ಕಾನೂನು ಸುವ್ಯವಸ್ಥೆ ಕಪಾಡಲು ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿ online desk
ದೇಶ

ಸಂಭಾಲಾ ಹಿಂಸಾಚಾರ: ಉತ್ಖನನದ ವದಂತಿಯಿಂದ ಹಿಂಸಾಚಾರ; ಎಸ್ ಡಿಎಂ, ಸಿಒ ಇದಕ್ಕೆ ಹೊಣೆ- ಮಸೀದಿ ನಿರ್ವಹಣೆ ಸಮಿತಿ

ಹಿಂಸಾಚಾರದಲ್ಲಿ ಈವರೆಗೂ ನಾಲ್ವರು ಮೃತಪಟ್ಟಿದ್ದಾರೆ. ಶಾಹಿ ಜಾಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಜಾಫರ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸಭೆ ಮುಗಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಸಂಭಾಲಾ: ಸಂಭಾಲ್‌ನಲ್ಲಿ ಉಂಟಾಗಿರುವ ಹಿಂಸಾಚಾರದ ಬಗ್ಗೆ ಜಾಮಾ ಮಸೀದಿಯ ಆಡಳಿತ ಸಮಿತಿ ಪ್ರತಿಕ್ರಿಯೆ ನೀಡಿದ್ದು, ಹಿಂಸಾಚಾರಕ್ಕೆ ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸರೇ ಕಾರಣ ಎಂದು ದೂಷಿಸಿದೆ.

ಹಿಂಸಾಚಾರದಲ್ಲಿ ಈವರೆಗೂ ನಾಲ್ವರು ಮೃತಪಟ್ಟಿದ್ದಾರೆ. ಶಾಹಿ ಜಾಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಜಾಫರ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದು, ಸಭೆ ಮುಗಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

"ಮಸೀದಿಯ ಇತ್ತೀಚಿನ ಸಮೀಕ್ಷೆಯನ್ನು ನ್ಯಾಯಾಲಯದ ಆದೇಶದ ಅಡಿಯಲ್ಲಿ ನಡೆಸಲಾಗಿಲ್ಲ ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ನಡೆಸಲಾಗಿದೆ. ಈ ಸಮೀಕ್ಷೆಯನ್ನು ಕಾನೂನುಬಾಹಿರವಾಗಿ ನಡೆಸಲಾಗಿದೆ" ಎಂದು ಅಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

"ಈ ಘಟನೆಯಲ್ಲಿ ಸಂಭಾಲ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಂದನಾ ಮಿಶ್ರಾ ಮತ್ತು ಸರ್ಕಲ್ ಆಫೀಸರ್ ಅನುಜ್ ಕುಮಾರ್ ತಪ್ಪಿತಸ್ಥ ಅಧಿಕಾರಿಗಳಾಗಿದ್ದಾರೆ" ಎಂದು ಅವರು ಹೇಳಿದರು.

ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧೀಕ್ಷಕರು ಕೋಲಿನಿಂದ ಆಳವನ್ನು ಅಳೆಯಲು ಸೂಚಿಸಿದ್ದರೂ ಸಹ, ಶುಚಿಗೊಳಿಸುವ ತೊಟ್ಟಿಯಿಂದ (ವಾಜುಖಾನಾ) ನೀರನ್ನು ಹರಿಸುವಂತೆ ಎಸ್‌ಡಿಎಂ ಒತ್ತಾಯಿಸಿದರು ಎಂದು ಅಲಿ ಆರೋಪಿಸಿದರು.

"ನೀರನ್ನು ಹರಿಸುವುದರಿಂದ ಹೊರಗೆ ಜಮಾಯಿಸಿದವರಲ್ಲಿ ಗೊಂದಲ ಉಂಟಾಯಿತು, ಅವರು ಉತ್ಖನನ ನಡೆಯುತ್ತಿದೆ ಎಂದು ನಂಬಿದರು ಇದು ಗುಂಪನ್ನು ಕೆರಳಿಸಿತು" ಎಂದು ಅಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT