ಶ್ರೀನಗರದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ online desk
ದೇಶ

ಇತಿಹಾಸದಲ್ಲೇ ಮೊದಲು: ಗಣೇಶ ವಿಸರ್ಜನೆ ಭಾಗವಾಗಿ ಲಾಲ್ ಚೌಕ್ ವರೆಗೆ ಅದ್ಧೂರಿ ಮೆರವಣಿಗೆ!

ಹರಿ ಸಿಂಗ್ ಹೈ ಸ್ಟ್ರೀಟ್ ನಿಂದ ಸಂಗೀತದ ಬ್ಯಾಂಡ್ ಗಳೊಂದಿಗೆ ಮೆರವಣಿಗೆ ಲಾಲ್ ಚೌಕ್ ನಲ್ಲಿರುವ ಐತಿಹಾಸಿಕ ಕ್ಲಾಕ್ ಟವರ್ ಗೆ ತಲುಪಿತು.

ಶ್ರೀನಗರ: ಶ್ರೀನಗರದಲ್ಲಿ ಇದೇ ಮೊದಲ ಬಾರಿಗೆ ಗಣೇಶ ವಿಸರ್ಜನೆಯ ಭಾಗವಾಗಿ ಗಣಪತಿ ಪ್ರತಿಮೆಯ ಮೆರವಣಿಗೆ ಅದ್ಧೂರಿಯಿಂದ ನಡೆದಿದೆ.

ಹರಿ ಸಿಂಗ್ ಹೈ ಸ್ಟ್ರೀಟ್ ನಿಂದ ಸಂಗೀತದ ಬ್ಯಾಂಡ್ ಗಳೊಂದಿಗೆ ಮೆರವಣಿಗೆ ಲಾಲ್ ಚೌಕ್ ನಲ್ಲಿರುವ ಐತಿಹಾಸಿಕ ಕ್ಲಾಕ್ ಟವರ್ ಗೆ ತಲುಪಿತು.

ಭಕ್ತಾದಿಗಳು ನಂತರ ಹನುಮಾನ್ ಮಂದಿರದ ಬಳಿ ಝೇಲಂ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಿದರು. ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿದ್ದ ಭಕ್ತರು ಮೆರವಣಿಗೆಯಲ್ಲಿ ಡೋಲು, ತಾಳಗಳ ಬಾರಿಸುತ್ತಾ ಕುಣಿದು ಕುಪ್ಪಳಿಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಲ್ಕತ್ತಾ ನಿವಾಸಿ ಮಾಣಿಕ್ ಚತುರ್ದಾಸ್ ಮಾತನಾಡಿ, ಇಲ್ಲಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು, ನಾವು ಇಲ್ಲಿ ವ್ಯಾಪಾರ ಮಾಡುತ್ತೇವೆ. ಇಂದು ನಮ್ಮ ಮರಾಠಿ ಸಹೋದರರು ಗಣಪತಿ ನಿಮಜ್ಜನ ಮೆರವಣಿಗೆಯನ್ನು ಆಯೋಜಿಸಿದ್ದಾರೆ. ಈ ಮೆರವಣಿಗೆಯಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೋಯೆಲ್ ಟಾಟಾ ವಿರೋಧದ ನಡುವೆ ಟಾಟಾ ಸನ್ಸ್ ಅಧ್ಯಕ್ಷರಾಗಿ ಚಂದ್ರಶೇಖರನ್ ಮರುನೇಮಕ!

ನಾನೀಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೆ ಮಾತ್ರ ಗೊತ್ತು: ಮಾಜಿ CM ಸಿದ್ದರಾಮಯ್ಯ ಬೇಸರ

KPSC ಹಗರಣ: ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಕೊನೆಗೂ ಪ್ರತ್ಯಕ್ಷ; ಸಿಐಡಿ ವಿಚಾರಣೆಗೆ ಹಾಜರು

Ration Card e-KYC ಮಾಡಿಸಲು ಮುಗಿಬಿದ್ದ ಜನರಿಗೆ ಕೊನೆಗೂ ಸಿಕ್ತು ಬಿಗ್ ರಿಲೀಫ್! ಇ-ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ; ಹಾಗಾದ್ರೆ, ಕೊನೆಯ ದಿನಾಂಕ ಯಾವಾಗ?

ಇನ್ನೂ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ; ಒಟ್ಟು ಸಂಖ್ಯೆ 124ಕ್ಕೆ ಏರಿಕೆ