ರತನ್ ಟಾಟಾ-ಪ್ರಧಾನಿ ಮೋದಿ 
ದೇಶ

Ratan Tata ವಿಧಿವಶ: 'ತುಂಬಲಾರದ ನಷ್ಟ'; Tata Group, ಪ್ರಧಾನಿ ಮೋದಿ ಸಂತಾಪ!

ಟಾಟಾ ಗ್ರೂಪ್ ಮುಖ್ಯಸ್ಥ ಎನ್.ಚಂದ್ರಶೇಖರನ್ ಅವರು, 'ತುಂಬಾ ನೋವಿನಿಂದ ನಾವು ರತನ್ ಟಾಟಾ ಅವರಿಗೆ ವಿದಾಯ ಹೇಳಬೇಕಿದೆ. ಇದು ನಮಗೆ 'ತುಂಬಲಾರದ ನಷ್ಟ'ವಾಗಿದ್ದು, ರತನ್ ಟಾಟಾ ಅವರು, ಕೇವಲ ಟಾಟಾ ಸಮೂಹವನ್ನೇಷ್ಟೇ ಅಲ್ಲ.. ದೇಶಕ್ಕಾಗಿ ಅಳೆಯಲಾಗದ ಕೊಡುಗೆಗಳನ್ನು ರೂಪಿಸಿದ ನಿಜವಾದ ಅಸಾಮಾನ್ಯ ನಾಯಕ ಎಂದಿದ್ದಾರೆ.

ಮುಂಬೈ: ಇಂದು ವಿಧಿವಶರಾದ ರತನ್ ಟಾಟಾ ನಿಧನಕ್ಕೆ ಅವರ ಟಾಟಾ ಗ್ರೂಪ್ ಮತ್ತು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಇದು 'ತುಂಬಲಾರದ ನಷ್ಟ' ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಟಾಟಾ ಗ್ರೂಪ್ ಮುಖ್ಯಸ್ಥ ಎನ್.ಚಂದ್ರಶೇಖರನ್ ಅವರು, 'ತುಂಬಾ ನೋವಿನಿಂದ ನಾವು ರತನ್ ಟಾಟಾ ಅವರಿಗೆ ವಿದಾಯ ಹೇಳಬೇಕಿದೆ. ಇದು ನಮಗೆ 'ತುಂಬಲಾರದ ನಷ್ಟ'ವಾಗಿದ್ದು, ರತನ್ ಟಾಟಾ ಅವರು, ಕೇವಲ ಟಾಟಾ ಸಮೂಹವನ್ನೇಷ್ಟೇ ಅಲ್ಲ.. ದೇಶಕ್ಕಾಗಿ ಅಳೆಯಲಾಗದ ಕೊಡುಗೆಗಳನ್ನು ರೂಪಿಸಿದ ನಿಜವಾದ ಅಸಾಮಾನ್ಯ ನಾಯಕ ಎಂದಿದ್ದಾರೆ.

ಅಂತೆಯೇ ರತನ್ ಟಾಟಾ ಅವರು ಟಾಟಾ ಗ್ರೂಪ್ ಗೆ ಅಧ್ಯಕ್ಷರಿಗಿಂತ ಹೆಚ್ಚು. ನನಗೆ, ಅವರು ಓರ್ವ ಮಾರ್ಗದರ್ಶಕ, ಮಾರ್ಗದರ್ಶಿ ಮತ್ತು ಸ್ನೇಹಿತ. ಅವರು ತಮ್ಮ ಉದಾತ್ತ ಕೆಲಸಗಳ ಮೂಲಕ ನನ್ನಂತಹ ಸಾಕಷ್ಟು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಅಡಿಯಲ್ಲಿ ಟಾಟಾ ಗ್ರೂಪ್‌ ಒಂದು ಅಚಲ, ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯ ಮಾರ್ಗದಲ್ಲಿ ಸಾಗಿದೆ.

ಟಾಟಾ ಅವರು ಲೋಕೋಪಕಾರ ಮತ್ತು ಸಮಾಜದ ಅಭಿವೃದ್ಧಿಗೆ ಸಮರ್ಪಣೆ ಹೊಂದಿದ್ದರು. ಅವರ ಮಹತ್ಕಾರ್ಯಗಳು ಲಕ್ಷಾಂತರ ಜನರ ಜೀವನವನ್ನು ಮುಟ್ಟಿತು. ಶಿಕ್ಷಣದಿಂದ ಆರೋಗ್ಯದವರೆಗೆ ಅವರ ಉಪಕ್ರಮಗಳು ಮುಂದಿನ ಪೀಳಿಗೆಗೆ ಪ್ರಯೋಜನವಾಗುವಂತಹ ಆಳವಾದ ಬೇರೂರಿರುವ ಗುರುತಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ರತನ್ ಟಾಟಾ ನಿಧನಕ್ಕೆ ಪ್ರಧಾನಿ ಮೋದಿ ಕೂಡ ಸಂತಾಪ ಸೂಚಿಸಿದ್ದು, 'ರತನ್ ಟಾಟಾ ಒಬ್ಬ ದಾರ್ಶನಿಕ ವ್ಯಾಪಾರ ನಾಯಕ. ಸಹಾನುಭೂತಿಯ ಆತ್ಮ ಮತ್ತು ಅಸಾಧಾರಣ ಮನುಷ್ಯ. ಅವರು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಕ್ಕೆ ಸ್ಥಿರ ನಾಯಕತ್ವವನ್ನು ಒದಗಿಸಿದರು. ಅದೇ ಸಮಯದಲ್ಲಿ, ಅವರ ಕೊಡುಗೆಯು ಬೋರ್ಡ್ ರೂಮ್ ಅನ್ನು ಮೀರಿದೆ. ಅವರ ನಮ್ರತೆ, ದಯೆ ಮತ್ತು ನಮ್ಮ ಸಮಾಜವನ್ನು ಉತ್ತಮಗೊಳಿಸುವ ಅಚಲವಾದ ಬದ್ಧತೆಗೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

SCROLL FOR NEXT