ಜಲಾಲಬಾದ್ ಗೂಳಿ ದಾಳಿ 
ದೇಶ

Video: ಉತ್ತರ ಪ್ರದೇಶದಲ್ಲಿ 'ಗೂಳಿ' ಅಟ್ಟಹಾಸ; 15 ಮಂದಿಗೆ ಗಾಯ, 3 ಗಂಟೆ ಕಾರ್ಯಾಚರಣೆ ಬಳಿಕ ಸೆರೆ!

ಗೂಳಿ ದಾಳಿಯಿಂದ 15 ಮಂದಿ ಗಾಯಗೊಂಡಿದ್ದು, ಓರ್ವ ವ್ಯಕ್ತಿಯ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಲಖನೌ: ಬೀದಿ ಗೂಳಿಯೊಂದು ಸರಣಿ ದಾಳಿ ಮಾಡಿದ್ದು, ಪರಿಣಾಮ ಬರೊಬ್ಬರಿ 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಜಲಾಲಬಾದ್ ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ದಾರಿ ತಪ್ಪಿದ ಗೂಳಿಯೊಂದು ರಸ್ತೆಯಲ್ಲಿದ್ದ ಜನರ ಮೇಲೆ ದಾಳಿ ಮಾಡಿದ್ದು, ತನ್ನ ಕೊಂಬುಗಳಿಂದ ಮನಸೋ ಇಚ್ಛೆ ದಾಳಿ ಮಾಡಿದೆ.

ನೋಡ ನೋಡುತ್ತಲೇ ದಾರಿಹೋಕರ ಮೇಲೆ ದಾಳಿ ಮಾಡಿದ ಗೂಳಿ ತನ್ನ ಕೊಂಬಿನ ಮೂಲಕ ಜನರನ್ನು ತಿವಿದು ಅವರನ್ನು ಎತ್ತೆಸೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಗೂಳಿ ದಾಳಿಯಿಂದ 15 ಮಂದಿ ಗಾಯಗೊಂಡಿದ್ದು, ಓರ್ವ ವ್ಯಕ್ತಿಯ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಗೂಳಿ ದಾಳಿಗೆ ತುತ್ತಾದ ಹಲವರ ಸೊಂಟ, ಬೆನ್ನು ಮತ್ತು ಹೊಟ್ಟೆಗೆ ಗೂಳಿ ಗುದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇನ್ನು ಗೂಳಿ ದಾಳಿ ಕುರಿತು ವಿಚಾರ ತಿಳಿದ ಕೂಡಲೇ ಗೂಳಿಯನ್ನು ಹಿಡಿಯಲು ಹೊರಟ ಜಲಾಲಾಬಾದ್ ಮುನ್ಸಿಪಲ್ ಕೌನ್ಸಿಲ್ ಗೂ ಗೂಳಿ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿತ್ತು. ಗೂಳಿ ಹಿಡಿಯಲು ಸುಮಾರು 25ಕ್ಕೂ ಅಧಿಕ ಸಿಬ್ಬಂದಿ ಬರೊಬ್ಬರಿ 3 ಗಂಟೆಗಳ ಕಾಲ ಹರಸಾಹಸ ಪಟ್ಟರು. ಆದರೆ ಅವರಿಂದ ಬಚಾವ್ ಆದ ಗೂಳಿ ಮತ್ತೆ ದಾರಿಯಲ್ಲಿ ಸಿಕ್ಕವರ ಮೇಲೆ ದಾಳಿ ಮಾಡಿದೆ.

ಬಳಿಕ ಸತತ 3 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕೊನಗೂ ಗೂಳಿಯನ್ನು ಹಿಡಿಯುವಲ್ಲಿ ಕಾರ್ಪೋರೇಷನ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಗೂಳಿಯನ್ನು ಮುನ್ಸಿಪಲ್ ಕಚೇರಿ ಆವರಣದಲ್ಲಿ ಕಟ್ಟಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವೈದ್ಯರ ಪರಿಶೀಲನೆ ಬಳಿಕ ಗೂಳಿಯನ್ನು ರವಾನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಗೂಳಿ ದಾಳಿ ಇದೇ ಮೊದಲೇನಲ್ಲ. ಈ ತಿಂಗಳ ಆರಂಭದಲ್ಲಿ ಗ್ರೇಟರ್ ವೆಸ್ಟ್‌ನ ಸೆಕ್ಟರ್ 16-ಬಿ, ಸೂಪರ್‌ಟೆಕ್ ಆಕ್ಸ್‌ಫರ್ಡ್ ಸ್ಕ್ವೇರ್ ಬಳಿ ಗೂಳಿಯೊಂದು ಬೈಕ್‌ ಸವಾರನ ಮೇಲೆ ದಾಳಿ ಗಾಯಗೊಳಿಸಿತ್ತು. ಬೈಕ್ ಸವಾರ ತನ್ನ ಪಾಡಿಗೆ ಹೋಗುತ್ತಿದ್ದರೂ ಗೂಳಿಯೊಂದು ಆತನನ್ನು ನೋಡಿ ಏಕಾಏಕಿ ಆತನ ಮೇಲೆರಗಿತ್ತು.

ಈ ವೇಳೆ ಬೈಕ್ ಸವಾರ ವಾಹನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದ. ಸುತ್ತಮುತ್ತ ನಿಂತಿದ್ದ ಜನರು ರಕ್ಷಣೆಗೆ ಬಂದು ಆ ವ್ಯಕ್ತಿಯನ್ನು ರಕ್ಷಿಸಿದರು. ಅದೃಷ್ಟವಶಾತ್, ವ್ಯಕ್ತಿಗೆ ತೀವ್ರ ಗಾಯಗಳಾಗಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?