಐಸಿಎಆರ್ ಈ ಅಕ್ಕಿ ತಳಿಗಳ ಬಗ್ಗೆ ಬಿಡುಗಡೆ ಮಾಡಿರುವ ಹೇಳಿಕೆಗಳನ್ನು ವಿಜ್ಞಾನಿಗಳು ಪ್ರಶ್ನಿಸಲು ಆರಂಭಿಸಿದ್ದಾರೆ. ಐಸಿಎಆರ್ ಹೇಳಿಕೆಗಳು ವಿಪರೀತ ಉತ್ಪ್ರೇಕ್ಷೆಯಿಂದ ಕೂಡಿದ್ದು, ಭತ್ತದ ವೈವಿಧ್ಯತೆಯನ್ನೇ ನಾಶ ಮಾಡಲಿದೆ ಎಂದು ಹೇಳಿದ್ದಾರೆ.

ಹೊಸ ಎರಡು ವಿಧದ ಬಾಸ್ಮತಿ ಅಕ್ಕಿ ಪುಸ ಬಾಸ್ಮತಿ 1979 ಹಾಗೂ ಪುಸ ಬಾಸ್ಮತಿ 1985 ತಳೀಯವಾಗಿ ಮಾರ್ಪಡಿಸದ (non-genetically modified) ಅಕ್ಕಿಯ ಪ್ರಭೇದಗಳಾಗಿದ್ದು, ಮೂರು ವರ್ಷಗಳ ಕಾಲ ಪ್ರಯೋಗ ನಡೆಸಿ ಅಭಿವೃದ್ಧಿಪಡಿಸಲಾಗಿದೆ. ಇದು ಈಗಿರುವ ಪುಸ ಬಾಸ್ಮತಿ 1121 ಹಾಗೂ ಪುಸ ಬಾಸ್ಮತಿ 1509 ಅಕ್ಕಿಯ ಸುಧಾರಿತ ಆವೃತ್ತಿಗಳಾಗಿವೆ.

ಹೊಸ ಪ್ರಭೇದಗಳು ಇಮಾಜೆಥಪೈರ್‌ನಂತಹ ಸಸ್ಯನಾಶಕಗಳನ್ನು ನೇರವಾಗಿ ಅನ್ವಯಿಸಲು ಅನುವು ಮಾಡಿಕೊಡುತ್ತದೆ, ಈ ಪ್ರಭೇದಗಳು ರೂಪಾಂತರಿತ ALS ಜೀನ್ ಅನ್ನು ಹೊಂದಿದ್ದು, ಕೆಲವು ಪ್ರಬಲವಾದ ಕಳೆಗಳನ್ನು ನಿರ್ಮೂಲನೆ ಮಾಡುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT