ವಿಕಿಪೀಡಿಯಾ  
ದೇಶ

ಪಕ್ಷಪಾತ ಮತ್ತು ತಪ್ಪು ಮಾಹಿತಿ ಆರೋಪ: ವಿಕಿಪೀಡಿಯಾಗೆ ಕೇಂದ್ರ ಸರ್ಕಾರ ನೊಟೀಸ್

ವಿಕಿಪೀಡಿಯಾವನ್ನು ಮಧ್ಯವರ್ತಿಯಾಗಿ ಪರಿಗಣಿಸುವ ಬದಲು ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು ಎಂದು ಕೇಂದ್ರವು ತನ್ನ ನೋಟಿಸ್‌ನಲ್ಲಿ ಕೇಳಿದೆ.

ನವದೆಹಲಿ: ಪ್ರಮುಖ ಸರ್ಚ್ ತಾಣ ವಿಕಿಪೀಡಿಯಾಕ್ಕೆ ಕೇಂದ್ರ ಸರ್ಕಾರವು ಮಂಗಳವಾರ ನೊಟೀಸ್ ನೀಡಿದ್ದು, ಸೈಟ್‌ನಲ್ಲಿ ಪಕ್ಷಪಾತ ಮತ್ತು ತಪ್ಪುಗಳು ಪ್ರಕಟವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದೆ. ವಿಕಿಪೀಡಿಯಾ ಸಂಪಾದಕೀಯ ನಿಯಂತ್ರಣವನ್ನು ಒಂದು ಸಣ್ಣ ಗುಂಪು ಹಿಡಿದಿಟ್ಟುಕೊಂಡಿದೆ ಎಂದು ಹೇಳಿದೆ.

ವಿಕಿಪೀಡಿಯಾವನ್ನು ಮಧ್ಯವರ್ತಿಯಾಗಿ ಪರಿಗಣಿಸುವ ಬದಲು ಪ್ರಕಾಶಕ ಎಂದು ಏಕೆ ಪರಿಗಣಿಸಬಾರದು ಎಂದು ಕೇಂದ್ರವು ತನ್ನ ನೋಟಿಸ್‌ನಲ್ಲಿ ಕೇಳಿದೆ.

ವಿಕಿಪೀಡಿಯಾ ತನ್ನನ್ನು ಉಚಿತ ಆನ್‌ಲೈನ್ ವಿಶ್ವಕೋಶವಾಗಿ ಪ್ರಸ್ತುತಪಡಿಸುತ್ತದೆ, ಬಳಕೆದಾರರು ವಿವಿಧ ವಿಷಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ಪುಟಗಳನ್ನು ರಚಿಸಲು ಮತ್ತು ತಿದ್ದಲು ಅವಕಾಶ ನೀಡುತ್ತದೆ. ಹೀಗೆ ವ್ಯಾಪಕವಾಗಿ ಬಳಸಲಾಗುವ ವೇದಿಕೆಯು ಪ್ರಸ್ತುತ ಭಾರತದಲ್ಲಿ ಕಾನೂನು ಹೋರಾಟಗಳಲ್ಲಿ ಸಿಕ್ಕಿಹಾಕಿಕೊಂಡಿದೆ, ತಪ್ಪಾದ ಮತ್ತು ಮಾನಹಾನಿಕರ ವಿಷಯವನ್ನು ವಿಕಿಪೀಡಿಯಾ ಜನತೆಗೆ ನೀಡುತ್ತಿದೆ ಎಂದು ಆರೋಪಗಳನ್ನು ಎದುರಿಸುತ್ತಿದೆ.

ವಿಕಿಪೀಡಿಯಾದ ಮುಕ್ತ ತಿದ್ದುವಿಕೆ ಗುಣ 'ಅಪಾಯಕಾರಿ' ಎಂದು ಟೀಕಿಸಿದ ದೆಹಲಿ ಹೈಕೋರ್ಟ್ ಸೆಪ್ಟೆಂಬರ್‌ನಲ್ಲಿ ನೀಡಿದ ತೀರ್ಪನ್ನು ಅನುಸರಿಸಿ ಈ ಸೂಚನೆ ನೀಡಲಾಗಿದೆ. ವೇದಿಕೆಯ ವಿರುದ್ಧ ಸುದ್ದಿ ಸಂಸ್ಥೆಯೊಂದು ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ಸಂದರ್ಭದಲ್ಲಿ ನ್ಯಾಯಾಲಯದ ಈ ಹೇಳಿಕೆ ಬಂದಿದೆ, ಅಲ್ಲಿ ನ್ಯಾಯಾಧೀಶರು 'ಯಾರಾದರೂ' ವಿಕಿಪೀಡಿಯಾ ಪುಟವನ್ನು ತಿದ್ದಬಹುದು. ಅನಿರ್ಬಂಧಿತ ತಿದ್ದುವಿಕೆ, ಸಂಪಾದನೆಗೆ ಸಂಬಂಧಿಸಿದ ಸಂಭಾವ್ಯ ಅಪಾಯಗಳನ್ನು ನ್ಯಾಯಾಲಯವು ಉಲ್ಲೇಖಿಸಿದೆ.

ನ್ಯಾಯಾಲಯದ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, ವಿಕಿಪೀಡಿಯದ ಕಾನೂನು ಪ್ರತಿನಿಧಿಗಳು, ವಿಷಯವನ್ನು ರಚಿಸುವಾಗ ಅಥವಾ ನವೀಕರಿಸುವಾಗ ಕಾನೂನು ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು ಎಂದು ಭರವಸೆ ನೀಡಿದರು. ಬಳಕೆದಾರರ ಕೊಡುಗೆಗಳನ್ನು ನಿಯಂತ್ರಿಸಲು ಮತ್ತು ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಪ್ಲಾಟ್‌ಫಾರ್ಮ್ ನೀತಿಗಳನ್ನು ಸ್ಥಾಪಿಸಿದೆ ಎಂದು ಉಲ್ಲೇಖಿಸಿದೆ.

2000 ದಶಕದ ಆರಂಭದಲ್ಲಿ ಪ್ರಾರಂಭವಾದ ವಿಕಿಪೀಡಿಯಾವು ಜನತೆಗೆ ಜ್ಞಾನ ಮತ್ತು ಮಾಹಿತಿಯನ್ನು ಸುಲಭವಾಗಿ ನೀಡಲು ವಿನ್ಯಾಸಗೊಳಿಸಲಾಗಿದೆ. ಕಳೆದ ಎರಡು ದಶಕಗಳಲ್ಲಿ, ವೇದಿಕೆಯು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಇಂದು, ವಿಕಿಪೀಡಿಯಾವು 300 ಕ್ಕೂ ಹೆಚ್ಚು ಭಾಷೆಗಳಲ್ಲಿ 56 ಮಿಲಿಯನ್ ಲೇಖನಗಳನ್ನು ಹೊಂದಿದೆ, ಅದರ ಸರಿಸುಮಾರು ಶೇಕಡಾ 89ರಷ್ಟು ವಿಷಯವು ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT