ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್  
ದೇಶ

ವಕೀಲರ ವರ್ತನೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಕಿಡಿ

ಕೆಲವೊಮ್ಮೆ, ವಕೀಲರು ತಮ್ಮ ಮೊಕದ್ದಮೆಗಳ ತುರ್ತು ವಿಚಾರಣೆಗಾಗಿ ಪಟ್ಟಿಮಾಡುವ ಪ್ರಯತ್ನದಲ್ಲಿ, ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಬೇರೆ ಬೇರೆ ದಿನಾಂಕಗಳಲ್ಲಿ ಅದೇ ಪ್ರಕರಣಗಳನ್ನು ಮತ್ತೆ ಮತ್ತೆ ಉಲ್ಲೇಖಿಸಲು ತಮ್ಮ ವಕೀಲರನ್ನು ಬದಲಾಯಿಸುತ್ತಾರೆ.

ನವದೆಹಲಿ: ವಿವಿಧ ವಕೀಲರು ತುರ್ತು ವಿಚಾರಣೆಗಾಗಿ ಪ್ರಕರಣವನ್ನು ಪದೇ ಪದೇ ಉಲ್ಲೇಖಿಸುವ ಅಭ್ಯಾಸಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅವರ "ವೈಯಕ್ತಿಕ ವಿಶ್ವಾಸಾರ್ಹತೆ" ಯನ್ನು ಪಣಕ್ಕಿಟ್ಟಂತಾಗಿದ್ದು ನ್ಯಾಯಾಲಯ ಇದನ್ನು ಅನುಮತಿಸುವುದಿಲ್ಲ ಎಂದು ಹೇಳಿದರು.

ಕೆಲವೊಮ್ಮೆ, ವಕೀಲರು ತಮ್ಮ ಮೊಕದ್ದಮೆಗಳ ತುರ್ತು ವಿಚಾರಣೆಗಾಗಿ ಪಟ್ಟಿಮಾಡುವ ಪ್ರಯತ್ನದಲ್ಲಿ, ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಬೇರೆ ಬೇರೆ ದಿನಾಂಕಗಳಲ್ಲಿ ಅದೇ ಪ್ರಕರಣಗಳನ್ನು ಮತ್ತೆ ಮತ್ತೆ ಉಲ್ಲೇಖಿಸಲು ತಮ್ಮ ವಕೀಲರನ್ನು ಬದಲಾಯಿಸುತ್ತಾರೆ, ಇದೊಂದು ಹೊಸ ಪದ್ಧತಿಯಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ವಿಭಿನ್ನ ಸಲಹೆಗಳಿಂದ ಪದೇ ಪದೇ ಪ್ರಸ್ತಾಪಿಸುವ ಈ ಅಭ್ಯಾಸವನ್ನು ನಿಲ್ಲಿಸಿ. ನೀವೆಲ್ಲರೂ ಒಂದು ಅವಕಾಶವನ್ನು ಪಡೆಯಲು ಪ್ರಯತ್ನಿಸುತ್ತಿದ್ದೀರಿ. ಮುಖ್ಯ ನ್ಯಾಯಮೂರ್ತಿಯಾಗಿ ನನಗೆ ಯಾವುದೇ ಸಣ್ಣ ವಿವೇಚನೆ ಇದ್ದರೂ ನಿಮ್ಮ ಪರವಾಗಿ ಎಂದಿಗೂ ಬಳಸುವುದಿಲ್ಲ, ನೀವು ನ್ಯಾಯಾಂಗ ಮೇಲೆ ಸವಾರಿ ಮಾಡಲು ಬಯಸುತ್ತೀರಿ ಎಂದು ಮಂಗಳವಾರ ವಕೀಲರೊಬ್ಬರ ಉಲ್ಲೇಖವನ್ನು ಆಲಿಸಿದ ನಂತರ ಸಿಜೆಐ ಹೇಳಿದರು. ತುರ್ತಾಗಿ ಪಟ್ಟಿ ಮಾಡಬೇಕಾದ ಗಣಿ ಗುತ್ತಿಗೆಯ ಲೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ವಕೀಲರೊಬ್ಬರು ಪ್ರಸ್ತಾಪಿಸಿದಾಗ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಪದೇ ಪದೇ ಪ್ರಕರಣಗಳನ್ನು ಪ್ರಸ್ತಾಪಿಸುವ ಪರಿಪಾಠವನ್ನು ನಿಲ್ಲಿಸುವಂತೆ ವಕೀಲರನ್ನು ಒತ್ತಾಯಿಸಿದ ಅವರು, "ನೀವೆಲ್ಲರೂ ಅವಕಾಶ ಪಡೆಯಲು ಪ್ರಯತ್ನಿಸುತ್ತಿದ್ದೀರಿ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT