ಸಂಸತ್ತು  online desk
ದೇಶ

ಲಾಭದಾಯಕ ಹುದ್ದೆ ಹೊಂದಿರುವ ಸಂಸದರ ಅನರ್ಹತೆಗೆ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಚಿಂತನೆ

ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ವಿಭಾಗ 16ನೇ ಲೋಕಸಭೆಯಲ್ಲಿ ಕಲ್ರಾಜ್ ಮಿಶ್ರಾ ನೇತೃತ್ವದ ಲಾಭದ ಕಚೇರಿಗಳ ಜಂಟಿ ಸಮಿತಿ (ಜೆಸಿಒಪಿ) ಮಾಡಿದ ಶಿಫಾರಸುಗಳ ಆಧಾರದಲ್ಲಿ 'ಸಂಸತ್ತು (ಅನರ್ಹತೆ ತಡೆಗಟ್ಟುವಿಕೆ) ಮಸೂದೆ, 2024' ಕರಡನ್ನು ಸಿದ್ಧಪಡಿಸಿದೆ.

ನವದೆಹಲಿ: ಲಾಭದಾಯಕ ಹುದ್ದೆ ಹೊಂದಿರುವ ಸಂಸದರನ್ನು ಅನರ್ಹಗೊಳಿಸುವುದಕ್ಕೆ ಕಾನೂನು ಜಾರಿಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

65 ವರ್ಷಗಳಷ್ಟು ಹಳೆಯದಾದ ಕಾನೂನನ್ನು ರದ್ದುಪಡಿಸುವ ಮೂಲಕ ಲಾಭದಾಯಕ ಹುದ್ದೆ ಹೊಂದಿರುವ ಸಂಸದರನ್ನು ಅನರ್ಹಗೊಳಿಸುವ ಹೊಸ ಕಾನೂನು ರಚನೆಯಾಗಲಿದೆ.

ಕೇಂದ್ರ ಕಾನೂನು ಸಚಿವಾಲಯದ ಶಾಸಕಾಂಗ ವಿಭಾಗ 16ನೇ ಲೋಕಸಭೆಯಲ್ಲಿ ಕಲ್ರಾಜ್ ಮಿಶ್ರಾ ನೇತೃತ್ವದ ಲಾಭದ ಕಚೇರಿಗಳ ಜಂಟಿ ಸಮಿತಿ (ಜೆಸಿಒಪಿ) ಮಾಡಿದ ಶಿಫಾರಸುಗಳ ಆಧಾರದಲ್ಲಿ 'ಸಂಸತ್ತು (ಅನರ್ಹತೆ ತಡೆಗಟ್ಟುವಿಕೆ) ಮಸೂದೆ, 2024' ಕರಡನ್ನು ಸಿದ್ಧಪಡಿಸಿದೆ.

ಪ್ರಸ್ತಾವಿತ ಮಸೂದೆ ಅಸ್ತಿತ್ವದಲ್ಲಿರುವ ಸಂಸತ್ತಿನ (ಅನರ್ಹತೆ ತಡೆಗಟ್ಟುವಿಕೆ) ಕಾಯಿದೆ, 1959ರ ವಿಭಾಗ 3ನ್ನು ತರ್ಕಬದ್ಧಗೊಳಿಸಲು ಮತ್ತು ಪಟ್ಟಿಯಲ್ಲಿ ನಮೂದಿಸಲಾದ ಋಣಾತ್ಮಕ ಹುದ್ದೆಗಳನ್ನು ತೆಗೆದುಹಾಕಲು ಉದ್ದೇಶಿಸುತ್ತದೆ. ಅದನ್ನು ಹೊಂದಿರುವವರು ಅನರ್ಹತೆಗೆ ಒಳಗಾಗಲಿದ್ದಾರೆ.

ಕರಡು ಮಸೂದೆಯು ಕೆಲವು ಪ್ರಕರಣಗಳಲ್ಲಿ ಅನರ್ಹತೆಯ "ತಾತ್ಕಾಲಿಕ ಅಮಾನತ್ ಗೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಕಾನೂನಿನ ಸೆಕ್ಷನ್ 4 ಅನ್ನು ಬಿಟ್ಟುಬಿಡಲು ಪ್ರಸ್ತಾಪಿಸುತ್ತದೆ ಮತ್ತು ಅದರ ಸ್ಥಳದಲ್ಲಿ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಶೆಡ್ಯೂಲ್ ನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

16 ನೇ ಲೋಕಸಭೆಯ ಸಮಯದಲ್ಲಿ, JCOP ಕಾನೂನಿನ ಸಮಗ್ರ ಪರಿಶೀಲನೆಯನ್ನು ಕೈಗೊಂಡು ವರದಿಯನ್ನು ಸಲ್ಲಿಸಿದೆ. ಪ್ರಸ್ತುತ ಕಾನೂನಿನಲ್ಲಿರುವ ಬಳಕೆಯಲ್ಲಿಲ್ಲದ ನಮೂದುಗಳನ್ನು ಕಾನೂನು ಸಚಿವಾಲಯ ಗಣನೆಗೆ ತೆಗೆದುಕೊಳ್ಳುವ ಅಗತ್ಯವನ್ನು ಸಮಿತಿಯು ಒತ್ತಿಹೇಳಿತು. 'ಲಾಭದ ಹುದ್ದೆಗಳು' ಎಂಬ ಪದದ "ಸಮಗ್ರ ವ್ಯಾಖ್ಯಾನ" ಹೊಂದಿರುವುದು ಅದರ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT