ಸಿಜೆಐ ನಿವಾಸದಲ್ಲಿ ಗಣೇಶ ಚತುರ್ಥಿ ಪೂಜೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ  online desk
ದೇಶ

ಮೋದಿ ಜೊತೆ ಗಣೇಶ ಪೂಜೆ: ವಿವಾದದ ಬಗ್ಗೆ ಮೌನ ಮುರಿದ ಸಿಜೆಐ ಚಂದ್ರಚೂಡ್

ವಿವಿಧ ರಾಜ್ಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ವಾಡಿಕೆ ಎಂದು ಸಿಜೆಐ ಹೇಳಿದ್ದಾರೆ.

ನವದೆಹಲಿ: ನಿವೃತ್ತಿಯ ಸನಿಹದಲ್ಲಿರುವ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಜೊತೆ ಗಣೇಶ ಚತುರ್ಥಿ ದಿನದಂದು ಪೂಜೆಯಲ್ಲಿ ಪಾಲ್ಗೊಂಡಿದ್ದ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

"ಇಂತಹ ಸಭೆಗಳು ವಾಡಿಕೆ" ಎಂದು ಹೇಳಿರುವ ಮುಖ್ಯ ನ್ಯಾಯಾಧೀಶರು, "ಯಾವುದೇ ಚರ್ಚೆಯ ವ್ಯಾಪ್ತಿಯಿಂದ ನ್ಯಾಯಾಂಗ ವಿಷಯಗಳನ್ನು ದೃಢವಾಗಿ ಇರಿಸಿಕೊಳ್ಳಲು ಸಾಂವಿಧಾನಿಕ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಕಾರ್ಯಾಂಗದ ಮುಖ್ಯಸ್ಥರಲ್ಲಿ ಸಾಕಷ್ಟು ಪ್ರಬುದ್ಧತೆ ಇದೆ" ಎಂದು ಹೇಳಿದ್ದಾರೆ.

ಮುಂಬೈನಲ್ಲಿ ಭಾನುವಾರ ನಡೆದ ಲೋಕಸತ್ತಾ ಉಪನ್ಯಾಸ ಮಾಲಿಕೆಯಲ್ಲಿ ಸಿಜೆಐ ಮಾತನಾಡುತ್ತಿದ್ದರು.

ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ತೊಡಗಿಕೊಳ್ಳುವಿಕೆಗಳ ಸಮಯದಲ್ಲಿ ಯಾವುದೇ ಒಪ್ಪಂದಗಳನ್ನು ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿಜೆಐ, ಸಭೆಗಳು ಕೇವಲ ನ್ಯಾಯಾಂಗಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸಮಸ್ಯೆಗಳನ್ನು ಚರ್ಚಿಸುವುದರ ಮೇಲೆ ಕೇಂದ್ರೀಕರಿಸಿದೆಯೇ ಹೊರತು ನ್ಯಾಯಾಂಗದ ನಿರ್ಧಾರಗಳಿಗೆ ಸಂಬಂಧಪಟ್ಟಿಲ್ಲ ಎಂದು ಸಿಜೆಐ ಹೇಳ್ದಿದಾರೆ.

"ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯಗಳು ನಮಗೆ ತಿಳಿದಿವೆ, ಮತ್ತು ರಾಜಕೀಯ ಕಾರ್ಯಾಂಗದಲ್ಲಿರುವವರ ಕರ್ತವ್ಯಗಳು ಅವರಿಗೆ ತಿಳಿದಿದೆ. ಯಾವುದೇ ನ್ಯಾಯಾಧೀಶರು, ಕನಿಷ್ಠ ಭಾರತದ ಎಲ್ಲಾ ಮುಖ್ಯ ನ್ಯಾಯಮೂರ್ತಿಗಳು ಅಥವಾ ಮುಖ್ಯ ನ್ಯಾಯಮೂರ್ತಿಗಳು, ಯಾವುದೇ ನ್ಯಾಯಾಧೀಶರು, ನಿಜವಾದ ಅಥವಾ ಗ್ರಹಿಸಿದ ಸಣ್ಣ ಬೆದರಿಕೆಗೆ ಬಗ್ಗುವುದಿಲ್ಲ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಕ್ಕೆ ಬಿಡುವುದಿಲ್ಲ ಎಂದು ಸಿಜೆಐ ಹೇಳಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ವಾಡಿಕೆ ಎಂದು ಸಿಜೆಐ ಹೇಳಿದರು. "ನ್ಯಾಯಾಧೀಶರು ಎಂದಿಗೂ ನ್ಯಾಯಾಂಗ ಚರ್ಚೆಗೆ ಭೇಟಿಯಾಗುವುದಿಲ್ಲ. ನಮ್ಮ ರಾಜಕೀಯ ವ್ಯವಸ್ಥೆಯ ಪರಿಪಕ್ವತೆಯು ರಾಜಕೀಯ ವರ್ಗದೊಳಗೂ ನ್ಯಾಯಾಂಗದ ಬಗ್ಗೆ ಹೆಚ್ಚಿನ ಗೌರವವಿದೆ ಎಂಬ ಅಂಶದಲ್ಲಿದೆ ಎಂದು ಸಿಜೆಐ ತಿಳಿಸಿದ್ದಾರೆ.

ಹೊಸ ನ್ಯಾಯಾಲಯದ ಕಟ್ಟಡಗಳು ಮತ್ತು ನ್ಯಾಯಾಧೀಶರಿಗೆ ವಸತಿ ಸೇರಿದಂತೆ ನ್ಯಾಯಾಂಗ ಮೂಲಸೌಕರ್ಯವನ್ನು ಪರಿಹರಿಸುವ ಪ್ರಾಮುಖ್ಯತೆಯನ್ನು ಸೂಚಿಸಿರುವ ಸಿಜೆಐ, ಇದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಮತ್ತು ಮುಖ್ಯಮಂತ್ರಿಗಳ ನಡುವೆ ಸಭೆ ನಡೆಯಬೇಕು ಎಂದು ಅವರು ವಿವಿಧ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.

ನ್ಯಾಯಾಂಗ ಮತ್ತು ಸರ್ಕಾರದ ನಡುವೆ ದೃಢವಾದ ಸಂವಾದವನ್ನು ನಿರ್ವಹಿಸಲು ಈ ಸಭೆಗಳು ಅತ್ಯಗತ್ಯ ಎಂದು ಸಿಜೆಐ ಒತ್ತಿ ಹೇಳಿದ್ದಾರೆ.

"ಮೂರೂ ಶಾಖೆಗಳ ಕೆಲಸದ್ದು ಒಂದೇ ಗುರಿಗೆ ಸಮರ್ಪಿತವಾಗಿದೆ ಅದು ರಾಷ್ಟ್ರದ ಸುಧಾರಣೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಈ ಪ್ರಕ್ರಿಯೆಯನ್ನು ನಂಬುವವರೆಗೆ, ಸಂಭಾಷಣೆಯನ್ನು ಮುಂದುವರೆಸಬೇಕು ಎಂಬುದನ್ನು ನಾವು ಒಪ್ಪಿಕೊಳ್ಳಬೇಕು" ಎಂದು ಸಿಜೆಐ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

SCROLL FOR NEXT